ಆ್ಯಪ್ನಗರ

'ನಾವ್ ಯಾವ್ದಕ್ಕೂ ಭಯಪಡೋ ಅಗತ್ಯ ಇಲ್ಲ' ಅಂತಿದ್ದಾರೆ ನಟಿ ಶ್ರುತಿ ಹರಿಹರನ್‌!

ಕೆಲ ದಿನಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನಟಿ ಶ್ರುತಿ ಹರಿಹರನ್, ಸದ್ಯ ಡೈಲಾಗ್‌ವೊಂದನ್ನು ಹೇಳಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಿದ್ದು ಎಲ್ಲಿ? ಯಾಕೆ? ಏನಿದು ಹೊಸ ಸಮಾಚಾರ!

Vijaya Karnataka Web 8 Nov 2019, 8:52 pm
ಮೀಟೂ ಪ್ರಕರಣದ ನಂತರ ನಟಿ ಶ್ರುತಿ ಹರಿಹರನ್‌ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಅಷ್ಟಾಗಿ ಕೇಳಿಬರಲಿಲ್ಲ. ಅವರ 'ನಾತಿಚರಾಮಿ' ಸಿನಿಮಾ ನಂತರ ಬೇರೆ ಯಾವ ಸಿನಿಮಾಗಳೂ ತೆರೆಗೆ ಬರಲಿಲ್ಲ. ಆದರೆ, ಈಗ ಅವರು ಮರಳಿದ್ದಾರೆ. 'ನಾವ್ ಯಾವ್ದಕ್ಕೂ ಭಯಪಡೋ ಅಗತ್ಯ ಇಲ್ಲ' ಅಂತಲೂ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಏಕೆ ಹೇಳಿದರು? ಇಲ್ಲಿದೆ ಉತ್ತರ.
Vijaya Karnataka Web ಶ್ರುತಿ ಹರಿಹರನ್


ಕೇರಳದಲ್ಲಿ ತಾಯ್ತನ ಎಂಜಾಯ್‌ ಮಾಡುತ್ತಿರುವ ಶ್ರುತಿ ಹರಿಹರನ್‌

ಶ್ರುತಿ ಹರಿಹರನ್‌ ಅವರು 'ನಾತಿಚರಾಮಿ' ನಂತರ ಯಾವ ಸಿನಿಮಾಗಳಲ್ಲೂ ನಟಿಸಿಲ್ಲ. ಇತ್ತೀಚೆಗಷ್ಟೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ಧಾರೆ. ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಇದೀಗ ಅವರು ಈ ಹಿಂದೆ ನಟಿಸಿದ್ದ 'ಮನೆ ಮಾರಾಟ್ಟಕ್ಕಿದೆ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಅದರಲ್ಲಿ ಅವರು ಈ ರೀತಿ ಖಡಕ್‌ ಡೈಲಾಗ್ ಹೇಳಿದ್ದಾರೆ. ಇದೊಂದು ಹಾರರ್‌ ಸಿನಿಮಾವಾಗಿದ್ದು, ಟ್ರೇಲರ್ ಕುತೂಹಲ ಮೂಡಿಸಿದೆ. ನವೆಂಬರ್‌ 15ರಂದು ಈ ಸಿನಿಮಾಗೆ ತೆರೆಗೆ ಬರುತ್ತಿದೆ.


'ಪಟಾಕಿ', 'ಶ್ರೀಕಂಠ' ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಮಂಜು ಸ್ವರಾಜ್‌ ಈ ಸಿನಿಮಾಗೆ ನಿರ್ದೇಶ ಮಾಡಿದ್ದು, ಎಸ್‌.ವಿ. ಬಾಬು ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಕನ್ನಡ ಖ್ಯಾತ ನಟರಾದ ಚಿಕ್ಕಣ್ಣ, ಕುರಿ ಪ್ರತಾಪ್,‌ ಸಾಧುಕೋಕಿಲ, ರವಿಶಂಕರ್ ಗೌಡ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಭಿಮನ್ ರಾಯ್‌ ಸಂಗೀತ ನಿರ್ದೇಶನವಿದ್ದು, ಸುರೇಶ್‌ ಬಾಬು ಛಾಯಾಗ್ರಹಣ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌