ಆ್ಯಪ್ನಗರ

ಕನ್ನಡಿಗನ ದೊಡ್ಡ ಸಾಹಸಕ್ಕೆ ಕೈ ಜೋಡಿಸಿದ 'ರಿಯಲ್ ಹೀರೋ' ಸೋನು ಸೂದ್‌!

ಲಾಕ್‌ಡೌನ್‌ನಲ್ಲಿ ವಲಸೆ ಕಾರ್ಮಿಕರ, ಬಡವರ ಪಾಲಿಗೆ 'ರಿಯಲ್ ಹೀರೋ' ಎನಿಸಿಕೊಂಡಿದ್ದ ನಟ ಸೋನು ಸೂದ್‌ ಈಗ ಟಿವಿ ಶೋವೊಂದಕ್ಕೆ ನಿರೂಪಕರಾಗಿದ್ದಾರೆ. ವಿಶೇಷವೆಂದರೆ, ಇದರ ಹಿಂದೆ ಕನ್ನಡಿಗರೊಬ್ಬರು ಇದ್ದಾರೆ!

Vijaya Karnataka Web 20 Nov 2020, 11:58 am
(ಲೇಖನ: ಹರೀಶ್‌ ಬಸವರಾಜ್‌)
Vijaya Karnataka Web sonu sood

ಕೊರೊನಾ ವೈರಸ್‌ನಿಂದ ಉಂಟಾದ ಲಾಕ್‌ಡೌನ್‌ನಲ್ಲಿ ಅನೇಕ ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಪಟ್ಟ ಕಷ್ಟ ಅಷ್ಟಿಷ್ಟಲ್ಲ! ಇಂತಹ ಕಡುಕಷ್ಟ ಸಮಯದಲ್ಲಿ ಅವರ ಜೊತೆಗೆ ನಿಂತವರು ನಟ ಸೋನು ಸೂದ್‌. ಸದ್ಯ ಅವರೊಂದುಗೆ ರಿಯಾಲಿಟಿಗೆ ನಿರೂಪಕರಾಗಿದ್ದಾರೆ. ಅದನ್ನು ನಿರ್ಮಾಣ ಮಾಡುತ್ತಿರುವುದು ಕನ್ನಡದ ನಟ. 'ದಿಲ್‌ ಮಾರ್‌' ಚಿತ್ರದ ಮೂಲಕ ನಾಯಕರಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿರುವ ರಾಮ್‌ ಗೌಡ ಈಗ ನಟ ಸೋನು ಸೂದ್‌ ಜತೆಗೆ ರಿಯಾಲಿಟಿ ಶೋವೊಂದನ್ನು ಮಾಡುತ್ತಿದ್ದಾರೆ. ಈ ಮೊದಲಿನಿಂದಲೂ ರಿಯಾಲಿಟಿ ಶೋಗಳನ್ನು ಮಾಡುತ್ತಿರುವ ರಾಮ್‌ ಗೌಡ, ಈಗ ಅಂಥದ್ದೇ ಶೋವೊಂದನ್ನು ಪ್ಲಾನ್‌ ಮಾಡಿ ಸೋನು ಸೂದ್‌ ಬಳಿ ನಿರೂಪಣೆ ಮಾಡಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಾಮ್, 'ಕೊರೊನಾ ಸಮಯದಲ್ಲಿ ನನಗೆ ಈ ಶೋ ಕಾನ್ಸೆಪ್ಟ್‌ ಹೊಳೆಯಿತು. ವಿದೇಶಗಳಲ್ಲಿ ಮನುಷ್ಯರಿಗಿಂತಲೂ ಅವರ ಐಡಿಯಾಗಳಿಗೆ ಒಳ್ಳೆಯ ಬೆಲೆ ಇದೆ. ಈ ಶೋ ಕಾನ್ಸೆಪ್ಟ್‌ ಕೂಡ ಅದೇ. ಒಳ್ಳೊಳ್ಳೆಯ ಸ್ಟಾರ್ಟ್‌ಅಪ್‌ ಐಡಿಯಾಗಳನ್ನು ಇಟ್ಟುಕೊಂಡಿರುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಯಾರದ್ದು ಪರಿಣಾಮಕಾರಿ ಐಡಿಯಾ ಎಂದು ನಮಗೆ ಅನಿಸುತ್ತದೋ ಅಂಥವರಿಗೆ ಧನಸಹಾಯ ಮಾಡಿ ಅವರ ಉದ್ಯಮವನ್ನು ಬೆಳೆಸುವುದೇ ಈ ಶೋನ ಉದ್ದೇಶ' ಎಂದಿದ್ದಾರೆ.

'ಇದಕ್ಕಾಗಿ ದೇಶದ ಸಾಕಷ್ಟು ಕಂಪನಿಗಳು ನಮ್ಮ ಜತೆ ಕೈ ಜೋಡಿಸಿವೆ. ಈ ವಿಚಾರವನ್ನು ಸೋನು ಸೂದ್‌ ಬಳಿ ಹೇಳಿಕೊಂಡಾಗ ಅವರು ತುಂಬಾ ಎಕ್ಸೈಟ್‌ ಆದರು. ಕಾನ್ಸೆಪ್ಟ್‌ ಅನ್ನು ತುಂಬಾ ಮೆಚ್ಚಿಕೊಂಡು ಸಾಕಷ್ಟು ಪ್ರತಿಭಾವಂತರಿಗೆ ಇದು ವೇದಿಕೆಯಾಗಲಿದೆ ಎಂದು ಹೇಳಿ ನನ್ನನ್ನು ಮುಂಬೈಗೆ ಕರೆಸಿಕೊಂಡು ಮಾತನಾಡಿದರು' ಎಂದು ಹೇಳುತ್ತಾರೆ ರಾಮ್.

ಪ್ರಚಾರಕ್ಕಾಗಿ ಸಹಾಯ ಮಾಡ್ತೀರಿ ಎಂದವರಿಗೆ ನಟ ಸೋನು ಸೂದ್‌ ಸಾಕ್ಷಿ ಸಮೇತ ಕೊಟ್ಟ ಉತ್ತರ ಇದು!

'ಭಾರತೀಯ ಟಿವಿ ರಂಗದ ಅತಿ ದೊಡ್ಡ ಶೋ ಇದಾಗಲಿದೆ. ದಕ್ಷಿಣ ಭಾರತದ ಅದರಲ್ಲೂಕನ್ನಡಿಗನೊಬ್ಬನ ಸಾಹಸ ಇದಾಗಿದ್ದು, ಜನರಿಗೆ ಇದು ಖಂಡಿತಾ ಇಷ್ಟವಾಗಲಿದೆ. ಈ ಶೋವನ್ನು ಯಾವ ಚಾನೆಲ್‌ನಲ್ಲಿ ಪ್ರಸಾರ ಮಾಡುವುದು ಎಂಬ ಬಗ್ಗೆ ನಿರ್ಧಾರವಾಗಿಲ್ಲ. ಚಿತ್ರೀಕರಣವೂ ಆರಂಭವಾಗಿಲ್ಲ. ಸದ್ಯದಲ್ಲೇ ಈ ಬಗ್ಗೆ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ. ಸದ್ಯಕ್ಕೆ ಇದು ಹಿಂದಿ ಭಾಷೆಯಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಶೋ ಮಾಡುವ ಬಗ್ಗೆ ಯೋಚನೆ ಇದೆ. ಸಂಜೀವ್‌ ಎಂಬುವವರು ಈ ಶೋವನ್ನು ನಿರ್ದೇಶನ ಮಾಡುತ್ತಿದ್ದಾರೆ' ಎಂದು ರಾಮ್‌ ಹೇಳಿದ್ದಾರೆ.

ನಿಮ್ಮ ಗುಂಡಿಗೆ ಗಟ್ಟಿಯಾಗಿದ್ದರೆ, ನಿರೀಕ್ಷೆ ಇಲ್ಲದಿದ್ದರೆ ಬನ್ನಿ ಎಂದ ನಟ ಸೋನು ಸೂದ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌