ಓಂ ಚಿತ್ರಕ್ಕೆ 25 ವರ್ಷ ತುಂಬಿದ ಸಂದರ್ಭದಲ್ಲಿಶಿವರಾಜ್ ಕುಮಾರ್ ಫೇಸ್ಬುಕ್ ಲೈವ್ನಲ್ಲಿತಮ್ಮ ಅಭಿಮಾನಿಗಳ ಜತೆ ಮಾತನಾಡಿದ್ದು, ದರ್ಶನ್ ಜತೆ ನಟಿಸುವ ಆಸೆ ಇದೆ ಎಂದಿದ್ದಾರೆ.
ಲೈವ್ನ ಸಂದರ್ಭದಲ್ಲಿಅಭಿಮಾನಿಗಳು ದರ್ಶನ್, ಸುದೀಪ್, ಪುನೀತ್, ರವಿಚಂದ್ರನ್ ಜತೆ ನಟಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಿವಣ್ಣ, 'ದರ್ಶನ್ ಜತೆ ಸಿನಿಮಾ ಮಾಡಬಾರದು ಅಂತ ನನಗೆ ಏನಿಲ್ಲ. ಒಳ್ಳೆಯ ಸ್ಟೋರಿ ಬಂದರೆ 100% ಮಾಡುವೆ. ನನಗೂ ಇಷ್ಟ ಇದೆ. ಎಲ್ಲರ ಜತೆ ನಟಿಸಬೇಕು ಎಂದು ಆಸೆ ಇದೆ. ಅದಕ್ಕೆ ತಕ್ಕಂತೆ ಕಥೆ ಸಿಕ್ಕರೆ ಖಂಡಿತ ನಟಿಸುವೆ" ಎಂದಿದ್ದಾರೆ.
ಡಿ ಬಾಸ್ ದರ್ಶನ್ ಪ್ರಾಣಿ ಪ್ರೀತಿಗೆ ಕೆಆರ್ ನಗರದ ಕಾಳಮ್ಮಕೊಪ್ಪಲು ಗ್ರಾಮಸ್ಥರು ಫಿದಾ
ಪುನೀತ್ ಮತ್ತು ನಾನು ಖಂಡಿತ ಒಂದು ಸಿನಿಮಾದಲ್ಲಿ ನಟಿಸುತ್ತೇವೆ. ಉಪೇಂದ್ರ ಅವರ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾದಲ್ಲಿ ನಟಿಸಬೇಕು ಎಂದು ನನಗೂ ಅನ್ನಿಸಿದೆ. ಆದಷ್ಟು ಬೇಗ ಮಾಡುತ್ತೇವೆ. ನಿಮ್ಮೆಲ್ಲರಂತೆ ನಾನೂ ಕಾಯುತ್ತಿದ್ದೇನೆ. ಉಪೇಂದ್ರ ಅವರಿಗೂ ಹೇಳಿದ್ದೇನೆ' ಎಂದು ಭರವಸೆ ನೀಡಿದರು. ಸುದೀಪ್ ಜತೆಯಲ್ಲೂ ಮತ್ತೊಮ್ಮೆ ನಟಿಸಲು ಸಿದ್ಧ ಎಂದರು.
'ಕುರುಕ್ಷೇತ್ರ'ಕ್ಕಿಂತ ಬಿಗ್ ಬಜೆಟ್ವುಳ್ಳ ಸಿನಿಮಾ ಮಾಡಲಿದ್ದಾರೆ ನಿರ್ಮಾಪಕ ಮುನಿರತ್ನ!
ನೆಗೆಟಿವ್ ಶೇಡ್ನ ಪಾತ್ರದಲ್ಲೂ ನಟಿಸಲು ಸಿದ್ಧ ಎಂದ ಅವರು, 'ಬೈರತಿ ರಣಗಲ್' ಚಿತ್ರದಲ್ಲಿ ಸ್ವಲ್ಪ ನೆಗೆಟಿವ್ ಶೇಡ್ನ ಪಾತ್ರದಲ್ಲಿ ನಟಿಸಿದ್ದೇನೆ. 'ಭಜರಂಗಿ 2' ಚಿತ್ರ ಬಹುತೇಕ ಮುಗಿದಿದೆ. ಇದೂ ಕೂಡಾ ಭರವಸೆ ಮೂಡಿಸಿರುವ ಸಿನಿಮಾ. ಫೆಂಟಾಸ್ಟಿಕ್ ವಿಷುಯಲ್ಸ್, ಆ್ಯಕ್ಷನ್ ಸೀನ್ ಮಾತ್ರವಲ್ಲ, ಒಳ್ಳೆಯ ಪಾಯಿಂಟ್ಗಳಿವೆ. ನೋಡಿದಾಗ ನಿಮಗೇ ಗೊತ್ತಾಗುತ್ತೆ. ಲಾಕ್ಡೌನ್ ಮುಗಿದ ನಂತರ ಆರ್ಡಿಎಕ್ಸ್ ಚಿತ್ರದ ಶೂಟಿಂಗ್ ಶುರುವಾಗುತ್ತೆ' ಎಂದರು. 'ಲಾಕ್ಡೌನ್ ಮುಗಿದ ನಂತರ 'ಓಂ' ಚಿತ್ರವನ್ನು ಚಿತ್ರಮಂದಿರದಲ್ಲಿ ರೀರಿಲೀಸ್ ಮಾಡೋಣ' ಎಂದವರು ಅಭಿಮಾನಿಗಳಿಗೆ ಭರವಸೆ ನೀಡಿದರು.
ಲೈವ್ನ ಸಂದರ್ಭದಲ್ಲಿಅಭಿಮಾನಿಗಳು ದರ್ಶನ್, ಸುದೀಪ್, ಪುನೀತ್, ರವಿಚಂದ್ರನ್ ಜತೆ ನಟಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಿವಣ್ಣ, 'ದರ್ಶನ್ ಜತೆ ಸಿನಿಮಾ ಮಾಡಬಾರದು ಅಂತ ನನಗೆ ಏನಿಲ್ಲ. ಒಳ್ಳೆಯ ಸ್ಟೋರಿ ಬಂದರೆ 100% ಮಾಡುವೆ. ನನಗೂ ಇಷ್ಟ ಇದೆ. ಎಲ್ಲರ ಜತೆ ನಟಿಸಬೇಕು ಎಂದು ಆಸೆ ಇದೆ. ಅದಕ್ಕೆ ತಕ್ಕಂತೆ ಕಥೆ ಸಿಕ್ಕರೆ ಖಂಡಿತ ನಟಿಸುವೆ" ಎಂದಿದ್ದಾರೆ.
ಡಿ ಬಾಸ್ ದರ್ಶನ್ ಪ್ರಾಣಿ ಪ್ರೀತಿಗೆ ಕೆಆರ್ ನಗರದ ಕಾಳಮ್ಮಕೊಪ್ಪಲು ಗ್ರಾಮಸ್ಥರು ಫಿದಾ
ಪುನೀತ್ ಮತ್ತು ನಾನು ಖಂಡಿತ ಒಂದು ಸಿನಿಮಾದಲ್ಲಿ ನಟಿಸುತ್ತೇವೆ. ಉಪೇಂದ್ರ ಅವರ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾದಲ್ಲಿ ನಟಿಸಬೇಕು ಎಂದು ನನಗೂ ಅನ್ನಿಸಿದೆ. ಆದಷ್ಟು ಬೇಗ ಮಾಡುತ್ತೇವೆ. ನಿಮ್ಮೆಲ್ಲರಂತೆ ನಾನೂ ಕಾಯುತ್ತಿದ್ದೇನೆ. ಉಪೇಂದ್ರ ಅವರಿಗೂ ಹೇಳಿದ್ದೇನೆ' ಎಂದು ಭರವಸೆ ನೀಡಿದರು. ಸುದೀಪ್ ಜತೆಯಲ್ಲೂ ಮತ್ತೊಮ್ಮೆ ನಟಿಸಲು ಸಿದ್ಧ ಎಂದರು.
'ಕುರುಕ್ಷೇತ್ರ'ಕ್ಕಿಂತ ಬಿಗ್ ಬಜೆಟ್ವುಳ್ಳ ಸಿನಿಮಾ ಮಾಡಲಿದ್ದಾರೆ ನಿರ್ಮಾಪಕ ಮುನಿರತ್ನ!
ನೆಗೆಟಿವ್ ಶೇಡ್ನ ಪಾತ್ರದಲ್ಲೂ ನಟಿಸಲು ಸಿದ್ಧ ಎಂದ ಅವರು, 'ಬೈರತಿ ರಣಗಲ್' ಚಿತ್ರದಲ್ಲಿ ಸ್ವಲ್ಪ ನೆಗೆಟಿವ್ ಶೇಡ್ನ ಪಾತ್ರದಲ್ಲಿ ನಟಿಸಿದ್ದೇನೆ. 'ಭಜರಂಗಿ 2' ಚಿತ್ರ ಬಹುತೇಕ ಮುಗಿದಿದೆ. ಇದೂ ಕೂಡಾ ಭರವಸೆ ಮೂಡಿಸಿರುವ ಸಿನಿಮಾ. ಫೆಂಟಾಸ್ಟಿಕ್ ವಿಷುಯಲ್ಸ್, ಆ್ಯಕ್ಷನ್ ಸೀನ್ ಮಾತ್ರವಲ್ಲ, ಒಳ್ಳೆಯ ಪಾಯಿಂಟ್ಗಳಿವೆ. ನೋಡಿದಾಗ ನಿಮಗೇ ಗೊತ್ತಾಗುತ್ತೆ. ಲಾಕ್ಡೌನ್ ಮುಗಿದ ನಂತರ ಆರ್ಡಿಎಕ್ಸ್ ಚಿತ್ರದ ಶೂಟಿಂಗ್ ಶುರುವಾಗುತ್ತೆ' ಎಂದರು. 'ಲಾಕ್ಡೌನ್ ಮುಗಿದ ನಂತರ 'ಓಂ' ಚಿತ್ರವನ್ನು ಚಿತ್ರಮಂದಿರದಲ್ಲಿ ರೀರಿಲೀಸ್ ಮಾಡೋಣ' ಎಂದವರು ಅಭಿಮಾನಿಗಳಿಗೆ ಭರವಸೆ ನೀಡಿದರು.