ಆ್ಯಪ್ನಗರ

IAS ಅಧಿಕಾರಿ ಆಗ್ತಿದ್ದಾರೆ ಶ್ರದ್ಧಾ ಶ್ರೀನಾಥ್‌! ಬಹುಭಾಷೆಯಲ್ಲಿ ಮಿಂಚಿದ ಕನ್ನಡತಿಗೆ ಸಿಕ್ತು ಬಂಪರ್‌ ಚಾನ್ಸ್‌!

ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತ, ಭದ್ರವಾಗಿ ನೆಲೆ ಕಂಡುಕೊಳ್ಳುತ್ತಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್‌. ಅವರಿಗೆ ಈಗೊಂದು ಬಂಪರ್‌ ಚಾನ್ಸ್‌ ಸಿಕ್ಕಿದೆ. ಅದರ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ 'ಯು ಟರ್ನ್‌' ಬೆಡಗಿ.

Vijaya Karnataka Web 28 Oct 2020, 6:26 pm
ಕನ್ನಡತಿ ಶ್ರದ್ಧಾ ಶ್ರೀನಾಥ್‌ ಅವರಿಗೆ ಪರಭಾಷೆಯಲ್ಲೂ ಸಖತ್ ಬೇಡಿಕೆ ಇದೆ. ಅಕ್ಕಪಕ್ಕದ ರಾಜ್ಯಗಳ ಸ್ಟಾರ್‌ ಕಲಾವಿದರ ಜೊತೆ ನಟಿಸುವ ಅವಕಾಶವನ್ನು ಅವರು ಪಡೆದುಕೊಂಡಿದ್ದಾರೆ. ಈಗ ಅವರು IAS ಅಧಿಕಾರಿ ಆಗುವ ತವಕದಲ್ಲಿದ್ದಾರೆ. ಅರೆರೆ, ಇದೇನಿದು ಶ್ರದ್ಧಾ ನಟನೆ ಬಿಟ್ಟು IAS ಅಧಿಕಾರಿ ಆಗ್ತಾರೆ ಎಂದುಕೊಂಡ್ರಾ? ಹಾಗೇನೂ ಇಲ್ಲ. ಮುಂದಿನ ಸಿನಿಮಾದಲ್ಲಿ ಅವರು IAS ಅಧಿಕಾರಿಯ ಪಾತ್ರ ಮಾಡಲಿದ್ದಾರೆ.
Vijaya Karnataka Web ಶ್ರದ್ಧಾ ಶ್ರೀನಾಥ್‌


ಮಲಯಾಳಂನಲ್ಲಿ ಶ್ರದ್ಧಾ ಒಂದು ಸಿನಿಮಾ ಒಪ್ಪಿಕೊಂಡಿದ್ದು, ಅದರಲ್ಲಿ ಅವರು ಐಎಎಸ್‌ ಆಫೀಸರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆ ಚಿತ್ರಕ್ಕೆ ಖ್ಯಾತ ನಿರ್ದೇಶಕ ಬಿ. ಉನ್ನಿಕೃಷ್ಣನ್‌ ಆ್ಯಕ್ಷನ್‌-ಕಟ್ ಹೇಳಲಿದ್ದಾರೆ. ಇದರಲ್ಲಿ ಮಾಲಿವುಡ್‌ನ ಲೆಜೆಂಡರಿ ನಟ ಮೋಹನ್‌ಲಾಲ್‌ ಜೊತೆಗೆ ಶ್ರದ್ಧಾ ತೆರೆಹಂಚಿಕೊಳ್ಳಲಿದ್ದಾರೆ ಎಂಬುದು ವಿಶೇಷ. ನ.23ರಂದು ಕೇರಳದಲ್ಲಿ ಈ ಸಿನಿಮಾದ ಶೂಟಿಂಗ್‌ನಲ್ಲಿ ಅವರು ಭಾಗಿ ಆಗುವ ಸಾಧ್ಯತೆ ಇದೆ.

ಅಂದಹಾಗೆ, ಶ್ರದ್ಧಾಗೆ ಮಾಲಿವುಡ್‌ ಹೊಸದೇನೂ ಅಲ್ಲ. ಅವರು ಮೊದಲ ಸಿನಿಮಾ ಮಾಡಿದ್ದೇ ಮಲಯಾಳಂನಲ್ಲಿ. ಈಗ 5 ವರ್ಷಗಳ ಬಳಿಕ ಅವರು ಮತ್ತೆ ಮಾಲಿವುಡ್‌ಗೆ ಮರಳುತ್ತಿದ್ದಾರೆ. 'ಮತ್ತೆ ಮಲಯಾಳಂನಲ್ಲಿ ನಟಿಸಬೇಕು ಎಂಬುದು ನನ್ನ ಆಸೆ ಆಗಿತ್ತು. ಈ ಚಿತ್ರಕ್ಕೆ ನೋ ಎನ್ನಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಇದರಲ್ಲಿ ಮೋಹನ್‌ಲಾಲ್‌ ಸರ್‌ ಇದ್ದಾರೆ. ಉನ್ನಿಕೃಷ್ಣನ್‌ ಅವರ ನಿರೂಪಣೆ ಕೂಡ ಅದ್ಭುತವಾಗಿದೆ' ಎಂದಿದ್ದಾರೆ ಶ್ರದ್ಧಾ.

also read: ಶ್ರದ್ಧಾ ಶ್ರೀನಾಥ್‌ ಪರಭಾಷೆಗೆ ಹೋದರೂ ಕನ್ನಡದವರನ್ನು ಮರೆತಿಲ್ಲ! ಇಲ್ಲಿದೆ ಬೆಸ್ಟ್‌ ಉದಾಹರಣೆ

ಬೇರೆ ಬೇರೆ ಭಾಷೆಗಳಲ್ಲಿ ನಟಿಸುವುದು ಶ್ರದ್ಧಾಗೆ ಸವಾಲಾಗಿದೆ. ಭಾಷೆಯ ಸಮಸ್ಯೆ ಕೂಡ ಎದುರಾಗುತ್ತದೆ. ಕನ್ನಡದಿಂದ ತಮಿಳಿಗೆ ಕಾಲಿಟ್ಟ ಅವರು ಅಲ್ಲಿನ ಜನರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಈಗ ಮಲಯಾಳಂನಲ್ಲಿ ನಟಿಸುವುದು ಅವರಿಗೆ ಭಾಷೆಯ ಕಾರಣಕ್ಕಾಗಿ ಕೊಂಚ ಕಷ್ಟ ಎನಿಸುತ್ತಿದೆ. ಅದು ಕೂಡ ಮೋಹನ್‌ಲಾಲ್‌ ಜೊತೆ ಅಭಿನಯಿಸಬೇಕಿರುವುದರಿಂದ ಶ್ರದ್ಧಾ ಸ್ವಲ್ಪ ನರ್ವಸ್‌ ಆಗಿದ್ದಾರಂತೆ. ಕನ್ನಡದಲ್ಲಿ ಅವರು ಸತೀಸ್‌ ನೀನಾಸಂ ಜೊತೆ ನಟಿಸಿರುವ ಸಿನಿಮಾದ ಶೀರ್ಷಿಕೆ ಬದಲಾಗುತ್ತಿದೆ.

also read: ಸತೀಶ್‌-ಶ್ರದ್ಧಾ ನಟನೆಯ 'ಗೋದ್ರಾ' ಚಿತ್ರಕ್ಕೆ ಟೈಟಲ್‌ ಬದಲಾವಣೆ! ಕೊನೇ ಹಂತದಲ್ಲಿ ಇದೇನಿದು ಕಿರಿಕ್‌?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌