80-90ರ ದಶಕದಲ್ಲಿ ಕನ್ನಡದ ಚಿತ್ರರಂಗದಲ್ಲಿ ನಟನಾಗಿ ಬೇಡಿಕೆಯಲ್ಲಿದ್ದವರು ಬಾಲರಾಜ್. 'ಸೆಂಚುರಿ ಸ್ಟಾರ್' ಶಿವರಾಜ್ಕುಮಾರ್ ಅವರ ಜೊತೆ 'ಆನಂದ್', 'ಮನ ಮೆಚ್ಚಿದ ಹುಡುಗಿ', 'ಸಂಯುಕ್ತ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಡಾ. ರಾಜ್ ಕುಟುಂಬದ ಸಿನಿಮಾಗಳಲ್ಲಿ ಹೆಚ್ಚಾಗಿ ಅವರು ಕಾಣಿಸಿಕೊಳ್ಳುತ್ತಿದ್ದರು. ಈಚೆಗೆ ಒಂದಷ್ಟು ಸಮಯದಿಂದ ಅವರು ಸಿನಿಮಾರಂಗದಿಂದ ಬ್ರೇಕ್ ಪಡೆದುಕೊಂಡಿದ್ದರು. ಆದರೀಗ ಮತ್ತೆ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ. 'ಡಾರ್ಕ್ ಫ್ಯಾಂಟಸಿ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಅವರು ಬಣ್ಣ ಹಚ್ಚಿದ್ದಾರೆ.
ನಟ ಬಾಲರಾಜ್ ರೀ-ಎಂಟ್ರಿ
'ನಾನು ಚಿತ್ರರಂಗಕ್ಕೆ ಬರಲು ಇಬ್ಬರು ಕಾರಣಕರ್ತರು. ಹೊನ್ನವಳ್ಳಿ ಕೃಷ್ಣ ಮತ್ತು ಎಸ್.ಎ. ಗೋವಿಂದರಾಜ್. ಚೆನ್ನೈನಲ್ಲಿದ್ದ ನನ್ನನ್ನು ಬೆಂಗಳೂರಿಗೆ ಕರೆತಂದು, ಧ್ವನಿಮುದ್ರಣ ತಂತ್ರಜ್ಞನ ಕೆಲಸ ನೀಡಿದ್ದರು. ಆ ನಂತರ ನಾನು ಕಲಾವಿದನಾಗಿಯೂ ಗುರುತಿಸಿಕೊಂಡೆ. ಹಾಗೆ ಶುರುವಾದ ಪಯಣ ಇಲ್ಲಿಯವರೆಗೆ ಬಂದು ನಿಂತಿದೆ. ಈ ಚಿತ್ರದ ನಿರ್ಮಾಪಕ ನಾಗರಾಜ್ ನನ್ನ ಹಳೆಯ ಸ್ನೇಹಿತ. 'ಆನಂದ್' ಸಿನಿಮಾ ತೆರೆಗೆ ಬಂದ ಕಾಲದಿಂದಲೂ ಜೊತೆಗೇ ಇದ್ದೇವೆ. ನಿರ್ದೇಶಕರು ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಅಂದರು. ಅವರು ಅಂದುಕೊಂಡಂತೆ ಪಾತ್ರ ನಿರ್ವಹಿಸಿದ್ದೀನಿ ಎನ್ನುವ ಭರವಸೆ ನನಗಿದೆ' ಎನ್ನುತ್ತಾರೆ ಅವರು.
ಬಹುತೇಕ ಕೆಲಸಗಳು ಮುಕ್ತಾಯ
ರಾಘವೇಂದ್ರ ರಾಜ್ ಕುಮಾರ್ ನಟನೆಯ 'ಆಡಿಸಿದಾತ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದ ಫಣೀಶ್ ಭಾರದ್ವಾಜ್, ಆ ಸಿನಿಮಾ ತೆರೆಕಾಣುವ ಮೊದಲೇ 'ಡಾರ್ಕ್ ಫ್ಯಾಂಟಸಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಈಗಾಗಲೇ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರ, ಲಾಕ್ಡೌನ್ನಿಂದಾಗಿ ಕೊಂಚ ತಡವಾಗಿದೆ. ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದು ಇಂಗ್ಲಿಷ್ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳು ಈ ಸಿನಿಮಾದಲ್ಲಿವೆ. ಶ್ರೀ ಮಹದೇವ್ ಈ ಸಿನಿಮಾದ ಹೀರೋ ಆಗಿ ನಟಿಸಿದ್ದಾರೆ.
19 ವರ್ಷದ ಹುಡುಗಿಗೆ ನ್ಯಾಯ ಸಿಗಲು ಇನ್ನು 7 ವರ್ಷ ಕಾಯೋಕಾಗಲ್ಲ: ಶ್ರೀಮಹದೇವ್!
ಡಾರ್ಕ್ ಫ್ಯಾಂಟಸಿ ಟೀಸರ್ ಲಾಂಚ್
ಈಚೆಗೆ 'ಡಾರ್ಕ್ ಫ್ಯಾಂಟಸಿ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತು. ಅದಕ್ಕೆ ಡಾ. ರಾಜ್ಕುಮಾರ್ ಅವರ ಮೊಮ್ಮಕ್ಕಳಾದ ಧೀರೇನ್ ರಾಮ್ಕುಮಾರ್, ಷಣ್ಮುಖ ಜೊತೆಗೆ ಎಸ್.ಎ. ಗೋವಿಂದರಾಜ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. 'ಈ ಚಿತ್ರದ ನಾಯಕನಟ ಶ್ರೀ ನಮ್ಮ ಊರಿನ ಕಡೆಯವರು. ಇವರನ್ನು ನೋಡಿದಾಗಲೆಲ್ಲಾ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ ಎನ್ನುವ ಭರವಸೆ ಮೂಡುತ್ತದೆ. ನಿರ್ಮಾಪಕರು ಸಹ ನನ್ನ ಆತ್ಮೀಯರು ಡಾರ್ಕ್ ಫ್ಯಾಂಟಸಿ ಚಿತ್ರತಂಡಕ್ಕೆ ಒಳಿತಾಗಲಿ' ಎಂದು ಎಸ್.ಎ. ಗೋವಿಂದರಾಜ್ ಹರಸಿದರು. ಸುನೀತಾ ಮತ್ತು ಸುಶ್ಮಿತಾ ನಾಯಕಿರಾಗಿ ಕಾಣಿಸಿಕೊಂಡಿದ್ದಾರೆ. ಶೋಭರಾಜ್, ಮನದೀಪ್ ರಾಯ್, ಮೋಹನ್ ಜುನೇಜ ಮುಂತಾದವರು ಪೋಷಕ ಪಾತ್ರಗಳಲ್ಲಿ ಇದ್ದಾರೆ. ನಾಗರಾಜ್ ಮತ್ತು ನಿತನ್ ಬಂಡವಾಳ ಹೂಡಿದ್ದಾರೆ.
ಉತ್ತರ ಕರ್ನಾಟಕದ ಜನತೆಗೆ ಸರ್ಕಾರದ ಜೊತೆಗೆ ನಾವು ಕೂಡ ಸಹಾಯ ಮಾಡಬೇಕು: ಶ್ರೀಮಹದೇವ್!
ನಟ ಬಾಲರಾಜ್ ರೀ-ಎಂಟ್ರಿ
'ನಾನು ಚಿತ್ರರಂಗಕ್ಕೆ ಬರಲು ಇಬ್ಬರು ಕಾರಣಕರ್ತರು. ಹೊನ್ನವಳ್ಳಿ ಕೃಷ್ಣ ಮತ್ತು ಎಸ್.ಎ. ಗೋವಿಂದರಾಜ್. ಚೆನ್ನೈನಲ್ಲಿದ್ದ ನನ್ನನ್ನು ಬೆಂಗಳೂರಿಗೆ ಕರೆತಂದು, ಧ್ವನಿಮುದ್ರಣ ತಂತ್ರಜ್ಞನ ಕೆಲಸ ನೀಡಿದ್ದರು. ಆ ನಂತರ ನಾನು ಕಲಾವಿದನಾಗಿಯೂ ಗುರುತಿಸಿಕೊಂಡೆ. ಹಾಗೆ ಶುರುವಾದ ಪಯಣ ಇಲ್ಲಿಯವರೆಗೆ ಬಂದು ನಿಂತಿದೆ. ಈ ಚಿತ್ರದ ನಿರ್ಮಾಪಕ ನಾಗರಾಜ್ ನನ್ನ ಹಳೆಯ ಸ್ನೇಹಿತ. 'ಆನಂದ್' ಸಿನಿಮಾ ತೆರೆಗೆ ಬಂದ ಕಾಲದಿಂದಲೂ ಜೊತೆಗೇ ಇದ್ದೇವೆ. ನಿರ್ದೇಶಕರು ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಅಂದರು. ಅವರು ಅಂದುಕೊಂಡಂತೆ ಪಾತ್ರ ನಿರ್ವಹಿಸಿದ್ದೀನಿ ಎನ್ನುವ ಭರವಸೆ ನನಗಿದೆ' ಎನ್ನುತ್ತಾರೆ ಅವರು.
ಬಹುತೇಕ ಕೆಲಸಗಳು ಮುಕ್ತಾಯ
ರಾಘವೇಂದ್ರ ರಾಜ್ ಕುಮಾರ್ ನಟನೆಯ 'ಆಡಿಸಿದಾತ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದ ಫಣೀಶ್ ಭಾರದ್ವಾಜ್, ಆ ಸಿನಿಮಾ ತೆರೆಕಾಣುವ ಮೊದಲೇ 'ಡಾರ್ಕ್ ಫ್ಯಾಂಟಸಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಈಗಾಗಲೇ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರ, ಲಾಕ್ಡೌನ್ನಿಂದಾಗಿ ಕೊಂಚ ತಡವಾಗಿದೆ. ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದು ಇಂಗ್ಲಿಷ್ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳು ಈ ಸಿನಿಮಾದಲ್ಲಿವೆ. ಶ್ರೀ ಮಹದೇವ್ ಈ ಸಿನಿಮಾದ ಹೀರೋ ಆಗಿ ನಟಿಸಿದ್ದಾರೆ.
19 ವರ್ಷದ ಹುಡುಗಿಗೆ ನ್ಯಾಯ ಸಿಗಲು ಇನ್ನು 7 ವರ್ಷ ಕಾಯೋಕಾಗಲ್ಲ: ಶ್ರೀಮಹದೇವ್!
ಡಾರ್ಕ್ ಫ್ಯಾಂಟಸಿ ಟೀಸರ್ ಲಾಂಚ್
ಈಚೆಗೆ 'ಡಾರ್ಕ್ ಫ್ಯಾಂಟಸಿ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತು. ಅದಕ್ಕೆ ಡಾ. ರಾಜ್ಕುಮಾರ್ ಅವರ ಮೊಮ್ಮಕ್ಕಳಾದ ಧೀರೇನ್ ರಾಮ್ಕುಮಾರ್, ಷಣ್ಮುಖ ಜೊತೆಗೆ ಎಸ್.ಎ. ಗೋವಿಂದರಾಜ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. 'ಈ ಚಿತ್ರದ ನಾಯಕನಟ ಶ್ರೀ ನಮ್ಮ ಊರಿನ ಕಡೆಯವರು. ಇವರನ್ನು ನೋಡಿದಾಗಲೆಲ್ಲಾ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ ಎನ್ನುವ ಭರವಸೆ ಮೂಡುತ್ತದೆ. ನಿರ್ಮಾಪಕರು ಸಹ ನನ್ನ ಆತ್ಮೀಯರು ಡಾರ್ಕ್ ಫ್ಯಾಂಟಸಿ ಚಿತ್ರತಂಡಕ್ಕೆ ಒಳಿತಾಗಲಿ' ಎಂದು ಎಸ್.ಎ. ಗೋವಿಂದರಾಜ್ ಹರಸಿದರು. ಸುನೀತಾ ಮತ್ತು ಸುಶ್ಮಿತಾ ನಾಯಕಿರಾಗಿ ಕಾಣಿಸಿಕೊಂಡಿದ್ದಾರೆ. ಶೋಭರಾಜ್, ಮನದೀಪ್ ರಾಯ್, ಮೋಹನ್ ಜುನೇಜ ಮುಂತಾದವರು ಪೋಷಕ ಪಾತ್ರಗಳಲ್ಲಿ ಇದ್ದಾರೆ. ನಾಗರಾಜ್ ಮತ್ತು ನಿತನ್ ಬಂಡವಾಳ ಹೂಡಿದ್ದಾರೆ.
ಉತ್ತರ ಕರ್ನಾಟಕದ ಜನತೆಗೆ ಸರ್ಕಾರದ ಜೊತೆಗೆ ನಾವು ಕೂಡ ಸಹಾಯ ಮಾಡಬೇಕು: ಶ್ರೀಮಹದೇವ್!