ಆ್ಯಪ್ನಗರ

SP Balasubrahmanyam: ಫಾರ್ಮ್‌ಹೌಸ್‌ನಲ್ಲಿ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ

ಲೆಜೆಂಡರಿ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನವು ಇಡೀ ಭಾರತೀಯ ಸಿನಿಮಾ ಸಂಗೀತ ಕ್ಷೇತ್ರಕ್ಕೆ ಸೂತಕದ ಛಾಯೆಯನ್ನು ತಂದಿದೆ. ಅವರ ಅಗಲಿಕೆಯಿಂದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

Vijaya Karnataka Web 25 Sep 2020, 11:04 pm
'ಗಾನ ಗಂಧರ್ವ' ಎಸ್‌ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ (ಸೆ.25) ನಮ್ಮನ್ನೆಲ್ಲ ಅಗಲಿದ್ದಾರೆ. ಇದು ಸಂಗೀತ ಪ್ರಿಯರಿಗೆ ನಿಜಕ್ಕೂ ಕರಾಳ ದಿನ. 54 ವರ್ಷಗಳ ಸುದೀರ್ಘ ಗಾನಯಾನ ಮಾಡಿದ ಮಹಾನ್ ಪ್ರತಿಭಾವಂತ ಗಾಯಕ ಎಸ್‌ಪಿಬಿ. ಮಹಾಮಾರಿ ಕೊರೊನಾ ಸೋಂಕು ತಗುಲಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. 51 ದಿನಗಳ ಹೋರಾಟದಲ್ಲಿ ಅವರು ಕೊರೊನಾವನ್ನು ಗೆದ್ದರು. ಆದರೆ, ಸಾವನ್ನು ಗೆಲ್ಲಲಾಗಲಿಲ್ಲ. 40 ಸಾವಿರ ಹಾಡುಗಳನ್ನು ಅಭಿಮಾನಿಗಳಿಗೆ ನೀಡಿ, ಇಹಲೋಕ ತ್ಯಜಿಸಿದರು.
Vijaya Karnataka Web SP Balasubrahmanyam


ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಂದು (ಸೆ.25) ಮಧ್ಯಾಹ್ನ 1.04 ಗಂಟೆಗೆ ನಿಧನರಾದರು. ನಂತರ ಅವರ ಪಾರ್ಥಿವ ಶರೀರವನ್ನು ಮಹಾಲಿಂಗಪುರಂನಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ವಿಐಪಿ ಗಣ್ಯರಿಗೆ ಮತ್ತು ಕುಟುಂಬದ ಆಪ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಸತ್ಯಂ ಥಿಯೇಟರ್ ಆವರಣಕ್ಕೆ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಅಲ್ಲಿ ಶನಿವಾರ ಬೆಳಗಿನ ತನಕ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಎಸ್‌ಪಿಬಿ ಅವರಿಗೆ ಕೊರೊನಾ ನೆಗೆಟಿವ್ ಆಗಿರುವುದರಿಂದ ಅಂತ್ಯಸಂಸ್ಕಾರದಲ್ಲಿ ಕೊರೊನಾ ನಿಯಮಾವಳಿಗಳು ಇರುವುದಿಲ್ಲ.

ಇನ್ನು, ಚೆನ್ನೈನ ಹೊರವಲಯದ ರೆಡ್‌ ಹಿಲ್ಸ್‌ನಲ್ಲಿರುವ ಎಸ್‌ಪಿಬಿ ಅವರ ಫಾರ್ಮ್‌ಹೌಸ್‌ನಲ್ಲಿ ಅವರ ಅಂತ್ಯಸಂಸ್ಕಾರ ಶನಿವಾರ (ಸೆ.26) ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬಿಗಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿದೆ. ಈಗಾಗಲೇ ದೇಶಾದ್ಯಂತ ಇರುವ ಅವರ ಅಪಾರ ಅಭಿಮಾನಿಗಳು ಚೆನ್ನೈನತ್ತ ಹೊರಟಿದ್ದಾರೆ. ಸರ್ಕಾರಿ ಗೌರವಗಳ ಮೂಲಕ ಅಂತ್ಯ ಸಂಸ್ಕಾರ ನೆರೆವೇರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

'SPB ಅಗಲಿಕೆಗಿಂತ ದೊಡ್ಡ ದುರಂತವನ್ನು ನನ್ನ ಜೀವನದಲ್ಲಿ ನೋಡಲಾರೆ'- ಹಂಸಲೇಖ

ಆಸ್ಪತ್ರೆಯಲ್ಲಿ ಎಸ್‌ಪಿಬಿ ಅವರ 51 ದಿನಗಳ ಹೋರಾಟ

ಎಸ್‌ಪಿಬಿ ಅವರಿಗೆ ಸಣ್ಣದಾಗಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ.5ರಂದು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆನಂತರ ಆ.13ರಂದು ಆರೋಗ್ಯದಲ್ಲಿ ಏರುಪೇರಾಗಿತ್ತು. ಅಂದಿನಿಂದಲೇ ಅವರಿಗೆ ವೆಂಟಿಲೇಟರ್‌ ಅಳವಡಿಸಿ, ವಿಶೇಷ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಮಧ್ಯೆ ಅವರಿಗೆ ಕೊರೊನಾ ವರದಿ ಕೂಡ ನೆಗೆಟಿವ್ ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪುತ್ರ ಚರಣ್ ಕೂಡ ಮಾಹಿತಿ ನೀಡಿದ್ದರು. 3 ದಿನಗಳ ಹಿಂದಷ್ಟೇ, 'ಅಪ್ಪ ಆದಷ್ಟು ಬೇಗ ಆಸ್ಪತ್ರೆಯಿಂದ ಮನೆಗೆ ಹೋಗಲು ಕಾತರಿಸುತ್ತಿದ್ದಾರೆ' ಎಂದು ಪೋಸ್ಟ್‌ ಹಾಕಿದ್ದರು. ಆದರೆ, ಶುಕ್ರವಾರ ವಿಧಿಯಾಟವೇ ಬೇರೆ ಆಗಿಹೋಗಿದೆ!

SPB: ಗಾಯಕರಾಗಿ ಮಾತ್ರವಲ್ಲ, ನಟರಾಗಿಯೂ ಪ್ರತಿಭೆ ತೋರಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌