ಆ್ಯಪ್ನಗರ

ಕನ್ನಡಕ್ಕೆ ಬಂದ ಬಾಲಿವುಡ್‌ ಹೀರೋ: ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶೇಖರ್ ಸುಮನ್ ಪುತ್ರ ಆದ್ಯಾಯನ್

ಪ್ಯಾನ್ ಇಂಡಿಯಾ ಸಿನಿಮಾದ ಮೂಲಕ ಬಾಲಿವುಡ್ ನಟ ಶೇಖರ್ ಸುಮನ್ ಪುತ್ರ ಆದ್ಯಾಯನ್ ಸುಮನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 31 May 2023, 7:04 pm

ಹೈಲೈಟ್ಸ್‌:

  • ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಬಾಲಿವುಡ್ ನಟ
  • ಕನ್ನಡ ಚಿತ್ರರಂಗಕ್ಕೆ ಬಂದ ಶೇಖರ್ ಸುಮನ್ ಪುತ್ರ ಆದ್ಯಾಯನ್ ಸುಮನ್
  • ಕ್ರೈಮ್ ಥ್ರಿಲ್ಲರ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಆದ್ಯಾಯನ್ ಸುಮನ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web shekhar suman son adhyayan suman to make debut in sandalwood
ಕನ್ನಡಕ್ಕೆ ಬಂದ ಬಾಲಿವುಡ್‌ ಹೀರೋ: ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶೇಖರ್ ಸುಮನ್ ಪುತ್ರ ಆದ್ಯಾಯನ್
ನೇತ್ರಾವತಿ
ಕ್ರೈಮ್‌ ಥ್ರಿಲ್ಲರ್‌ ಪ್ಯಾನ್‌ ಇಂಡಿಯಾ ಸಿನಿಮಾವೊಂದರಲ್ಲಿಆದ್ಯಾಯನ್‌ ಶೇಖರ್‌ ಸುಮನ್‌ ಬಣ್ಣ ಹಚ್ಚಲಿದ್ದಾರೆ. ಬಾಲಿವುಡ್‌ ನಟ ಹಾಗೂ ಗಾಯಕ ಆದ್ಯಾಯನ್‌ ಶೇಖರ್‌ ಸುಮನ್‌ ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದಾರೆ.
ಆರ್ಯನ್‌ ಪ್ರತಾಪ್‌ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಇನ್ನೂ ಹೆಸರಿಡದ ಕ್ರೈಮ್‌ ಥ್ರಿಲ್ಲರ್‌ ಪ್ಯಾನ್‌ ಇಂಡಿಯಾ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದು, ಈ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸುಶಾಂತ್ ಅವರದ್ದು ಕೊಲೆ ಎಂಬುದಕ್ಕೆ 4 ಪ್ರಮುಖ ಅಂಶಗಳನ್ನು ತೆರೆದಿಟ್ಟ ನಟ ಶೇಖರ್‌ ಸುಮನ್‌!

ಅಲ್ಲದೆ ಈ ಚಿತ್ರದಲ್ಲಿ ಹಲವು ಭಾಷೆಗಳ ದೊಡ್ಡ ಕಲಾವಿದರು ನಟಿಸಿದ್ದಾರೆ ಎಂಬ ಸುದ್ದಿ ಇದೆ. ಯಾರೆಲ್ಲ ಇದ್ದಾರೆ ಎಂಬುದು ಇನ್ನೂ ರಿವೀಲ್‌ ಆಗಿಲ್ಲ.

‘ಆದ್ಯಾಯನ್‌ ಶೇಖರ್‌ ಸುಮನ್‌ ಅವರು ಹಿರಿಯ ಬಾಲಿವುಡ್‌ ನಟ ಶೇಖರ್‌ ಸುಮನ್‌ ಅವರ ಪುತ್ರ. 40 ವರ್ಷಗಳ ಹಿಂದೆ ಕಾಶಿನಾಥ್‌ ಅವರ ‘ಅನುಭವ’ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಶೇಖರ್‌ ಸುಮನ್‌ ನಾಯಕ ನಟರಾಗಿ ನಟಿಸಿದ್ದರು. ಕಾಶಿನಾಥ್‌ ಅವರೇ ಹಿಂದಿ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಅವರ ಮಗ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ’ ಎಂದಿದ್ದಾರೆ ನಿರ್ದೇಶಕ ಆರ್ಯನ್‌ ಪ್ರತಾಪ್‌.

ಒಂದೇ ತಿಂಗಳಲ್ಲಿ 50 ಸಿಮ್‌ ಕಾರ್ಡ್‌ ಬದಲಿಸಿದ್ದ ನಟ ಸುಶಾಂತ್‌ ಸಿಂಗ್‌ ರಜಪೂತ್‌! ಕಾರಣ ಏನು?

‘ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್‌ ಈ ಸಿನಿಮಾದಲ್ಲಿ ಈ ಹಿಂದೆ ಎಂದೂ ನಿರ್ವಹಿಸಿದಂಥ ಅದ್ಭುತ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರಮುಖ ಪಾತ್ರದಲ್ಲಿ ರಾಗಿಣಿ ದ್ವಿವೇದಿ, ವಿಜಯ್‌ ಚೆಂಡೂರ್‌, ಮಹಂತೇಶ್‌ ಹಿರೇಮಠ್‌ ಮತ್ತಿತರರು ನಟಿಸುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾವಾದ್ದರಿಂದ ಎಲ್ಲಾ ಭಾಷೆಯ ಓರ್ವ ದೊಡ್ಡ ಕಲಾವಿದ ಈ ಚಿತ್ರದಲ್ಲಿ ನಟಿಸಲಿದ್ದು, ಆ ದೊಡ್ಡ ಕಲಾವಿದರು ಯಾರೆಲ್ಲ ಎಂಬ ರಹಸ್ಯವನ್ನು ಮುಂದೆ ರಿವೀಲ್‌ ಮಾಡಲಾಗುವುದು’ ಎಂದಿದ್ದಾರೆ ನಿರ್ದೇಶಕ ಆರ್ಯನ್‌ ಪ್ರತಾಪ್.

ಚಿತ್ರಕ್ಕೆ ಚಂದ್ರಶೇಖರ್‌ ಕೆ.ಎಸ್‌ ಅವರ ಛಾಯಾಗ್ರಹಣ, ಶ್ರೀಧರ್‌ ಕಶ್ಯಪ್‌ ಅವರ ಸಂಗೀತ, ಹರೀಶ್‌ ಶೃಂಗ ಅವರ ಸಂಭಾಷಣೆ, ಎನ್‌ ಎಂ ವಿಶ್ವ ಅವರ ಸಂಕಲನ ಚಿತ್ರಕ್ಕಿದೆ. ಚಿತ್ರದ ಟೈಟಲ್‌ ಅನ್ನು ಜೂನ್‌ 10 ರಂದು ಚಿತ್ರತಂಡ ಪ್ರಕಟಿಸಲಿದೆ.

ಇನ್ನೂ ಹೆಸರಿಡದ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಪ್ರತಿ ಭಾಷೆಯ ದೊಡ್ಡ ಕಲಾವಿದರ ಆಯ್ಕೆ ನಡೆದಿದೆ ಎಂದಿದ್ದಾರೆ ನಿರ್ದೇಶಕ ಆರ್ಯನ್ ಪ್ರತಾಪ್.

ಶೇಖರ್ ಸುಮನ್

ಬಾಲಿವುಡ್ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಗಾಯಕ ಶೇಖರ್ ಸುಮನ್. ‘ಉತ್ಸವ್’, ‘ಮಾನವ್ ಹತ್ಯಾ’, ‘ಸಂಸಾರ್’, ‘ಅನುಭವ್’, ‘ತ್ರಿದೇವ್’, ‘ಪತಿ ಪರಮೇಶ್ವರ್’, ‘ರಣ್‌ಭೂಮಿ’ ಮುಂತಾದ ಚಿತ್ರಗಳಲ್ಲಿ ಶೇಖರ್ ಸುಮನ್ ನಟಿಸಿದ್ದಾರೆ. ಕಿರುತೆರೆಯ ಧಾರಾವಾಹಿಗಳಲ್ಲಿ ನಟನಾಗಿ, ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಶೇಖರ್ ಸುಮನ್ ಕಾಣಿಸಿಕೊಂಡಿದ್ದಾರೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌