ಆ್ಯಪ್ನಗರ

ದೊಡ್ಡ ಸಾಹಸಕ್ಕೆ ಕೈಹಾಕಲಿರುವ ನಟಿ ಶೀತಲ್ ಶೆಟ್ಟಿ ಅಭಿನಯದ 'ಗಡಿಯಾರ' ಸಿನಿಮಾ ತಂಡ!

ಥಿಯೇಟರ್ ಆರಂಭವಾಗಿದ್ದರೂ ಕೂಡ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲು ಧೈರ್ಯ ಮಾಡುತ್ತಿಲ್ಲದ ಕಾರಣ ಸಿನಿಮಾ ತಂಡ ಚಿತ್ರ ರಿಲೀಸ್ ಮಾಡಲು ಹೆದರಿತ್ತು. ಆದರೆ ಈಗ ನಟಿ, ಬಿಗ್ ಬಾಸ್ ಸ್ಪರ್ಧಿ, ನಿರೂಪಕಿ ಶೀತಲ್ ಶೆಟ್ಟಿ ಅವರ ಸಿನಿಮಾ 'ಗಡಿಯಾರ' ಕೊರೊನಾ ವೈರಸ್ ನಂತರ ರಿಲೀಸ್ ಆಗುತ್ತಿದೆ.

Vijaya Karnataka Web 24 Nov 2020, 1:27 pm
ಕೋವಿಡ್ ನಂತರ ರಿಲೀಸಾಗ್ತಿರುವ 2ನೇ ಚಿತ್ರ 'ಗಡಿಯಾರ'. ಹೆಸರಿನಿಂದಲೇ ಕುತೂಹಲ ಕೆರಳಿಸುತ್ತಿರುವ ಹಾರರ್ ಥ್ರಿಲ್ಲರ್ ಚಿತ್ರ 'ಗಡಿಯಾರ' ನವೆಂಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ರಾಜಮನೆತನಗಳ ಇತಿಹಾಸವನ್ನು ನೆನಪಿಸುವಂಥ ವಿಷಯದ ಜೊತೆಗೆ, ಲವ್, ಕಾಮಿಡಿ, ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಸಾಹಸ ಸೇರಿ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳನ್ನು ನಿರ್ದೇಶಕ ಪ್ರಭಿಕ್ ಮೊಗವೀರ್ ಅವರು ಹೇಳಹೊರಟಿದ್ದಾರೆ.
Vijaya Karnataka Web sheetal shetty raj deepak shetty starrer gadiyara movie released
ದೊಡ್ಡ ಸಾಹಸಕ್ಕೆ ಕೈಹಾಕಲಿರುವ ನಟಿ ಶೀತಲ್ ಶೆಟ್ಟಿ ಅಭಿನಯದ 'ಗಡಿಯಾರ' ಸಿನಿಮಾ ತಂಡ!


ವಿಭಿನ್ನ ಶೈಲಿಯ ಕಥಾ ಹಂದರ ಹೊಂದಿರುವ 'ಗಡಿಯಾರ' ಕೋವಿಡ್ ನಂತರ ತೆರೆ ಕಾಣುತ್ತಿರುವ ದ್ವಿತೀಯ ಚಿತ್ರವಾಗಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಾಜ್‍ದೀಪಕ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಹಿಂದಿ, ತಮಿಳು, ತೆಲುಗು, ಮಳಯಾಳಂ ಭಾಷೆಗಳ ನಿರ್ಮಾಪಕರಿಂದ ಈ ಚಿತ್ರದ ಡಬ್ಬಿಂಗ್ ರೈಟ್ಸ್‌ಗೆ ಭಾರೀ ಬೇಡಿಕೆ ಬರುತ್ತಿದೆ.

ಪ್ರಭಿಕ್ ಮೊಗವೀರ್ ಈ ಚಿತ್ರಕ್ಕೆ ಹಣ ಕೂಡ ಹೂಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರದೇ. ದೀಪಿಕಾ ವಿನಯ್‍ಕುಮಾರ್ ರಾವ್ ಮತ್ತು ಲಾವಣ್ಯ ಲೀಲಾಮೋಹನ ಅವರ ಸಹಕಾರದೊಂದಿಗೆ ಆತ್ಮ ಸಿನಿಮಾಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಮಾಜಿ ಪೊಲೀಸ್ ಕಮಿಷನರ್ ಎಸ್‍ಪಿ. ಸಾಂಗ್ಲಿಯಾನ, ಮಲಯಾಳಂನ ಎಮ್.ಟಿ.ರಿಹಾಜ್ ಹಾಗೂ ಬಾಲಿವುಡ್‍ನ ಗೌರಿಶಂಕರ್ ಈ ಚಿತ್ರದ ವಿಶೇಷ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

Also Read-ಶೀತಲ್‌ ಶೆಟ್ಟಿ-ನಿರೂಪ್‌ ಕಾಂಬಿನೇಷನ್‌ನ 'ವಿಂಡೋ ಸೀಟ್‌'ಗೆ ಮೆಚ್ಚುಗೆ ಸೂಚಿಸಿದ ಕಿಚ್ಚ ಸುದೀಪ್‌!

ಸಿಎಂ ಬಿ.ಎಸ್.ಯಡಿಯೂರಪ್ಪ ಈ ಚಿತ್ರದ ಫಸ್ಟ್‌ಲು ಬಿಡುಗಡೆ ಮಾಡಿದ್ದರು. ಸಚಿವ ವಿ.ಸೋಮಣ್ಣ ಪೋಸ್ಟರ್ ಅನಾವರಣಗೊಳಿಸಿದ್ದರು. ಎಸ್.ಪಿ.ಸಾಂಗ್ಲಿಯಾನ ಮತ್ತು ಎಸ್‍ಪಿ. ಪ್ರಭಾಕರ್ ಬಾರ್ಕಿ ಶೀರ್ಷಿಕೆ ಬಿಡುಗಡೆ ಮಾಡಿದ್ದರು. ಈ ಚಿತ್ರದಲ್ಲಿ ಯಶ್‍ಶೆಟ್ಟಿ, ಸುಚೇಂದ್ರಪ್ರಸಾದ್, ಶರತ್ ಲೋಹಿತಾಶ್ವ, ಪ್ರದೀಪ್ ಪೂಜಾರಿ, ಗಣೇಶ್ ರಾವ್, ರಾಧಾ ರಾಮಚಂದ್ರ, ಮನ್‍ದೀಪ್‍ರಾರ್, ಪ್ರಣಯಮೂರ್ತಿ, ರಾಜ್‍ಮುನಿ, ಶ್ರೀನಿವಾಸ್, ವಿನಯ್‍ಕುಮಾರ್ ರಾವ್, ಲೀಲಾಮೋಹನ್, ಸಂತೋಷ್‍ಗೌಡ, ದೇವರಾಜ್, ಶರ್ಮಿತಾ ಶೆಟ್ಟಿ, ಸುರಕ್ಷಿ ತ್‍ಶೆಟ್ಟಿ, ಸ್ಪೂರ್ತಿ ಕರಡಿ, ದಬಾಂಗನಾ ಚೌದರಿ, ಪ್ರಿಯದರ್ಶಿನಿ ಗೌಡ, ಅರ್ಪಿತಾ ವೇಣೂರ್, ಶಿವಮೊಗ್ಗ ರಾಮಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ರಾಘವ್ ಸುಭಾಷ್ ಸಂಗೀತ ಈ ಚಿತ್ರಕ್ಕಿದೆ.

Also Read-ಈ ಬಾರಿಯ 'ಬಿಗ್‌ ಬಾಸ್' ಶೋ 100 ದಿನ ನಡೆಯೋದಿಲ್ಲ! ಈ ಸಲ ಆಗಲಿದೆ ಭಾರಿ ಬದಲಾವಣೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌