ಆ್ಯಪ್ನಗರ

ಶಿವಮೊಗ್ಗದಲ್ಲಿ ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡಿಸೇಲ್ ಹಾಕಿದ ಬಂಕ್ ಸಿಬ್ಬಂದಿ! ಮುಂದೇನಾಯ್ತು?

ನಟ ವಿಜಯ ರಾಘವೇಂದ್ರ ಶಿವಮೊಗ್ಗ ಜಿಲ್ಲೆಗೆ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ (ಆ.11) ಅವರು ಅಲ್ಲಿಂದ ವಾಪಸ್‌ ಬೆಂಗಳೂರಿಗೆ ಬರಬೇಕಿತ್ತು. ಆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಲು ಹೋಗಿದ್ದಾರೆ. ಆಗ ಒಂದು ಆಚಾತುರ್ಯ ನಡೆದಿದೆ.

Vijaya Karnataka Web 11 Aug 2020, 6:07 pm
ನಟ ವಿಜಯ್ ರಾಘವೆಂದ್ರ ಸದ್ಯ ಫ್ಯಾಮಿಲಿ ಜೊತೆ ಈಚೆಗೆ ಮಲೆನಾಡಿಗೆ ಪ್ರವಾಸ ಕೈಗೊಂಡಿದ್ದರು. ಹಾಗಾಗಿ, ಶಿವಮೊಗ್ಗ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ಕುಟುಂಬ ಸಮೇತ ನೋಡಿಕೊಂಡು ಬಂದಿದ್ದರು ನಟ ವಿಜಯ ರಾಘವೇಂದ್ರ. ಪ್ರವಾಸ ಮುಗಿಸಿ, ಅವರು ವಾಪಸ್‌ ಬೆಂಗಳೂರಿಗೆ ಮರಳಬೇಕಿತ್ತು. ಅದಕ್ಕಾಗಿ ಶಿವಮೊಗ್ಗದ ಪೆಟ್ರೋಲ್ ಬಂಕ್‌ವೊಂದಕ್ಕೆ ಪೆಟ್ರೋಲ್ ಹಾಕಿಸಲು ಹೋಗಿದ್ದಾರೆ. ಆದರೆ, ಅಲ್ಲೊಂದು ಆಚಾತುರ್ಯ ನಡೆದುಹೋಗಿದೆ!
Vijaya Karnataka Web shivamogga bunk staff put diesel instead of petrol to actor vijay raghavendra car
ಶಿವಮೊಗ್ಗದಲ್ಲಿ ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡಿಸೇಲ್ ಹಾಕಿದ ಬಂಕ್ ಸಿಬ್ಬಂದಿ! ಮುಂದೇನಾಯ್ತು?


ಪೆಟ್ರೋಲ್ ಬದಲು ಡಿಸೆಲ್ ಹಾಕಿದ ಸಿಬ್ಬಂದಿ
ಬಂಕ್ ಸಿಬ್ಬಂದಿಗೆ ತಮ್ಮ ಕಾರಿಗೆ ಪೆಟ್ರೋಲ್ ಹಾಕುವಂತೆ ವಿಜಯ ರಾಘವೇಂದ್ರ ಹೇಳಿದ್ದಾರೆ. ಆದರೆ, ಬಂಕ್ ಸಿಬ್ಬಂದಿ ಗಡಿಬಿಡಿಯಲ್ಲಿ ಕಾರಿಗೆ ಪೆಟ್ರೋಲ್ ಬದಲು ಡಿಸೇಲ್ ಹಾಕಿದ್ದಾರೆ. ಹೀಗೆ ಮಾಡಲು ಕಾರಣ, ನೆಚ್ಚಿನ ನಟನನ್ನು ಕಂಡ ಖುಷಿ! ಹೌದು, ಸಡನ್ ಆಗಿ ನಟ ವಿಜಯ ರಾಘವೇಂದ್ರ ತಮ್ಮ ಬಂಕ್‌ಗೆ ಬಂದಿದ್ದನ್ನು ಕಂಡ ಸಿಬ್ಬಂದಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಆ ವೇಳೆ ಈ ಎಡವಟ್ಟು ಸಂಭವಿಸಿದೆ!

ಸರ್ವೀಸ್‌ಗೆ ವಿಜಯ ರಾಘವೇಂದ್ರ ಕಾರ್‌
ಹೀಗೊಂದು ಅಚಾತುರ್ಯ ಆಗಿದ್ದು ಗಮನಿಸಿ ಬಂಕ್ ಸಿಬ್ಬಂದಿ ತಕ್ಷಣವೇ ತಮ್ಮ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ಬಂದು ಆಗಿರುವ ಪ್ರಮಾದಕ್ಕೆ ವಿಜಯ ರಾಘವೇಂದ್ರ ಅವರ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಆನಂತರ ಆ ಕಾರನ್ನು ರಿಪೇರಿಗೆ ಕಳಿಸಿ, ಬೇರೊಂದು ಕಾರಿನಲ್ಲಿ ವಿಜಯ ರಾಘವೇಂದ್ರ ಕುಟುಂಬದವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಸೋಮವಾರ ಜೋಗಕ್ಕೆ ಹೋಗಿದ್ದ ವಿಜಯ ರಾಘವೇಂದ್ರ ಕುಟುಂಬ ಇಂದು (ಆ.11) ಬೆಂಗಳೂರಿಗೆ ವಾಪಸ್ ಹೊರಟಿತ್ತು. ಆ ಹಿನ್ನೆಲೆಯಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಲು ಈ ಬಂಕ್‌ಗೆ ಬಂದಿದ್ದರು.

ಮಾಲ್ಗುಡಿ ಡೇಸ್‌; ನಟ ವಿಜಯ ರಾಘವೇಂದ್ರ ಪ್ರಚಾರ

ಈಚೆಗೆ ಅವರ 'ಮಾಲ್ಗುಡಿ ಡೇಸ್' ಚಿತ್ರವು ತೆರೆಕಂಡಿತ್ತು. ಅದರ ಬಹುತೇಕ ಚಿತ್ರೀಕರಣವೂ ಮಲೆನಾಡು ಸುತ್ತಮುತ್ತವೇ ನಡೆದಿತ್ತು. ಅದರಲ್ಲಿ ವಿಜಯ ರಾಘವೇಂದ್ರ ವಯೋವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡು, ಗಮನಸೆಳೆದಿದ್ದರು.

ಹೊಸಬರ ಕನ್ನಡ ಸಿನಿಮಾಗಳಿಗೆ ಸ್ಯಾಂಡಲ್‌ವುಡ್ ಸ್ಟಾರ್ ನಟರ ಬೆಂಬಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌