ಆ್ಯಪ್ನಗರ

ರಾಮಾಯಣ ಧಾರಾವಾಹಿಯ 'ಸುಗ್ರೀವ' ಪಾತ್ರಧಾರಿ ಶ್ಯಾಮ್ ಸುಂದರ್ ಕಲಾನಿ ಇನ್ನಿಲ್ಲ

ದೂರದರ್ಶನ ನ್ಯಾಶನಲ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿಯಲ್ಲಿ ಸುಗ್ರೀವನ ಪಾತ್ರ ಪೋಷಿಸಿರುವ ಹಾಗೂ ಮಹಾಭಾರತದಲ್ಲಿ ಭೀಮನಾಗಿ ಮಿಂಚಿರುವ ಶ್ಯಾಮ್ ಸುಂದರ್ ಕಲಾನಿ ನಿಧನರಾಗಿದ್ದಾರೆ.

TIMESOFINDIA.COM 10 Apr 2020, 2:29 pm

ದೂರದರ್ಶನ ನ್ಯಾಶನಲ್ ವಾಹಿನಿಯಲ್ಲಿ ಮರು ಪ್ರಸಾರವಾಗುತ್ತಿರುವ ರಮಾನಂದ ಸಾಗರ್ ನಿರ್ದೇಶನದ 'ರಾಮಾಯಣ' ಧಾರಾವಾಹಿಯಲ್ಲಿ ಸುಗ್ರೀವ ಹಾಗೂ ಮಹಾಭಾರತ ಧಾರಾವಾಹಿಯಲ್ಲಿ ಭೀಮನ ಪಾತ್ರಗಳನ್ನು ಪೋಷಿಸಿರುವ ನಟ ಶ್ಯಾಮ್ ಸುಂದರ್ ಕಲಾನಿ ನಿಧನರಾಗಿದ್ದಾರೆ. ಸುದೀರ್ಘ ಸಮಯದಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದಿವೆ ಮೂಲಗಳು.
Vijaya Karnataka Web ಶ್ಯಾಮ್ ಸುಂದರ್ ಕಲಾನಿ


ಈ ಬಗ್ಗೆ ರಾಮಾಯಣ ಧಾರಾವಾಹಿಯಲ್ಲಿ ರಾಮ ಮತ್ತು ಲಕ್ಷ್ಮಣ ಪಾತ್ರಗಳನ್ನು ಪೋಷಿಸಿರುವ ಅರುಣ್ ಗೋವಿಲ್ ಹಾಗೂ ಸುನಿಲ್ ಲಾಹ್ರಿ ಟ್ವೀಟ್ ಮಾಡಿ ಶ್ಯಾಮ್ ಸುಂದರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅರುಣ್ ಗೋವಿಲ್ ಈ ರೀತಿ ಟ್ವೀಟ್ ಮಾಡಿದ್ದಾರೆ, "ರಮಾನಂದ ಸಾಗರ್ ಅವರ ರಾಮಾಯಣದಲ್ಲಿ ಸುಗ್ರೀವನ ಪಾತ್ರ ಪೋಷಿಸಿರುವ ಶ್ಯಾಮ್ ಸುಂದರ್ ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಅವರು ಅತ್ಯಂತ ವಿನಯ ಹಾಗೂ ಸುಸಂಸ್ಕೃತ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದಿದ್ದಾರೆ.

ಲಕ್ಷ್ಮಣನ ಪಾತ್ರಧಾರಿ ಸುನಿಲ್ ಲಾಹ್ರಿ ಟ್ವೀಟ್ ಮಾಡಿದ್ದು, "ನನ್ನ ಸಹೋದ್ಯೋಗಿ ಶ್ಯಾಮ್ ಕಲಾನಿಯವರ ಹಠಾತ್ ಮರಣದ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ. ನಮ್ಮೊಂದಿಗೆ ರಾಮಾಯಣದಲ್ಲಿ ಸುಗ್ರೀವ ಹಾಗೂ ಬಾಲಿ ಪಾತ್ರಗಳನ್ನು ಪೋಷಿಸಿದ್ದರು. ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ... ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದಿದ್ದಾರೆ.

ಕೇವಲ ನಾಲ್ಕು ಎಪಿಸೋಡ್‍‍ಗಳಿಂದ 170 ದಶಲಕ್ಷ ವೀಕ್ಷಕರನ್ನು ಗಳಿಸಿದ 'ರಾಮಾಯಣ' ಧಾರಾವಾಹಿ

ಕೊರೊನಾ ವೈರಸ್ ತಡೆಯಲು ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಈ ಧಾರಾವಾಹಿಯನ್ನು ಮಾರ್ಚ್ 28ರಿಂದ ಮರು ಪ್ರಸಾರ ಮಾಡಲಾಗುತ್ತಿದೆ. ಈ ಧಾರಾವಾಹಿಯನ್ನು ಜನಪ್ರಿಯವಾಗಿಸಲು ಸರಕಾರ ಸಹ ಸಾಕಷ್ಟು ಪ್ರಚಾರವನ್ನೂ ನೀಡಿದೆ.

ಕುಟುಂಬ ಸಮೇತ ರಾಮಾಯಣ ಧಾರಾವಾಹಿ ವೀಕ್ಷಿಸಿದ ರಾಮನ ಪಾತ್ರಧಾರಿ ಅರುಣ್ ಗೋವಿಲ್


ಶನಿವಾರ ಬೆಳಗ್ಗೆ ಪ್ರಸಾರವಾದ ಧಾರಾವಾಹಿಗೆ 34 ದಶಲಕ್ಷ ವೀಕ್ಷಕರು ಆಗಮಿಸಿದ್ದು ರೇಟಿಂಗ್ ಶೇ.3.4ರಷ್ಟಿತ್ತು. ಅಂದು ಸಂಜೆ ಪ್ರಸಾರವಾದ ಎಪಿಸೋಡ್‍ಗೆ 45 ದಶಲಕ್ಷ ವೀಕ್ಷಕರು ಆಗಮಿಸಿದ್ದು ರೇಟಿಂಗ್ ಶೇಕಡಾ 2.5ರಷ್ಟಾಗಿದೆ ಎಂದಿದ್ದಾರೆ.

ಕಿರುತೆರೆಯಲ್ಲಿ ವೀಕ್ಷಕರು ಮತ್ತೆ ನೋಡಲೇಬೇಕಾದಂತಹ ಕ್ಲಾಸಿಕ್ ಧಾರಾವಾಹಿಗಳು


ಭಾನುವಾರದ ಹೊತ್ತಿಗೆ ರೇಟಿಂಗ್ ಹಾಗೂ ವೀಕ್ಷಕರಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು ವೀಕ್ಷಕರ ಸಂಖ್ಯೆ ಬೆಳಗ್ಗೆ ಮತ್ತು ಸಂಜೆ ಕ್ರಮವಾಗಿ 40 ದಶಲಕ್ಷ ಹಾಗೂ 51 ದಶಲಕ್ಷಗಳಷ್ಟಿತ್ತು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌