ಆ್ಯಪ್ನಗರ

ಹೀರೋ ಆದ ಕಾಮಿಡಿ ಕಿಲಾಡಿ ಶಿವರಾಜ್‌ ಕೆ.ಆರ್. ಪೇಟೆ

ಈ ಹಿಂದೆ ಅನೇಕ ಹಾಸ್ಯ ನಟರ ಈಗಾಗಲೇ ಹೀರೋ ಆಗಿ ಮಿಂಚಿದ್ದಾರೆ. ಈಗ ಆ ಸಾಲಿಗೆ ನಟ ಶಿವರಾಜ್ ಕೆ. ಆರ್. ಪೇಟೆ ಸೇರಿದ್ದಾರೆ. ಮುಂದಿನ ಸಿನಿಮಾದಲ್ಲಿ ಅವರು ವಿಭಿನ್ನ ಪಾತ್ರ ಮಾಡುವ ಮೂಲಕ ನಾಯಕರಾಗುತ್ತಿದ್ದಾರೆ.

Vijaya Karnataka Web 13 Nov 2019, 11:08 am
'ಕಾಮಿಡಿ ಕಿಲಾಡಿಗಳು' ಶೋ ಮೂಲಕ ಬೆಳಕಿಗೆ ಬಂದ ಪ್ರತಿಭೆ ಶಿವರಾಜ್ ಕೆ.ಆರ್. ಪೇಟೆ. ಶೋ ನಂತರ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿ ಗಮನಸೆಳೆದರು. 'ಯಜಮಾನ', 'ಸಿಂಗ', 'ಅಯೋಗ್ಯ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅವರು ಹೀರೋ ಆಗುತ್ತಿದ್ದಾರೆ.
Vijaya Karnataka Web ಶಿವರಾಜ್


ಚುರುಮುರಿ: ಇವರೇ ಕಾಮಿಡಿ ಕಿಲಾಡಿಗಳು

ಕಾಮಿಡಿ ಪಾತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಿವರಾಜ್‌, ಈಗ 'ನಾನು ಮತ್ತು ಗುಂಡ' ಚಿತ್ರದ ಮೂಲಕ ನಾಯಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಶ್ರೀನಿವಾಸ್‌ ತಿಮ್ಮಯ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿಅವರು ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರೆ. ಮನುಷ್ಯ ಮತ್ತು ನಾಯಿ ನಡುವಿನ ಅಪರೂಪದ ಸ್ಟೋರಿಯನ್ನು ಈ ಸಿನಿಮಾದಲ್ಲಿಹೇಳಲು ಹೊರಟಿರುವ ನಿರ್ದೇಶಕರು, ದಂಪತಿಯೊಂದು ನಾಯಿಯನ್ನು ಅಕ್ಕರೆಯಿಂದ ಹೇಗೆ ನೋಡಿಕೊಳ್ಳುತ್ತಿತ್ತು ಮತ್ತು ಅವರ ಬದುಕಿನಲ್ಲಿನಾಯಿ ಎಷ್ಟು ಮಹತ್ವದ್ದಾಗಿತ್ತು ಎಂಬ ಕಥೆಯನ್ನು ಹೇಳಿದ್ದಾರಂತೆ.

ಗುಂಡನ ಜತೆ ಬಂದ ಶಿವರಾಜ್‌ ಕೆ ಆರ್‌ ಪೇಟೆ

ಶಿವರಾಜ್‌ ನಾಯಕರಾಗಿದ್ದರೆ, ಸಂಯುಕ್ತಾ ಬೆಳವಾಡಿ ನಾಯಕಿ. ನಾಯಿಯೊಂದು ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾ ವಿಶೇಷ. 'ನಮ್ಮ ನೆಚ್ಚಿನ ಪ್ರಾಣಿಗಳು ಜನರ ಜೀವನದಲ್ಲಿಏನೆಲ್ಲ ಪಾತ್ರಗಳನ್ನು ವಹಿಸುತ್ತವೆ ಎಂಬ ಅಪರೂಪದ ಕಥೆ ಸಿನಿಮಾದಲ್ಲಿದೆ. ತುಂಬಾ ಪ್ರೀತಿಸುವ ಪ್ರಾಣಿಗಳು ಮನುಷ್ಯನಿಂದ ದೂರವಾದಾಗ ಅವನು ಎಷ್ಟೆಲ್ಲ ನೋವುಗಳನ್ನು ಅನುಭವಿಸುತ್ತಾನೆ ಎನ್ನುವ ಭಾವನಾತ್ಮಕ ಅಂಶಗಳು ಕೂಡ ಚಿತ್ರದಲ್ಲಿವೆ' ಎನ್ನುತ್ತಾರೆ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌