ಆ್ಯಪ್ನಗರ

ಕೇಂದ್ರ ಸರ್ಕಾರದ ವಿರುದ್ಧ ಡಾ.ಶಿವರಾಜ್‌ಕುಮಾರ್ ಅಭಿಮಾನಿಗಳು ಗರಂ! ಶಿವಣ್ಣ, ಅನಂತ್‌ನಾಗ್ ವಿಚಾರದಲ್ಲಿ ಹೇಗೇಕೆ ಆಗುತ್ತಿದೆ?

ಇತ್ತೀಚೆಗಷ್ಟೇ ಹಲವರಿಗೆ 'ಪದ್ಮಶ್ರೀ' ಪ್ರಶಸ್ತಿ ಲಭಿಸಿದೆ. ಬಾಲಿವುಡ್ ತಾರೆಯರಾದ ಕಂಗನಾ ರಣಾವತ್, ಕರಣ್ ಜೋಹರ್, ಅದ್ನಾನ್ ಸಮಿ, ಏಕ್ತಾ ಕಪೂರ್ ಮುಂತಾದವರಿಗೆ 'ಪದ್ಮಶ್ರೀ' ಗೌರವ ಸಂದಿತ್ತು. "ಪದ್ಮಶ್ರೀ ಗೌರವ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಭಾರತೀಯ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನನ್ನು ಗುರುತಿಸಿದ್ದಕ್ಕೆ ದೇಶಕ್ಕೆ ಕೃತಜ್ಞತೆ ತಿಳಿಸುತ್ತೇನೆ. ನಿರ್ಭೀತಿಯಿಂದ ಕನಸು ಕಾಣುವ ಪ್ರತಿಯೊಬ್ಬ ಮಗಳಿಗೆ, ತಾಯಿಗೆ, ಮಹಿಳೆಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ" ಎಂದು ಹೇಳಿದ್ದಾರೆ ಕಂಗನಾ. ಆದರೆ ಕಂಗನಾಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಕೂಡ ಮಾತನಾಡಿದ್ದಾರೆ.

Vijaya Karnataka Web 27 Jan 2020, 2:25 pm
ಇತ್ತೀಚೆಗಷ್ಟೇ ಹಲವರಿಗೆ 'ಪದ್ಮಶ್ರೀ' ಪ್ರಶಸ್ತಿ ಲಭಿಸಿದೆ. ಬಾಲಿವುಡ್ ತಾರೆಯರಾದ ಕಂಗನಾ ರಣಾವತ್, ಕರಣ್ ಜೋಹರ್, ಅದ್ನಾನ್ ಸಮಿ, ಏಕ್ತಾ ಕಪೂರ್ ಮುಂತಾದವರಿಗೆ 'ಪದ್ಮಶ್ರೀ' ಗೌರವ ಸಂದಿತ್ತು. "ಪದ್ಮಶ್ರೀ ಗೌರವ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಭಾರತೀಯ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನನ್ನು ಗುರುತಿಸಿದ್ದಕ್ಕೆ ದೇಶಕ್ಕೆ ಕೃತಜ್ಞತೆ ತಿಳಿಸುತ್ತೇನೆ. ನಿರ್ಭೀತಿಯಿಂದ ಕನಸು ಕಾಣುವ ಪ್ರತಿಯೊಬ್ಬ ಮಗಳಿಗೆ, ತಾಯಿಗೆ, ಮಹಿಳೆಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ" ಎಂದು ಹೇಳಿದ್ದಾರೆ ಕಂಗನಾ. ಆದರೆ ಕಂಗನಾಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಕೂಡ ಮಾತನಾಡಿದ್ದಾರೆ.
Vijaya Karnataka Web shiva rajkumar fans upset with padma shri award 2020
ಕೇಂದ್ರ ಸರ್ಕಾರದ ವಿರುದ್ಧ ಡಾ.ಶಿವರಾಜ್‌ಕುಮಾರ್ ಅಭಿಮಾನಿಗಳು ಗರಂ! ಶಿವಣ್ಣ, ಅನಂತ್‌ನಾಗ್ ವಿಚಾರದಲ್ಲಿ ಹೇಗೇಕೆ ಆಗುತ್ತಿದೆ?


ಕಂಗನಾಗೆ ಸಿಕ್ಕ 'ಪದ್ಮಶ್ರೀ' ಪ್ರಶಸ್ತಿ ಶಿವಣ್ಣನಿಗೆ ಇಲ್ಲ!

"ಶಿವಣ್ಣ ಒಬ್ಬ ಅತ್ಯುತ್ತಮ ನಟ. 33 ವರ್ಷಗಳ ಕಲಾ ಪ್ರಪಂಚದಲ್ಲಿ ಪಕ್ಷ ಭೇದ ಮರೆತು ಕಲಾವಿದನಾಗಿ ಮಾತ್ರ ಕಾಣಿರಿ. ಮುಂದಿನ ವರ್ಷವಾದರೂ ಅವರಿಗೆ ಪ್ರಶಸ್ತಿ ಸಿಗಲಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದು ರಾಜಕೀಯ. ದುಡ್ಡು. ಒಳ್ಳೆಯ ಕಲಾವಿದರಿಗೆ ಹಾಗೂ ಒಳ್ಳೆಯವರಿಗೆ ಕಾಲ ಇದಲ್ಲ. ನಮ್ಮ ಶಿವಣ್ಣ, ಅಣ್ಣಾವ್ರು ತರ ಧ್ರುವತಾರೆ. ಶಿವಣ್ಣ ಹಾಗೂ ರಾಜಣ್ಣ ಕನ್ನಡಿಗರ ಹೆಮ್ಮೆ. ಕಲಾವಿದರಲಿ ಭೇದ ಭಾವನೆಗಳು ಇರಬಾರದು, ಒಗ್ಗಟ್ಟಾಗಿ ಹೋರಾಟ ಮಾಡೋಣ. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಡಾ.ಶಿವರಾಜಕುಮಾರ್, ದರ್ಶನ್, ಸುದೀಪ್, ಯಶ್, ಪುನೀತ್ ರಾಜ್‌ಕುಮಾರ್, ಗಣೇಶ್ ಅವರ ಎಲ್ಲ ಅಭಿಮಾನಿ ಸಂಘಟನೆಗಳು ಸೇರಿಸಿ ಕೇಳೋದು ಸೂಕ್ತ. ನಮ್ಮ ಬೆಂಬಲ ಸದಾಕಾಲ ನಿಮ್ಮ ಜೊತೆಯಿದೆ. ನಾವೆಲ್ಲ ಕನ್ನಡಿಗರು ಒಗ್ಗಟ್ಟಾಗಿದ್ದರೆ ಡಾ.ರಾಜ್ ಕುಮಾರ್ ಅವರಿಗೆ ಭಾರತರತ್ನ ಎಂದೋ ಸಿಕ್ಕಿರೋದು" ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. "ಪ್ರಶಸ್ತಿಗಳು ತಾನಾಗಿಯೇ ಬರಬೇಕು ಅವುಗಳು ಕೇಳಿ ಪಡೆಯುವುದು ತಪ್ಪು" ಎಂದು ಇನ್ನೊಬ್ಬರು ಹೇಳಿದ್ದಾರೆ.

ಶಿವಣ್ಣನಿಗೆ 'ಪದ್ಮಶ್ರೀ' ಪ್ರಶಸ್ತಿ ಸಿಗದಿದ್ದಕ್ಕೆ ಅಭಿಮಾನಿಗಳು ಹೇಳಿದ್ದೇನು?

"ಶಿವಣ್ಣನ ಸಿನಿಮಾಗಳು ಸಮಾಜಕ್ಕೆ ಒಳ್ಳೆ ಸಂದೇಶ ನೀಡಿರುವ ಚಿತ್ರಗಳು. ಹೀಗಾಗಿ ಶಿವಣ್ಣನಿಗೆ ಆಸ್ಕರ್ ಪ್ರಶಸ್ತಿ ಕೊಟ್ಟರೂ ತಪ್ಪಿಲ್ಲ" ಎಂದಿದ್ದಾರೆ ನೆಟ್ಟಿಗರೊಬ್ಬರು.


"ಕನ್ನಡಿಗರು ತಮ್ಮವರನ್ನೇ ಕಾಲು ಎಳೆಯುವ ಕೆಟ್ಟ ಚಟದಿಂದ ದೂರಾಗುವವರೆಗೂ ಇದೇ ಗತಿ ತಪ್ಪಿದ್ದಲ್ಲ" ಎಂದಿದ್ದಾರೆ ಇನ್ನೊಬ್ಬ ನೆಟ್ಟಿಗರು.


"ಶಿವಣ್ಣನವರನ್ನು ಮೀರಿಸುವ ಶಕ್ತಿ ಕನ್ನಡದಲ್ಲಿ ಬೇರೆ ಯಾರಿಗೂ ಇಲ್ಲ. ಕಾಡಿ ಬೇಡಿ ಹೋರಾಟ ಮಾಡಿ ಬರುವ ಪ್ರಶಸ್ತಿಗಳು ಬೇಕಾಗಿಲ್ಲ. ಏಕೆಂದರೆ ಈಗಾಗಲೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ನಮ್ಮ ಶಿವಣ್ಣ. ಇದಕ್ಕಿಂತ ಆಸ್ಕರ್ ಪ್ರಶಸ್ತಿ ಬೇಕೆ?" ಎಂದಿದ್ದಾರೆ ಇನ್ನೊಬ್ಬ ನೆಟ್ಟಿಗರು.


"ಓಂ ಸಿನಿಮಾ ಮಾಡಿದಾಗಲೇ ಅವರ ಗತ್ತು ಏನು ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಇದಕ್ಕಿಂತ ಅವಾರ್ಡ್ ಬೇಕೆ?" ಎಂದು ಪ್ರಶ್ನಿಸಿದ್ದಾರೆ ಇನ್ನೊಬ್ಬ ನೆಟ್ಟಿಗರು.


"ನಮ್ಮ ಹೀರೋಗಳು ದುಡ್ಡಿನ ಹಿಂದೆ ಬಿದ್ದಿದ್ದಾರೆ ಅವರಲ್ಲಿ ಒಗ್ಗಟ್ಟಿಲ್ಲ. ಅರ್ಹತೆ ಇದ್ದ ಎಲ್ಲರಿಗೂ ಪ್ರಶಸ್ತಿ ಸಿಗಲ್ಲ ಬಿಡಿ. ಪೇಜಾವರ ಶ್ರೀಗೆ ಪದ್ಮ ವಿಭೂಷಣ, ಸಿದ್ದಗಂಗಾ ಶ್ರೀಗಳಿಗೆ ಪದ್ಮ ಭೂಷಣ. ಎಲ್ಲಿಂದ ಎಲ್ಲಿಗೆ ಹೋಲಿಕೆ. ಸ್ವಾಮಿಗಳು ರಾಜಕೀಯ ಮಾಡ್ಕೊಂಡು ಇದ್ರೆ ಪ್ರಶಸ್ತಿ ಬರೋದು. ಅನಂತನಾಗ್ ,ವಿಷ್ಣುವರ್ಧನ್ ಅವರಿಗೆ ಕೊಡಲಿಲ್ಲ. ಸೈಫ್ ಅಲಿ ಖಾನ್, ಕಾಜಲ್, ತಮಿಳು ನಟ ಕಾಮಿಡಿಯನ್ ವಿವೇಕ್‌ಗೂ ಸಹ ನೀಡಲಾಗಿದೆ. ಈ ಪ್ರಶಸ್ತಿಗಳನ್ನು ನೆಗ್ಲೆಕ್ಟ್ ಮಾಡುವುದೇ ಉತ್ತಮ" ಎಂದು ಹೇಳಿದ್ದಾರೆ ಇನ್ನೊಬ್ಬ ನೆಟ್ಟಿಗರು.

ಶಿವರಾಜ್‌ಕುಮಾರ್ ಸಿನಿಮಾ ಸಂಖ್ಯೆ 120

"ಶ್ರೀ ಶ್ರೀನಿವಾಸ ಕಲ್ಯಾಣ, ಆನಂದ್, ರಥ ಸಪ್ತಮಿ, ಇನ್‌ಸ್ಪೆಕ್ಟರ್ ವಿಕ್ರಮ್, ಜಗ ಮೆಚ್ಚಿದ ಹುಡುಗ, ಮುತ್ತಣ್ಣ, ಓಂ, ಜನುಮದ ಜೋಡಿ, ಜೋಗಿ, ಓಂ, ತವರಿಗೆ ಬಾ ತಂಗಿ, ಅಣ್ಣ ತಂಗಿ, ಮೈಲಾರಿ, ಟಗರು" ಮುಂತಾದ ಸಾಕಷ್ಟು ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ ಶಿವಣ್ಣ.

ಸಿಂಪಲ್ ಸುನಿ ಕೂಡ 'ಪದ್ಮಶ್ರೀ' ಪ್ರಶಸ್ತಿ ಬಗ್ಗೆ ಬೇಸರ

ಹಿರಿಯ ನಟ, ಕನ್ನಡದ ಮೇರು ನಟ ಅನಂತ್‌ ನಾಗ್‌ ಅವರಿಗೂ ಕೂಡ ಪದ್ಮಶ್ರೀ ಪ್ರಶಸ್ತಿ ನೀಡಿಲ್ಲ. ಈ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಟ್ವಿಟ್ಟರ್‌ನಲ್ಲಿ ದನಿಯೆತ್ತಿದ್ದಾರೆ. ಈ ಹಿಂದೆ ಕೂಡ ಸುನಿ ಹಲವಾರು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌