ಆ್ಯಪ್ನಗರ

ಡಾ. ವಿಷ್ಣುವರ್ಧನ್‌ ಪುಣ್ಯತಿಥಿಯಂದು ಜಗ್ಗೇಶ್‌ ಮತ್ತು 'ಕಿಚ್ಚ' ಸುದೀಪ್‌ ಹೇಳಿದ್ದೇನು?

ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದರ 'ಸಾಹಸ ಸಿಂಹ' ಡಾ. ವಿಷ್ಣುವರ್ಧನ್. ಇಂದಿಗೆ ಅವರು ಇಹಲೋಕ ತ್ಯಜಿಸಿ 10 ವರ್ಷಗಳಾಯ್ತು. ಈ ಸಂದರ್ಭದಲ್ಲಿ ಅವರನ್ನು ಜಗ್ಗೇಶ್‌ ಮತ್ತು ಸುದೀಪ್‌ ಸ್ಮರಿಸಿದ್ದಾರೆ.

Vijaya Karnataka Web 30 Dec 2019, 1:26 pm
ಡಾ. ವಿಷ್ಣುವರ್ಧನ್ ಅವರ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಅಪಾರವಾದ ಪ್ರೀತಿಯಿದೆ. ಇವತ್ತಿಗೆ ವಿಷ್ಣು ಇಹಲೋಕ ತ್ಯಜಿಸಿ 10 ವರ್ಷ ಕಳೆದಿವೆ. ಆದರೂ, ಅವರು ಎಲ್ಲರೆದೆಯಲ್ಲೂ ಸದಾ ಜೀವಂತ. ಈ ಸಂದರ್ಭದಲ್ಲಿ ನಟರಾದ ಜಗ್ಗೇಶ್ ಮತ್ತು 'ಕಿಚ್ಚ' ಸುದೀಪ್‌ ಅವರು ವಿಷ್ಣುವರ್ಧನ್‌ ಅವರನ್ನು ನೆನೆದಿದ್ದಾರೆ.
Vijaya Karnataka Web ವಿಷ್ಣುವರ್ಧನ್


ಮುದ್ದಾದ ವ್ಯಕ್ತಿ ವಿಷ್ಣು
ವಿಷ್ಣುವರ್ಧನ್‌ ಅವರನ್ನು ಬಹಳ ಹತ್ತಿರದಿಂದ ನೋಡಿರುವ ನಟ ಜಗ್ಗೇಶ್‌. ವಿಶೇಷವೆಂದರೆ, ವಿಷ್ಣು ಮತ್ತು ಜಗ್ಗೇಶ್‌ ನಡುವೆ ಒಂದು ವಿಚಾರಕ್ಕೆ ಸಾಮ್ಯತೆ ಇದೆಯಂತೆ. ಅದೇನೆಂದರೆ, ಇಬ್ಬರದ್ದು ವೃಶ್ಚಿಕ ರಾಶಿ ಮತ್ತು ಜೇಷ್ಠ ನಕ್ಷತ್ರ. 'ಎಷ್ಟು ಮುದ್ದಾಗಿ ಇದ್ದಾನೆ ಈ ಮನುಷ್ಯ ಎನ್ನುತ್ತಿತ್ತು ನನ್ನ ಮನ! ಅನೇಕ ಬಾರಿ ಇಬ್ಬರು ಸೇರಿ ಮಾತಾಡಿದ ದಿನವುಂಟು! ನಾವಿಬ್ಬರೂ ಒಂದೆ ರಾಶಿ ನಕ್ಷತ್ರ "ಜೇಷ್ಟ ವೃಶ್ಚಿಕ! ಭಾವನಾಜೀವಿ ಏಕಾಂತ ಪ್ರಿಯ, ಆಧ್ಯಾತ್ಮಿಕವಾಗಿ ತನ್ನ ತೊಡಗಿಸಿಕೊಂಡ ಚೇತನ. ಹಾಸ್ಯಪ್ರಿಯ ಆದರೆ ಸ್ವಲ್ಪ ವ್ಯತ್ಯಾಸ ಕಂಡರೆ ಮೌನಿ. ಕರ್ತವ್ಯ ಮುಗಿಸಿ ಹೋಗಿ 10 ವರ್ಷವಾಯಿತು ಓಂ ಶಾಂತಿ' ಎಂದು ಜಗ್ಗೇಶ್‌ ಟ್ವೀಟ್ ಮಾಡಿದ್ದಾರೆ.


ನಮ್ಮೆದೆಯ ನಂದಾದೀಪ
ವಿಷ್ಣುವರ್ಧನ್‌ ಅವರನ್ನು ಕಂಡರೆ ಸುದೀಪ್‌ಗೆ ಅಪಾರವಾದ ಪ್ರೀತಿ-ಗೌರವ. ಇಬ್ಬರು ಜೊತೆಯಾಗಿ 'ಮಾತಾಡ್ ಮಾತಾಡು ಮಲ್ಲಿಗೆ' ಸಿನಿಮಾದಲ್ಲಿ ನಟಿಸಿದ್ದರು. ಪುಣ್ಯತಿಥಿಯಂದು ವಿಷ್ಣು ಅವರನ್ನು ನೆನೆದಿರುವ ಸುದೀಪ್‌, 'ಅಪ್ಪಾಜಿ.. ಇಂದು ನಿಮ್ಮ 10ನೇ ಪುಣ್ಯಸ್ಮರಣೆ! ಆದ್ರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌