ಆ್ಯಪ್ನಗರ

ಶಿವಣ್ಣನ ಸಿನಿಮಾದಲ್ಲಿ 'ಆ ಸಾಂಗ್' ಹಾಡಿದ್ದಕ್ಕೆ ಬೇಸರಗೊಂಡ ಗಾಯಕ ರಘು ದೀಕ್ಷಿತ್‌!

ಗಾಯಕ/ಸಂಗೀತ ನಿರ್ದೇಶಕ ರಘು ದೀಕ್ಷಿತ್‌ಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಅವರ ಕಂಚಿನ ಕಂಠದಲ್ಲಿ ಹಾಡುಗಳನ್ನು ಕೇಳುವುದೇ ಆನಂದ. ಗಾಯಕರಾಗಿ ಮಾತ್ರವಲ್ಲದೆ, ಸಂಗೀತ ನಿರ್ದೇಶಕರಾಗಿಯೂ ಅವರು ಖ್ಯಾತರು.

Vijaya Karnataka Web 25 Feb 2020, 2:01 pm
ಗಾಯಕ/ಸಂಗೀತ ನಿರ್ದೇಶಕ ರಘು ದೀಕ್ಷಿತ್‌ಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಅವರ ಕಂಚಿನ ಕಂಠದಲ್ಲಿ ಹಾಡುಗಳನ್ನು ಕೇಳುವುದೇ ಆನಂದ. ಗಾಯಕರಾಗಿ ಮಾತ್ರವಲ್ಲದೆ, ಸಂಗೀತ ನಿರ್ದೇಶಕರಾಗಿಯೂ ಅವರು ಖ್ಯಾತರು. ಸಂತ ಶಿಶುನಾಳ ಷರೀಫರ ಗೀತೆಗಳಿಗೆ ಹೊಸದಾಗಿ ಸಂಗೀತ ಸಂಯೋಜಿಸಿ, ಹಾಡಿ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದರು ಅವರು. 'ಜಸ್ಟ್ ಮಾತ್ ಮಾತಲ್ಲಿ' ಸೇರಿದಂತೆ ಕನ್ನಡದ ಒಂದಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಇದೀಗ ಅವರು ಹೇಳಿದ ಒಂದು ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ಅದೇನೆಂದರೆ, ಕಳೆದ ವರ್ಷ ಅವರು ಹಾಡಿದ ಒಂದು ಹಾಡಿನ ಬಗ್ಗೆ ಈಗ ಪ್ರತಿಕ್ರಿಯೆ ನೀಡಿದ್ದಾರೆ. 'ಈಗಲೂ ಆ ಹಾಡು ಹಾಡಿದ್ದಕ್ಕೆ ಪಶ್ಚಾತ್ತಾಪ ಇದೆ' ಎಂದಿದ್ದಾರೆ ಅವರು. ಅಂದಹಾಗೆ, ಅದು ಶಿವರಾಜ್‌ಕುಮಾರ್ ಸಿನಿಮಾದ ಗೀತೆಯಾಗಿದೆ!
Vijaya Karnataka Web singer raghu dixit unhappy with police baby song
ಶಿವಣ್ಣನ ಸಿನಿಮಾದಲ್ಲಿ 'ಆ ಸಾಂಗ್' ಹಾಡಿದ್ದಕ್ಕೆ ಬೇಸರಗೊಂಡ ಗಾಯಕ ರಘು ದೀಕ್ಷಿತ್‌!


​ರುಸ್ತುಂ ಸಿನಿಮಾದಲ್ಲಿತ್ತು ಪೊಲೀಸ್ ಬೇಬಿ ಹಾಡು

ರವಿವರ್ಮ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ 'ರುಸ್ತುಂ' ಚಿತ್ರದಲ್ಲಿ ಒಂದು ಹಾಡು ಇತ್ತು. 'ಯೂ ಆರ್ ಮೈ ಪೊಲೀಸ್ ಬೇಬಿ..' ಎಂದು ಶುರುವಾಗುವ ಈ ಹಾಡನ್ನು ಕಂಪೋಸ್ ಮಾಡಿದ್ದು ಅನೂಪ್‌ ಸಿಳೀನ್‌. ಶಿವರಾಜ್‌ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್ ಸಖತ್ ಆಗಿಯೇ ಡಾನ್ಸ್ ಮಾಡಿದ್ದರು. ರಘು ದೀಕ್ಷಿತ್ ಅದನ್ನು ಹಾಡಿದ್ದರು. ಆದರೆ, ಈಗ ರಘುಗೆ ಬೇಸರ ತರಿಸಿರುವುದು ಅದರ ಸಾಹಿತ್ಯ. ನಿರ್ದೇಶಕ ಎ.ಪಿ. ಅರ್ಜುನ್ ಬರೆದಿದ್ದ ಆ ಹಾಡಿನ ಸಾಹಿತ್ಯ ಬಗ್ಗೆ ರಘು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಕನ್ನಡ ಸಿನಿಮಾ ಮಾಡೋದು ತಪ್ಪು ಎಂದಿದ್ದೇಕೆ ಗಾಯಕ ರಘು ದೀಕ್ಷಿತ್ ?

​ಸಾಹಿತ್ಯ ತುಂಬ ಚೆನ್ನಾಗಿರಬೇಕು!

'ನನಗೆ ಹಾಡುಗಳಲ್ಲಿ ಸಾಹಿತ್ಯ ಚೆನ್ನಾಗಿರಬೇಕು. ಬಹುಶಃ ನನಗೆ ವಯಸ್ಸಾಗಿರಬೇಕೇನೋ? ಅದಕ್ಕೆ 'ಯೂ ಆರ್ ಮೈ ಪೊಲೀಸ್ ಬೇಬಿ..' ಸಾಹಿತ್ಯ ಇಷ್ಟವಾಗಿಲ್ಲ ಎನಿಸುತ್ತದೆ. ಆಗ ಆ ಹಾಡನ್ನು ಹಾಡಿದ ಮೇಲೆ ಅನೇಕ ಸ್ನೇಹಿತರು ಮತ್ತು ಅಭಿಮಾನಿಗಳು, 'ಈ ಥರ ಹಾಡನ್ನು ಯಾಕೆ ಹಾಡುತ್ತೀಯಾ' ಅಂತೆಲ್ಲ ಪ್ರಶ್ನೆ ಮಾಡಿದರು. ನಾನು ಹಾಡಿರುವುದೆಲ್ಲ ಉತ್ತಮ ಸಾಹಿತ್ಯ ಇರುವ ಹಾಡುಗಳೇ. ನನ್ನ ಸಂಗೀತ ನಿರ್ದೇಶನದ ಹಾಡುಗಳಿಗೂ ಒಳ್ಳೆಯ ಸಾಹಿತ್ಯವನ್ನೇ ಬಳಸಿದ್ದೇವೆ. ಆದರೆ, 'ಪೊಲೀಸ್ ಬೇಬಿ..' ಹಾಡಿದ ಮೇಲೆ ಸ್ವಲ್ಪ ಬೈಯಿಸಿಕೊಂಡೆ' ಎಂದು ಹೇಳುತ್ತಾರೆ ರಘು.


ಕಿರುತೆರೆ ನನ್ನ ಕರಿಯರ್‌ಗೆ ದೊಡ್ಡ ಬೂಸ್ಟ್‌ : ಗಾಯಕ ರಘು ದೀಕ್ಷಿತ್‌

​ವಾಸುಕಿ ಉತ್ತಮವಾಗಿ ಬರೆಯುತ್ತಾನೆ

ಡಾ. ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ ನಟಿಸಿರುವ 'ನಿನ್ನ ಸನಿಹಕೇ' ಸಿನಿಮಾಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ. ವಿಶೇಷವೆಂದರೆ, ಆ ಸಿನಿಮಾದ ಹಾಡುಗಳನ್ನು ವಾಸುಕಿ ವೈಭವ್ ಅವರಿಂದ ಬರೆಸಿದ್ದಾರೆ. 'ಇದೊಂದು ಮುದ್ದಾದ ಲವ್ ಸ್ಟೋರಿ. ಅದಕ್ಕೆ ತಕ್ಕಂತೆ ಸಾಹಿತ್ಯ ಇದೆ. ಅದನ್ನು ವಾಸುಕಿ ಅದ್ಭುತವಾಗಿ ಬರೆದಿದ್ದಾನೆ. ಅವನು ಚಿಕ್ಕವನಾಗಿದ್ದರೂ, ಜೀವನವನ್ನು ನೋಡಿದ್ದಾನೆ, ನೋವು-ನಲಿವು ಕಂಡಿದ್ದಾನೆ. ತುಂಬ ಗಾಢವಾದ ಸಾಹಿತ್ಯ ಬರೆಯುತ್ತಾನೆ. ಹಾಡಿನ ತೂಕವನ್ನು ಅದು ಹೆಚ್ಚು ಮಾಡುತ್ತದೆ. ಆತ ನನ್ನ ಸಹೋದರನ ಥರ' ಎನ್ನುತ್ತಾರೆ ರಘು ದೀಕ್ಷಿತ್‌.

-----------------------------

ಈ ಕೆಳಗಿನ ಪ್ರಶ್ನೆಗೆ ಸರಿಯಾದ ಉತ್ತರವನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ಬರೆಯಿರಿ.

1. 'ರುಸ್ತುಂ' ಚಿತ್ರದಲ್ಲಿನ 'ಪೊಲೀಸ್ ಬೇಬಿ..' ಹಾಡನ್ನು ಬರೆದವರು ಯಾರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌