ಆ್ಯಪ್ನಗರ

ಶಿವಣ್ಣ ನಟನೆಯ ಹೊಸ ಸಿನಿಮಾದ ಕುರಿತು ಹೊರಬಿತ್ತು ಆಸಕ್ತಿಕರ ಮಾಹಿತಿ!

ಸ್ಯಾಂಡಲ್‌ವುಡ್‌ನ ಬ್ಯುಸಿ ನಟ ಎಂದರೆ ಅದು 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್. ಅವರ ಕೈಯಲ್ಲಿ ಏನಿಲ್ಲವೆಂದರೂ, 8-10 ಸಿನಿಮಾಗಳು ಇರುತ್ತವೆ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಅವರು, ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

Vijaya Karnataka Web 30 Jul 2020, 12:46 pm
'ಸೆಂಚುರಿ ಸ್ಟಾರ್' ಶಿವರಾಜ್‌ಕುಮಾರ್ ಅವರ ಜನ್ಮದಿನದಂದು (ಜುಲೈ 12) ಒಂದಷ್ಟು ಹೊಸ ಸಿನಿಮಾಗಳ ಘೋಷಣೆ ಆಗಿದ್ದವು. ಅದರಲ್ಲಿ ಯಾವುದೇ ಮಾಹಿತಿ ಇಲ್ಲದ ಒಂದು ಬ್ಲ್ಯಾಕ್‌ ಆ್ಯಂಡ್ ವೈಟ್‌ ಪೋಸ್ಟರ್‌ ಸಹ ರಿಲೀಸ್ ಆಗಿತ್ತು. ಅದು ಯಾವ ಸಿನಿಮಾ? ನಿರ್ದೇಶಕರು ಯಾರು ಎಂಬ ಮಾಹಿತಿಗಳೇನು ಇರಲಿಲ್ಲ. ಅಫ್ರೋಡೈಟ್ ರಿನೈಸಾನ್ಸ್‌ ಟಾಕೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇದರ ನಿರ್ಮಾಣದ ಹೊಣೆ ಹೊತ್ತುಕೊಂಡಿತ್ತು. ಇದೀಗ ಈ ಸಿನಿಮಾದ ಕುರಿತು ಪೂರ್ಣ ಮಾಹಿತಿ ಹೊರಬಿದ್ದಿದೆ.
Vijaya Karnataka Web shivarajkumar joins hands with director harsha for fourth time
ಶಿವಣ್ಣ ನಟನೆಯ ಹೊಸ ಸಿನಿಮಾದ ಕುರಿತು ಹೊರಬಿತ್ತು ಆಸಕ್ತಿಕರ ಮಾಹಿತಿ!


ಹರ್ಷ ನಿರ್ದೇಶನದ ಸಿನಿಮಾ
ಈ ಹೊಸ ಸಿನಿಮಾವನ್ನು ಅಶೋಕ್‌ಕುಮಾರ್ ಮತ್ತು ರಮೇಶ್‌ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ನಿರ್ಮಾಣದಲ್ಲಿ 'ಕಿಲ್ಲಿಂಗ್ ವೀರಪ್ಪನ್' ನಿರ್ಮಾಣ ಮಾಡಿದ್ದ ಸುಧೀಂದ್ರ ಕೈಜೋಡಿಸಿದ್ದಾರೆ. ಈ ಸಿನಿಮಾಕ್ಕೆ ಎ. ಹರ್ಷ ನಿರ್ದೇಶನ ಮಾಡಲಿದ್ದಾರೆ. 'ಭಜರಂಗಿ', 'ವಜ್ರಕಾಯ', 'ಭಜರಂಗಿ 2' ನಂತರ ಈಗ ನಾಲ್ಕನೇ ಬಾರಿಗೆ ಶಿವಣ್ಣ ಜೊತೆ ಸಿನಿಮಾ ಮಾಡೋದಕ್ಕೆ ಕೈ ಜೋಡಿಸಿದ್ದಾರೆ ಹರ್ಷ. ಈ ಬಾರಿ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ನಾಯಕಿಯಾಗಿ ದಕ್ಷಿಣ ಭಾರತದ ಜನಪ್ರಿಯ ನಟಿ
ಹರ್ಷ ಹೇಳಿದ ಕಥೆ ಇಷ್ಟವಾಗಿ ತಕ್ಷಣವೇ ಈ ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ನೀಡಿದರಂತೆ ಶಿವಣ್ಣ. ವರಮಹಾಲಕ್ಷ್ಮೀ ಹಬ್ಬದಂದು ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರಂತೆ. ಜೊತೆಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರು ನಟಿಸುವ ಸಾಧ್ಯತೆ ಇದೆ. ಈಗಾಗಲೇ ನಿರ್ಮಾಪಕರು ಕೆಲ ನಟಿಯರೊಂದಿಗೆ ಮೊದಲ ಹಂತದ ಮಾತುಕತೆ ಮಾಡಿದ್ದಾರಂತೆ. ಸದ್ಯಕ್ಕಿನ್ನೂ ಚಿತ್ರಕ್ಕೆ ಶೀರ್ಷಿಕೆ ಅಧಿಕೃತಗೊಂಡಿಲ್ಲ. ಇನ್ನು, ಪೋಸ್ಟರ್‌ ಮೇಲಿನ 'ಹೆದರಬೇಡಾ.. ಕ್ಷಮಿಸಬೇಡಾ..' ಸಾಲುಗಳು ಕುತೂಹಲ ಮೂಡಿಸಿವೆ.

ನಟ ಶಿವರಾಜ್‌ಕುಮಾರ್ ಮನೆಯಲ್ಲಿ ಸಭೆ ನಡೆಸಿದ್ದೇಕೆ ಕನ್ನಡದ ಸ್ಟಾರ್ ನಟರು?

ಶಿವಣ್ಣನ ಕೈಯಲ್ಲಿವೆ ಸಾಕಷ್ಟು ಸಿನಿಮಾಗಳು
ನಿರ್ದೇಶಕ ಹರ್ಷ ಜೊತೆ 'ಭಜರಂಗಿ 2' ಸಿನಿಮಾ ಮಾಡಿದ್ದಾರೆ. ಇದರ ನಿರ್ಮಾಣವನ್ನು ಜಯಣ್ಣ-ಭೋಗೇಂದ್ರ ಮಾಡಿದ್ದಾರೆ. ಟೀಸರ್‌ ಮೂಲಕವೇ ಚಿತ್ರ ನಿರೀಕ್ಷೆ ಮೂಡಿಸಿದೆ. ಅದಾದ ಮೇಲೆ ತಮಿಳಿನ ಸತ್ಯಜ್ಯೋತಿ ಬ್ಯಾನರ್‌ಗಾಗಿ 'ಆರ್‌ಡಿಎಕ್ಸ್‌' ಚಿತ್ರವನ್ನು ಮಾಡಿಕೊಡಲಿದ್ದಾರೆ ಶಿವಣ್ಣ. ಅದರ ನಿರ್ದೇಶನವನ್ನು ತಮಿಳಿನ ರವಿ ಅರಸು ಮಾಡಲಿದ್ದಾರೆ. ಇನ್ನು, ತೆಲುಗಿನ ನಿರ್ದೇಶಕ ರಾಮ್‌ ದುಲಿಪುಡಿ ಮತ್ತು ಲಕ್ಕಿ ಗೋಪಾಲ್ ಜೊತೆಗೂ ಒಂದೊಂದು ಸಿನಿಮಾ ಮಾಡಲಿದ್ದಾರೆ ಶಿವಣ್ಣ. ಇನ್ನು, ತಮ್ಮದೇ ಬ್ಯಾನರ್‌ನಲ್ಲಿ 'ಭೈರತಿ ರಣಗಲ್‌' ಮಾಡಲಿದ್ದಾರೆ.

ಶಿವಣ್ಣ ಮನೆಯಲ್ಲಿ ನಡೆದ ಚಿತ್ರರಂಗದ ಸಭೆಗೆ ನಟ ಜಗ್ಗೇಶ್‌ ಗೈರಾಗಿದ್ದಕ್ಕೆ ಇಲ್ಲಿದೆ ಕಾರಣ!

View this post on Instagram #happybirthdayshivanna #happybirthdaylegend A post shared by Dr.Shivarajkumar Fc (@dr.shivarajkumar) on Jul 11, 2020 at 10:53pm PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌