ಆ್ಯಪ್ನಗರ

ಎಸ್‌ಪಿಬಿ ಅಂತ್ಯಕ್ರಿಯೆಗೆ ಸ್ಟಾರ್‌ ನಟರು ಬರಲಿಲ್ಲ ಯಾಕೆ? ಪುತ್ರ ಚರಣ್‌ ಕೊಟ್ಟ ನೋವಿನ ಉತ್ತರ ಇಲ್ಲಿದೆ!

ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಅವರ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಕಣ್ಣೀರು ಹಾಕಿದೆ. ಅಚ್ಚರಿ ಎಂದರೆ, ಈ ಮಹಾನ್‌ ಗಾಯಕನ ಅಂತ್ಯಕ್ರಿಯೆಗೆ ತಮಿಳು ಚಿತ್ರರಂಗದ ಸ್ಟಾರ್‌ ನಟರು ಗೈರಾಗಿದ್ದರು. ಅದಕ್ಕೆ ಎಸ್‌ಪಿಬಿ ಚರಣ್‌ ಪ್ರತಿಕ್ರಿಯಿಸಿದ್ದಾರೆ.

Vijaya Karnataka Web 29 Sep 2020, 10:02 am
ಹಲವು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದು ಅರಗಿಸಿಕೊಳ್ಳಲಾಗದ ಸಂಗತಿ. ಅವರಿಗೆ ಇಡೀ ಭಾರತೀಯ ಚಿತ್ರರಂಗದ ಎಲ್ಲ ಭಾಷೆಗಳಲ್ಲೂ ಸ್ನೇಹಿತರು, ಅಭಿಮಾನಿಗಳಿದ್ದಾರೆ. ಆದರೂ ಕೂಡ ಅಂತ್ಯಕ್ರಿಯೆಯಲ್ಲಿ ಸ್ಟಾರ್‌ ನಟರು ಯಾರೂ ಕಾಣಿಸಿಕೊಳ್ಳಲಿಲ್ಲ! ಯಾಕೆ ಎಂಬ ಅಚ್ಚರಿಯ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.
Vijaya Karnataka Web ಎಸ್‌ಪಿ ಬಾಲಸುಬ್ರಹ್ಮಣ್ಯಂ


ಚೆನ್ನೈನ ಹೊರವಲಯದ ರೆಡ್‌ ಹಿಲ್ಸ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಸೆ.26ರಂದು ಎಸ್‌ಪಿಬಿ ಅಂತ್ಯಕ್ರಿಯೆ ನಡೆಯಿತು. ಅದರಲ್ಲಿ ರಜನಿಕಾಂತ್‌, ಕಮಲ್‌ ಹಾಸನ್‌, ಅಜಿತ್‌ ಕುಮಾರ್‌ ಸೇರಿದಂತೆ ಅನೇಕ ಸ್ಟಾರ್‌ ಹೀರೋಗಳು ಭಾಗಿ ಆಗುತ್ತಾರೆ ಎಂದೇ ನಿರೀಕ್ಷಿಸಲಾಯಿತು. ಆದರೆ ಅವರು ಯಾರೂ ಬರಲಿಲ್ಲ. ನಟ 'ಇಳೆಯದಳಪತಿ' ವಿಜಯ್‌ ಮಾತ್ರ ಕೊನೇ ಕ್ಷಣದಲ್ಲಿ ಬಂದು ಎಸ್‌ಪಿಬಿಗೆ ಅಂತಿಮ ನಮನ ಸಲ್ಲಿಸಿದರು.

ಎಸ್‌ಪಿಬಿ ಅಗಲಿಗೆ ಬಳಿಕ ನಟ ಅಜಿತ್‌ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಯಾಕೆ ಹೀಗೆ ಎಂಬ ಪ್ರಶ್ನೆ ಎಲ್ಲರಿಂದ ಕೇಳಿಬರುತ್ತಿದ್ದು, ಇದರಿಂದ ಸ್ವತಃ ಎಸ್‌ಪಿಬಿ ಪುತ್ರ ಚರಣ್‌ಗೆ ಕಿರಿಕಿರಿ ಉಂಟಾಗಿದೆ. 'ಇಂಥ ಕಾಮೆಂಟ್‌ಗಳಿಗೆ ನಾನು ಯಾಕೆ ಪ್ರತಿಕ್ರಿಯಿಸಬೇಕು? ನನಗೆ ಮತ್ತು ನನ್ನ ತಂದೆಗೂ ಅಜಿತ್ ಒಳ್ಳೆಯ ಸ್ನೇಹಿತರು. ಅವರು ಮನೆಯಲ್ಲೇ ಸಂತಾಪ ಸೂಚಿಸಿರಬಹುದು. ಅಂತ್ಯಕ್ರಿಯೆಗೆ ಬಂದರೋ ಇಲ್ಲವೋ ಎಂಬುದು ಮುಖ್ಯವಾಗುವುದಿಲ್ಲ' ಎಂದಿದ್ದಾರೆ ಚರಣ್‌.

also read: 52 ದಿನ ಚಿಕಿತ್ಸೆ ಪಡೆದಿದ್ದ ಎಸ್‌ಪಿಬಿ: ಕುಟುಂಬಕ್ಕೆ ಎಂಜಿಎಂ ಆಸ್ಪತ್ರೆ ನೀಡಿದ ಬಿಲ್‌ ಎಷ್ಟು?

'ಅಪ್ಪನ ಸಾವಿನ ಬಗ್ಗೆ ಅವರು ಮಾತನಾಡಿದ್ದರೋ ಇಲ್ಲವೋ ಎಂಬುದು ಮುಖ್ಯವಾಗುವುದಲ್ಲ. ಅದನ್ನು ಒಂದು ಚರ್ಚೆಯ ವಿಷಯವಾಗಿ ಮಾಡಬೇಡಿ. ಈಗ ನಾನು ತಂದೆಯನ್ನು ಕಳೆದುಕೊಂಡಿದ್ದೇನೆ. ಇಡೀ ಜಗತ್ತು ಎಸ್‌ಪಿಬಿಯನ್ನು ಕಳೆದುಕೊಂಡಿದೆ. ಈ ಸಂದರ್ಭದಲ್ಲಿ ಅತ್ತು ಸಮಾಧಾನ ಮಾಡಿಕೊಳ್ಳಲು ನಮಗೆ ಸಮಯಬೇಕು. ಅದಕ್ಕೆ ಅವಕಾಶ ಮಾಡಿಕೊಡಿ' ಎಂದು ಚರಣ್‌ ಹೇಳಿದ್ದಾರೆ. ಆ ಮೂಲಕ, ಅಂತ್ಯಕ್ರಿಯೆಯಲ್ಲಿ ಸ್ಟಾರ್‌ ನಟರ ಅನುಪಸ್ಥಿತಿ ಬಗ್ಗೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

also read: ಉಪೇಂದ್ರ & ಗುರುಕಿರಣ್‌ಗೆ 'A' ಚಿತ್ರದಲ್ಲಿ ಯಶಸ್ಸು ಸಿಗಲು ಕಾರಣವಾಗಿದ್ದ ಎಸ್‌ಪಿ ಬಾಲಸುಬ್ರಹ್ಮಣ್ಯಂ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌