ಆ್ಯಪ್ನಗರ

'ಎಷ್ಟು ದಿನ ಅಂತ ನಾನು ಒಳ್ಳೆಯವನಾಗಿರಲಿ'; ಶಿವರಾಜ್‌ಕುಮಾರ್ ಹೀಗೆ ಹೇಳಲು ಕಾರಣವೇನು?

ಇಷ್ಟು ದಿನ ಪಾಸಿಟಿವ್ ಪಾತ್ರಗಳ ಮೂಲಕ ಎಲ್ಲರನ್ನು ರಂಜಿಸಿರುವ ಶಿವರಾಜ್‌ಕುಮಾರ್ ಈಗ ವಿಲನ್ ಆಗೋಕು ಸಜ್ಜಾಗಿದ್ದಾರೆ. ಅವರ ಮುಂದಿನ ಸಿನಿಮಾದಲ್ಲಿ ಅಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ಏನದು ಸುದ್ದಿ? ಇಲ್ಲಿದೆ ಮಾಹಿತಿ.

Vijaya Karnataka Web 12 Nov 2019, 12:40 pm
'ಹ್ಯಾಟ್ರಿಕ್‌ ಹೀರೋ' ಶಿವರಾಜ್‌ಕುಮಾರ್ ಮಾಡಿರುವ ಬಹುತೇಕ ಸಿನಿಮಾಗಳು ಫ್ಯಾಮಿಲಿ ಸೆಂಟಿಮೆಂಟ್ ಆಗಿರುತ್ತಿದ್ದವು. ಎಲ್ಲ ಥರದ ಪಾತ್ರಗಳನ್ನು ಅವರು ಮಾಡಿದ್ದಾರೆ. ಆದರೆ, ವಿಲನ್ ಆಗಿ ಕಾಣಿಸಿಕೊಂಡಿದ್ದು ಇಲ್ಲವೇ ಇಲ್ಲ. ಈಗ ಅಂಥದ್ದೊಂದು ಪ್ರಯತ್ನಕ್ಕೂ ಶಿವಣ್ಣ ಕೈ ಹಾಕಿದ್ದಾರೆ. ಈ ಬಾರಿ ಅವರು ನೆಗೆಟಿವ್ ಶೇಡ್‌ನ ಪಾತ್ರ ಮಾಡೋಕೆ ಸಜ್ಜಾಗಿದ್ದಾರೆ. ಯಾವುದು ಅದು ಆ ಸಿನಿಮಾ? ಏನಿದು ಹೊಸ ಮಾಹಿತಿ?
Vijaya Karnataka Web ಶಿವರಾಜ್_ಕುಮಾರ್_


'ಆಯುಷ್ಮಾನ್‌ಭವ' ರಿಲೀಸ್‌ ಟೈಮಲ್ಲಿ 'ಜನುಮದ ಜೋಡಿ' ನೆನಸಿಕೊಂಡ್ರು ಶಿವಣ್ಣನ ಫ್ಯಾನ್ಸ್! ಕಾರಣವೇನು?

ಈ ಹಿಂದೆ ನಿರ್ದೇಶಕ ಯೋಗಿ ಜಿ. ರಾಜ್‌ ಅವರ 'ಬಂಗಾರದ ಸನ್‌ ಆಫ್ ಬಂಗಾರದ ಮನುಷ್ಯ' ಚಿತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದರು. ಈಗ ಮತ್ತೊಮ್ಮೆ ಯೋಗಿ ಜತೆ ಶಿವಣ್ಣ ಕೈ ಜೋಡಿಸಿದ್ದಾರೆ. ಸದ್ಯದ ಸ್ಕ್ರಿಪ್ಟ್ ಹಂತದಲ್ಲಿರುವ ಈ ಸಿನಿಮಾದಲ್ಲಿ ಶಿವಣ್ಣ ವಿಲನ್‌ ಶೇಡ್‌ ಇರುವ ಪಾತ್ರವನ್ನು ಮಾಡಲಿದ್ದಾರಂತೆ. ಕೆಆರ್‌ಜಿ ಸ್ಟುಡಿಯೋಸ್‌ ಮೂಲಕ ಸಿನಿಮಾ ವಿತರಣೆ ಮಾಡುತ್ತಿದ್ದ ಕಾರ್ತಿಕ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕನಾಗಲಿದ್ದಾರೆ.

ಸೆಂಚುರಿ ಸ್ಟಾರ್ ಶಿವಣ್ಣ ಫಿಟ್‍ನೆಸ್ ನೋಡಿ ಅಭಿಮಾನಿಗಳು ಥ್ರಿಲ್

ತುಂಬ ಡಿಫರೆಂಟ್ ಆದ ಪಾತ್ರ. 40-45ರ ವಯಸ್ಸಿನ ಪಾತ್ರ ನನ್ನದು. ಆ ಬಗ್ಗೆ ಚರ್ಚೆಗಳು ಮುಂದುವರಿದಿವೆ. 'ಓಂ'ನಲ್ಲಿ ಪಾಸಿಟಿವ್‌ ಅಂಶ ಇತ್ತು. ಇದರಲ್ಲಿ ಪಾಸಿಟಿವ್ ತೋರಿಸದೆ ಹೇಗೆ ಮಾಡಬಹುದು ಅನ್ನೋದನ್ನು ಟ್ರೈ ಮಾಡ್ತಾ ಇದಿವಿ. ಗೆಟಪ್‌ ಬಗ್ಗೆ ಈಗಲೇ ಏನೂ ಹೇಳೋಕೆ ಆಗಲ್ಲ. ಮುಂದೇನು ಮಾಡಬಹುದು, ನಮ್ಮಿಂದ ಏನೆಲ್ಲ ಸಾಧ್ಯವಾಗುತ್ತೋ ಅದನ್ನೆಲ್ಲ ಮಾಡೋಣ. ಇದುವರೆಗೂ ಪಾಸಿಟಿವ್ ಪಾತ್ರ ಮಾಡಿರುವ ನನಗೆ ವಿಲನ್‌ ಮಾಡೋದು ಒಂದು ರೀತಿಯ ಚಾಲೆಂಜ್. ಅವನು ವಿಲನ್ ಆಗೋಕು ಕಾರಣ ಇರತ್ತೆ. ಅದನ್ನು ಸಿನಿಮಾ ನೋಡಬೇಕು' ಎನ್ನುತ್ತಾರೆ ಶಿವಣ್ಣ. ಈಗ ಯಾಕೆ ನೆಗೆಟಿವ್‌ ಶೇಡ್‌ ಮಾಡಬೇಕು ಅನ್ನಿಸ್ತು ನಿಮಗೆ? 'ಎಷ್ಟು ದಿನ ಅಂತ ಒಳ್ಳೆಯವನಾಗಿರಲಿ? ಸುಮ್ಮನೆ ಒಂದ್ಸಲ ಕೆಟ್ಟವನಾಗಿ ನೋಡೋಣ ಅಂತ. ಒಂದು ಚೇಂಜ್‌ ಇರಲಿ' ಅಂತಾರೆ ಶಿವಣ್ಣ. ಕೆಲ ತಿಂಗಳ ಹಿಂದೆ ಭುಜದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬಂದಿರುವ ಅವರು ಈಗ ಎಂದಿನಂತೆ ವ್ಯಾಯಾಮ ಮಾಡುವುದಕ್ಕೆ ಶುರು ಮಾಡಿದ್ದಾರೆ. 'ಭಜರಂಗಿ 2' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅವರ ನಟನೆಯ 'ಆಯುಷ್ಮಾನ್‌ಭವ' ಚಿತ್ರವು ನ.15ಕ್ಕೆ ರಿಲೀಸ್ ಆಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌