ಬೆಳಗಾವಿಯಲ್ಲಿ ಕನ್ನಡ ಹಾಗೂ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ, ಎಂಇಎಸ್ ಅನ್ನು ನಿಷೇಧ ಮಾಡಬೇಕೆಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಡಿ.31ರಂದು ಕರ್ನಾಟಕ ಬಂದ್ಗೆ ಸಹಕರಿಸುವಂತೆ ಕೆಲ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಇದೀಗ ಈ ಬಗ್ಗೆ ಚರ್ಚೆ ಶುರುವಾಗಿದೆ. ಚಿತ್ರರಂಗದವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. ನಟ ಶಿವರಾಜ್ಕುಮಾರ್ ಈ ಕುರಿತು ಮಾತನಾಡಿದ್ದು, 'ಸಮಸ್ಯೆ ಇದೆ. ಆದರೆ, ಅದನ್ನು ಬಹಳ ಬುದ್ಧಿವಂತಿಕೆಯಿಂದ ಸರಿ ಮಾಡಿಕೊಳ್ಳಬೇಕು' ಎಂದಿದ್ದಾರೆ. ಹಾಗೆಯೇ ನಟ ಯಶ್, 'ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ವಿರುದ್ಧ ಪ್ರತಿಭಟನೆ ಯಾವತ್ತೂ ಮಾಡಬಾರದು' ಎಂದು ಹೇಳಿದ್ದಾರೆ. ಏನೇ ಮಾಡಿದರೂ ಒಳ್ಳೆಯ ರೀತಿಯಲ್ಲಿ ಆಗಬೇಕು- ಶಿವಣ್ಣ
'ನಾವು ಯಾವಾಗಲೂ ಭಾಷೆ ಪರವಾಗಿ ಇರುತ್ತೇವೆ. ಏನೇ ಮಾಡಿದರೂ ಒಳ್ಳೆಯ ರೀತಿಯಲ್ಲಿ ಆಗಬೇಕು. ಸರ್ಕಾರ ಕೂಡ ಈ ಬಗ್ಗೆ ಕ್ರಮ ತೆಗೆದುಕೊಂಡಿರುವುದ ಸಂತಸ ತಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏನು ಹೇಳುತ್ತದೆಯೋ, ಅದನ್ನೆಲ್ಲ ನಾವು ಫಾಲೋ ಮಾಡುತ್ತೇವೆ. ನಾವೇನಾದರೂ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ, ಏನು ಮಾಡಿದರೆ ಸರಿ ಅನ್ನೋದನ್ನು ಯೋಚನೆ ಮಾಡಬೇಕು. ಈಗ ಬಂದ್ ಅಂತ ಹೇಳ್ತಾ ಇದ್ದಾರೆ. ಆದರೆ, ಡಿ.31ಕ್ಕೆ ಮೂರು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ಎಲ್ಲೋ ಒಂದು ಕಡೆ, ನಮ್ಮ ಕನ್ನಡಕ್ಕೆ ನಮ್ಮಿಂದಲೇ ದ್ರೋಹ ಆಗಬಾರದು' ಎಂದಿದ್ದಾರೆ ಶಿವರಾಜ್ಕುಮಾರ್.
ಭಾಷೆ ಮೇಲೆ ಪ್ರೀತಿ-ಗೌರವ ಇದ್ದೇ ಇರುತ್ತದೆ
'ಸಮಸ್ಯೆ ಇದೆ. ಆದರೆ, ಅದನ್ನು ಬಹಳ ಬುದ್ಧಿವಂತಿಕೆಯಿಂದ ಸರಿ ಮಾಡಿಕೊಳ್ಳಬೇಕು. ಅದಕ್ಕೆ ಸಂಬಂಧಪಟ್ಟವರು ಜಾಸ್ತಿ ಜನ ಇದ್ದಾರೆ. ಅವರು ಆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ. ಎಲ್ಲರಿಗೂ ಭಾಷೆ ಮೇಲೆ ಪ್ರೀತಿ-ಗೌರವ ಇದ್ದೇ ಇರುತ್ತದೆ' ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಮಾತನಾಡಿದ್ದ ಶಿವಣ್ಣ, 'ನಮ್ಮ ಭಾಷೆಗೆ ನಾವು ಪ್ರಾಣ ಕೊಡೋಕೂ ರೆಡಿ ಇದ್ದೇವೆ. ನಮಗೂ ಮರ್ಯಾದೆ ಕೊಡಬೇಕು. ನಾವು ಮರ್ಯಾದೆ ಕೊಡುತ್ತೇವೆ. ನಮಗೆ ಪವರ್ ಇಲ್ಲ ಅಂತ ಯಾರು ಅಂದುಕೊಳ್ಳಬಾರದು. ಮನುಷ್ಯಂಗೆ ಕೋಪ ಬಂದ್ರೆ ಯಾವ ಮಟ್ಟಕ್ಕೆ ಬೇಕಾದ್ರೂ ಹೋಗತ್ತೆ. ಮತಗಳಿಗಾಗಿ ಸರ್ಕಾರ ಹಿಂದೆ ಮುಂದೆ ನೋಡಬಾರದು. ಸರ್ಕಾರ ಇದರ ವಿರುದ್ಧ ಹೋರಾಟ ಮಾಡಬೇಕು. ನಮ್ಮ ಭಾಷೆಗಾಗಿ ನಾವು ಹೋರಾಡಬೇಕು' ಎಂದು ಗುಡುಗಿದ್ದರು.
'ಕನ್ನಡ ಭಾಷೆಗಾಗಿ ನಾನು ಪ್ರಾಣ ನೀಡಲು ಸಿದ್ಧ'- ಧ್ವಜ ಸುಟ್ಟ ಪುಂಡರ ವಿರುದ್ಧ ಶಿವಣ್ಣ ಗರಂ
ನಮಗೆ ನಷ್ಟ ಮಾಡಿಕೊಂಡು ಪ್ರತಿಭಟನೆ ಮಾಡಬಾರದು!
ಕರ್ನಾಟಕ ಬಂದ್ ಕುರಿತಂತೆ ನಟ ಯಶ್ ಮಾತನಾಡಿದ್ದು, 'ದೊಡ್ಡವರು ಏನು ನಿರ್ಧಾರ ಮಾಡುತ್ತಾರೋ ಮಾಡಲಿ. ಆದರೆ, ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ವಿರುದ್ಧ ಪ್ರತಿಭಟನೆ ಯಾವತ್ತೂ ಮಾಡಬಾರದು ಅನ್ನೋದು ನನ್ನ ನಂಬಿಕೆ. ಹಾಗಂತ ನಾನೀಗ ಏನೇ ಮಾತನಾಡಿದರೂ, ಅದು ಬೇರೆ ಥರ ರೂಪ ಪಡೆದುಕೊಳ್ಳುತ್ತದೆ ಅಂತ ನನಗೆ ಗೊತ್ತು. ಅದು ನನಗೆ ಬೇರೆಯದೇ ವಿಚಾರ. ಯಾಕೆಂದರೆ, ನಮ್ಮ ಬದುಕುಗಳು, ಕರ್ತವ್ಯಗಳು ಬೇರೆ ಇವೆ. ಆ ಕಡೆ ಗಮನ ಕೊಟ್ಟರೆ ಒಳ್ಳೆಯದು. ನಮ್ಮ ಭಾವನೆ ಏನಿದೆ ಅನ್ನೋದು ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರುತ್ತದೆ. ಅದನ್ನೂ ಮೀರಿ, ನಾವು ಮಾನವೀಯತೆ ಕಡೆಗೆ ಗಮನ ನೀಡಬೇಕು' ಎಂದಿದ್ದಾರೆ.
'ಶಿವಣ್ಣ ನಾಯಕತ್ವ ವಹಿಸಿಕೊಳ್ಳಬೇಕು'- ಇದು ಕನ್ನಡ ಚಿತ್ರರಂಗದ ಪ್ರೀತಿಯ ಮನವಿ
'ನಾವು ಯಾವಾಗಲೂ ಭಾಷೆ ಪರವಾಗಿ ಇರುತ್ತೇವೆ. ಏನೇ ಮಾಡಿದರೂ ಒಳ್ಳೆಯ ರೀತಿಯಲ್ಲಿ ಆಗಬೇಕು. ಸರ್ಕಾರ ಕೂಡ ಈ ಬಗ್ಗೆ ಕ್ರಮ ತೆಗೆದುಕೊಂಡಿರುವುದ ಸಂತಸ ತಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏನು ಹೇಳುತ್ತದೆಯೋ, ಅದನ್ನೆಲ್ಲ ನಾವು ಫಾಲೋ ಮಾಡುತ್ತೇವೆ. ನಾವೇನಾದರೂ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ, ಏನು ಮಾಡಿದರೆ ಸರಿ ಅನ್ನೋದನ್ನು ಯೋಚನೆ ಮಾಡಬೇಕು. ಈಗ ಬಂದ್ ಅಂತ ಹೇಳ್ತಾ ಇದ್ದಾರೆ. ಆದರೆ, ಡಿ.31ಕ್ಕೆ ಮೂರು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ಎಲ್ಲೋ ಒಂದು ಕಡೆ, ನಮ್ಮ ಕನ್ನಡಕ್ಕೆ ನಮ್ಮಿಂದಲೇ ದ್ರೋಹ ಆಗಬಾರದು' ಎಂದಿದ್ದಾರೆ ಶಿವರಾಜ್ಕುಮಾರ್.
ಭಾಷೆ ಮೇಲೆ ಪ್ರೀತಿ-ಗೌರವ ಇದ್ದೇ ಇರುತ್ತದೆ
'ಸಮಸ್ಯೆ ಇದೆ. ಆದರೆ, ಅದನ್ನು ಬಹಳ ಬುದ್ಧಿವಂತಿಕೆಯಿಂದ ಸರಿ ಮಾಡಿಕೊಳ್ಳಬೇಕು. ಅದಕ್ಕೆ ಸಂಬಂಧಪಟ್ಟವರು ಜಾಸ್ತಿ ಜನ ಇದ್ದಾರೆ. ಅವರು ಆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ. ಎಲ್ಲರಿಗೂ ಭಾಷೆ ಮೇಲೆ ಪ್ರೀತಿ-ಗೌರವ ಇದ್ದೇ ಇರುತ್ತದೆ' ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಮಾತನಾಡಿದ್ದ ಶಿವಣ್ಣ, 'ನಮ್ಮ ಭಾಷೆಗೆ ನಾವು ಪ್ರಾಣ ಕೊಡೋಕೂ ರೆಡಿ ಇದ್ದೇವೆ. ನಮಗೂ ಮರ್ಯಾದೆ ಕೊಡಬೇಕು. ನಾವು ಮರ್ಯಾದೆ ಕೊಡುತ್ತೇವೆ. ನಮಗೆ ಪವರ್ ಇಲ್ಲ ಅಂತ ಯಾರು ಅಂದುಕೊಳ್ಳಬಾರದು. ಮನುಷ್ಯಂಗೆ ಕೋಪ ಬಂದ್ರೆ ಯಾವ ಮಟ್ಟಕ್ಕೆ ಬೇಕಾದ್ರೂ ಹೋಗತ್ತೆ. ಮತಗಳಿಗಾಗಿ ಸರ್ಕಾರ ಹಿಂದೆ ಮುಂದೆ ನೋಡಬಾರದು. ಸರ್ಕಾರ ಇದರ ವಿರುದ್ಧ ಹೋರಾಟ ಮಾಡಬೇಕು. ನಮ್ಮ ಭಾಷೆಗಾಗಿ ನಾವು ಹೋರಾಡಬೇಕು' ಎಂದು ಗುಡುಗಿದ್ದರು.
'ಕನ್ನಡ ಭಾಷೆಗಾಗಿ ನಾನು ಪ್ರಾಣ ನೀಡಲು ಸಿದ್ಧ'- ಧ್ವಜ ಸುಟ್ಟ ಪುಂಡರ ವಿರುದ್ಧ ಶಿವಣ್ಣ ಗರಂ
ನಮಗೆ ನಷ್ಟ ಮಾಡಿಕೊಂಡು ಪ್ರತಿಭಟನೆ ಮಾಡಬಾರದು!
ಕರ್ನಾಟಕ ಬಂದ್ ಕುರಿತಂತೆ ನಟ ಯಶ್ ಮಾತನಾಡಿದ್ದು, 'ದೊಡ್ಡವರು ಏನು ನಿರ್ಧಾರ ಮಾಡುತ್ತಾರೋ ಮಾಡಲಿ. ಆದರೆ, ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ವಿರುದ್ಧ ಪ್ರತಿಭಟನೆ ಯಾವತ್ತೂ ಮಾಡಬಾರದು ಅನ್ನೋದು ನನ್ನ ನಂಬಿಕೆ. ಹಾಗಂತ ನಾನೀಗ ಏನೇ ಮಾತನಾಡಿದರೂ, ಅದು ಬೇರೆ ಥರ ರೂಪ ಪಡೆದುಕೊಳ್ಳುತ್ತದೆ ಅಂತ ನನಗೆ ಗೊತ್ತು. ಅದು ನನಗೆ ಬೇರೆಯದೇ ವಿಚಾರ. ಯಾಕೆಂದರೆ, ನಮ್ಮ ಬದುಕುಗಳು, ಕರ್ತವ್ಯಗಳು ಬೇರೆ ಇವೆ. ಆ ಕಡೆ ಗಮನ ಕೊಟ್ಟರೆ ಒಳ್ಳೆಯದು. ನಮ್ಮ ಭಾವನೆ ಏನಿದೆ ಅನ್ನೋದು ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರುತ್ತದೆ. ಅದನ್ನೂ ಮೀರಿ, ನಾವು ಮಾನವೀಯತೆ ಕಡೆಗೆ ಗಮನ ನೀಡಬೇಕು' ಎಂದಿದ್ದಾರೆ.
'ಶಿವಣ್ಣ ನಾಯಕತ್ವ ವಹಿಸಿಕೊಳ್ಳಬೇಕು'- ಇದು ಕನ್ನಡ ಚಿತ್ರರಂಗದ ಪ್ರೀತಿಯ ಮನವಿ