ಆ್ಯಪ್ನಗರ

ಇದ್ದಕ್ಕಿದ್ದಂತೆಯೇ ವಾರಾಣಾಸಿಯತ್ತ ಮುಖ ಮಾಡಿದ 'ರೋರಿಂಗ್ ಸ್ಟಾರ್' ಶ್ರೀಮುರಳಿ! ಇದು ಅಭಿಮಾನಿಗಳಿಗೆ ಖುಷಿಯ ಸುದ್ದಿ

'ರೋರಿಂಗ್ ಸ್ಟಾರ್' ಶ್ರೀಮುರಳಿ ಕಳೆದ ವರ್ಷ 'ಭರಾಟೆ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪಕ್ಕಾ ಮಾಸ್‌ ಕಮರ್ಷಿಯಲ್‌ ಮಾದರಿಯ ಈ ಸಿನಿಮಾದಲ್ಲಿ ಬರೋಬ್ಬರಿ 9 ಜನ ವಿಲನ್‌ಗಳಿದ್ದರು. ಭರ್ಜರಿ ಫೈಟ್ಸ್‌ಗಳು ಇದ್ದವು. ಪಂಚಿಂಗ್ ಸಂಭಾಷಣೆಗಳಿದ್ದರೂ, ನೋಡುಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆನಂತರ ಶ್ರೀಮುರಳಿ ಗಮನವೆಲ್ಲ 'ಮದಗಜ' ಮೇಲಿತ್ತು. ಆದರೆ, ಆ ಸಿನಿಮಾಕ್ಕೆ ಶುರುವಾಗುವುದು ತಡವಾಗುತ್ತಿದೆ. ಈ ಮಧ್ಯೆ ಶ್ರೀಮುರಳಿ ವಾರಾಣಾಸಿಯತ್ತ ಮುಖ ಮಾಡಿದ್ದಾರೆ. ಅಷ್ಟಕ್ಕೂ ಏನಿದು ಸಮಾಚಾರ?

Vijaya Karnataka Web 28 Jan 2020, 1:23 pm
'ರೋರಿಂಗ್ ಸ್ಟಾರ್' ಶ್ರೀಮುರಳಿ ಕಳೆದ ವರ್ಷ 'ಭರಾಟೆ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪಕ್ಕಾ ಮಾಸ್‌ ಕಮರ್ಷಿಯಲ್‌ ಮಾದರಿಯ ಈ ಸಿನಿಮಾದಲ್ಲಿ ಬರೋಬ್ಬರಿ 9 ಜನ ವಿಲನ್‌ಗಳಿದ್ದರು. ಭರ್ಜರಿ ಫೈಟ್ಸ್‌ಗಳು ಇದ್ದವು. ಪಂಚಿಂಗ್ ಸಂಭಾಷಣೆಗಳಿದ್ದರೂ, ನೋಡುಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆನಂತರ ಶ್ರೀಮುರಳಿ ಗಮನವೆಲ್ಲ 'ಮದಗಜ' ಮೇಲಿತ್ತು. ಆದರೆ, ಆ ಸಿನಿಮಾಕ್ಕೆ ಶುರುವಾಗುವುದು ತಡವಾಗುತ್ತಿದೆ. ಈ ಮಧ್ಯೆ ಶ್ರೀಮುರಳಿ ವಾರಾಣಾಸಿಯತ್ತ ಮುಖ ಮಾಡಿದ್ದಾರೆ. ಅಷ್ಟಕ್ಕೂ ಏನಿದು ಸಮಾಚಾರ?
Vijaya Karnataka Web sriimurali starrer madagaja muhurtha on february 20
ಇದ್ದಕ್ಕಿದ್ದಂತೆಯೇ ವಾರಾಣಾಸಿಯತ್ತ ಮುಖ ಮಾಡಿದ 'ರೋರಿಂಗ್ ಸ್ಟಾರ್' ಶ್ರೀಮುರಳಿ! ಇದು ಅಭಿಮಾನಿಗಳಿಗೆ ಖುಷಿಯ ಸುದ್ದಿ



​ಫೆ.20ಕ್ಕೆ 'ಮದಗಜ' ಶುರು

ಬಹುನಿರೀಕ್ಷಿತ 'ಮದಗಜ' ಚಿತ್ರವು ಬಹಳ ದಿನಗಳ ಹಿಂದೆಯೇ ಘೋಷಣೆ ಆಗಿತ್ತು. ಆದರೆ, ಸಿನಿಮಾ ಯಾವಾಗ ಶುರುವಾಗಲಿದೆ ಎಂಬ ಬಗ್ಗೆ ಮಾತ್ರ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಇದೀಗ ಫೆ.20ಕ್ಕೆ ಸಿನಿಮಾಕ್ಕೆ ಮುಹೂರ್ತ ಆಗಲಿರುವುದು ಅಧಿಕೃತಗೊಂಡಿದೆ.

​ವಾರಾಣಾಸಿಗೆ ಶ್ರೀಮುರಳಿ

ಫೆ.21ರ ಶಿವರಾತ್ರಿ ಹಬ್ಬದಂದು 'ಮದಗಜ'ದ ಶೂಟಿಂಗ್ ಆರಂಭಗೊಳ್ಳಲಿದೆ. ಚಿತ್ರದ ಮೊದಲ ಶೆಡ್ಯೂಲ್‌ ವಾರಾಣಾಸಿಯಲ್ಲಿ ನಡೆಯಲಿದ್ದು, ಶ್ರೀಮುರಳಿ ಅಲ್ಲಿಗೆ ಪಯಣಿಸಲಿದ್ದಾರೆ. 'ಅಯೋಗ್ಯ' ಮಹೇಶ್‌ಕುಮಾರ್ ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ.

​ಚಿತ್ರಕಥೆಯಲ್ಲಿ ಸಾಕಷ್ಟು ಬದಲಾವಣೆ!

ಈ ಹಿಂದೆ ಮಹೇಶ್‌ಕುಮಾರ್ ಮಾಡಿಕೊಂಡಿದ್ದ 'ಮದಗಜ'ದ ಸ್ಕ್ರಿಪ್ಟ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಮೊದಲು ಅಂದುಕೊಂಡಿದ್ದ ಕಥೆಯಲ್ಲಿ ಶ್ರೀಮುರಳಿ ಎನ್‌ಆರ್‌ಐ ಆಗಿದ್ದರು. ಆದರೆ, ಈಗಿನ ಕಥೆಯಲ್ಲಿ ಅದು ಬದಲಾಗಿದೆ. ಕಥೆ ಬಹುತೇಕ ವಾರಾಣಾಸಿಯಲ್ಲಿ ನಡೆಯಲಿದೆ.

​ಡಿಫರೆಂಟ್ ಲುಕ್‌ನಲ್ಲಿ ಶ್ರೀಮುರಳಿ

ಶ್ರೀಮುರಳಿ ಈ ಸಿನಿಮಾದಲ್ಲಿ ಲುಕ್‌ ಕೂಡ ಸಖತ್ ಬದಲಾಗಲಿದೆಯಂತೆ. ಇದುವರೆಗೂ ಕಾಣಿಸಿಕೊಳ್ಳದ ಶೈಲಿಯಲ್ಲಿ ಅವರು ತೆರೆಮೇಲೆ ಮಿಂಚಲಿದ್ದಾರೆ ಎನ್ನಲಾಗಿದೆ. ಡಾನ್‌ ಮಾದರಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ!

​'ರಾಬರ್ಟ್‌' ನಿರ್ಮಾಪಕರ ಸಿನಿಮಾ

ಇನ್ನು 'ಮದಗಜ' ಚಿತ್ರಕ್ಕೆ 'ರಾಬರ್ಟ್‌' ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡುತ್ತಿದ್ದಾರೆ. ಮಫ್ತಿ ಖ್ಯಾತಿಯ ನವೀನ್‌ಕುಮಾರ್ ಈ ಸಿನಿಮಾಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಕಾಸ್ಟ್ಯೂಮ್‌ ವಿನ್ಯಾಸವನ್ನು ಶ್ರೀಮುರಳಿ ಪತ್ನಿ ವಿದ್ಯಾ ಮಾಡುತ್ತಿದ್ದಾರೆ ಎಂಬುದನ್ನು ಬಿಟ್ಟರೆ, ಬೇರೆ ಮಾಹಿತಿ ರಬೀಳಬೇಕಿದೆ.

Twitter-S Mahesh Kumar

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌