ಆ್ಯಪ್ನಗರ

ಕಿಚ್ಚನ 'ಫ್ಯಾಂಟಮ್‌' ಬಳಗದಲ್ಲಿ ಕಾಣಿಸಿಕೊಂಡ ಹೊಸ ಪಾತ್ರ! ಯಾರು ಈ ಪನ್ನಾ?

ನಟ 'ಕಿಚ್ಚ' ಸುದೀಪ್‌ ಹಾಗೂ ನಿರ್ದೇಶಕ ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ಫ್ಯಾಂಟಮ್‌' ಸಿನಿಮಾಕ್ಕೆ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಸದ್ಯ ಈ ಚಿತ್ರದ ಇನ್ನೊಂದು ಪಾತ್ರದ ಪೋಸ್ಟರ್ ನಾಳೆ (ಆ.20) ಬಹಿರಂಗಗೊಳ್ಳಲಿದೆ.

Vijaya Karnataka Web 19 Aug 2020, 3:59 pm
'ಕಿಚ್ಚ' ಸುದೀಪ್‌ ಅಭಿನಯದ 'ಫ್ಯಾಂಟಮ್‌' ಚಿತ್ರತಂಡದ ವತಿಯಿಂದ ಈಗಾಗಲೇ ಒಂದಾದ ಮೇಲೆ ಒಂದು ಅಚ್ಚರಿಗಳು ಅಭಿಮಾನಿಗಳಿಗೆ ಸಿಗುತ್ತಲೇ ಇದೆ. ಮೊದಲು ನಟ ಸುದೀಪ್‌ ಅವರ ಲುಕ್ ಹೇಗಿರಲಿದೆ ಎಂಬುದನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಅದರಲ್ಲಿ ಅವರ ಪಾತ್ರದ ಹೆಸರು ವಿಕ್ರಾಂತ್ ರೋಣ ಅನ್ನೋದನ್ನು ಬಹಿರಂಗಪಡಿಸಿತ್ತು ಚಿತ್ರತಂಡ. ಇದೀಗ ಮತ್ತೊಂದು ಪಾತ್ರದ ಪರಿಚಯ ಮಾಡಿಸೋಕೆ ಚಿತ್ರತಂಡ ಸಜ್ಜಾಗಿದೆ. ಯಾವ ಪಾತ್ರವದು? ಪನ್ನಾ!
Vijaya Karnataka Web sudeep starrer phantom movie important character poster will release on august 20th
ಕಿಚ್ಚನ 'ಫ್ಯಾಂಟಮ್‌' ಬಳಗದಲ್ಲಿ ಕಾಣಿಸಿಕೊಂಡ ಹೊಸ ಪಾತ್ರ! ಯಾರು ಈ ಪನ್ನಾ?


ಫ್ಯಾಂಟಮ್‌ನಲ್ಲಿ ಇದೆ ಪನ್ನಾ ಪಾತ್ರ
ಕೊರೊನಾದಿಂದಾಗಿ ಸಿನಿಮಾ ಚಿತ್ರೀಕರಣವೆಲ್ಲ ನಿಂತಹೋಗಿತ್ತು. ಆದರೆ, ಸುದೀಪ್ ಮತ್ತು ತಂಡ ಸೂಕ್ತ ಮುಂಜಾಗ್ರತ ಕ್ರಮಗಳೊಂದಿಗೆ ಹೈದರಾಬಾದ್‌ನಲ್ಲಿ ಶೂಟಿಂಗ್ ಮುಂದುವರಿಸಲಾಗಿದೆ. ಇದುವರೆಗೂ ಸುದೀಪ್ ಮತ್ತು ನಿರೂಪ್ ಭಂಡಾರಿ ಪಾತ್ರಗಳ ಬಗ್ಗೆಯಷ್ಟೇ ನಿರ್ದೇಶಕ ಅನೂಪ್ ಭಂಡಾರಿ ಮಾಹಿತಿ ನೀಡಿದ್ದರು. ಈಗ ಅವರು ಪನ್ನಾ ಅನ್ನೋ ಪಾತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದುವರೆಗೂ ಈ ಥರದ್ದೊಂದು ಪಾತ್ರವಿದೆ ಎಂದು ಎಲ್ಲಿಯೂ ಮಾಹಿತಿ ನೀಡಿರಲಿಲ್ಲ. ಆದರೆ, ಈಗ ನಟ ಸುದೀಪ್ ಟ್ವೀಟ್ ಮಾಡಿ, 'ಫ್ಯಾಂಟಮ್ ಚಿತ್ರದ ಪನ್ನಾ ಪಾತ್ರದ ಫಸ್ಟ್ ಲುಕ್ ಗುರುವಾರ (ಆ.20) ರಿಲೀಸ್ ಮಾಡುತ್ತೇವೆ. ಆ ಪಾತ್ರದ ಬಗ್ಗೆ ನಮ್ಮ ಸೃಷ್ಟಿಕರ್ತ ಅನೂಪ್ ಭಂಡಾರಿ ಅವರೇ ಮಾಹಿತಿ ನೀಡಲಿದ್ದಾರೆ' ಎಂದು ಹೇಳಿದ್ದಾರೆ.

ವಿಕ್ರಾಂತ್-ಸಂಜು ಪಾತ್ರಗಳ ಬಗ್ಗೆ ಮಾಹಿತಿ ನೀಡಿದ್ದ ಅನೂಪ್‌
ಸುದೀಪ್‌ ಮಾಡುತ್ತಿರುವ ವಿಕ್ರಾಂತ್ ರೋಣ ಹಾಗೂ ನಿರೂಪ್ ಭಂಡಾರಿ ಮಾಡುತ್ತಿರುವ ಸಂಜು ಪಾತ್ರಗಳ ಬಗ್ಗೆ ಅನೂಪ್ ಮಾಹಿತಿ ನೀಡಿದ್ದರು. 'ಫ್ಯಾಂಟಮ್‌ ಚಿತ್ರದ ಮುಖ್ಯ ಪಾತ್ರ ವಿಕ್ರಾಂತ್‌ ರೋಣ. ಆ ಹೆಸರಿನಲ್ಲಿ ಎಷ್ಟು ಪವರ್‌ ಇದೆಯೋ ಆ ಪಾತ್ರ ಕೂಡ ಅಷ್ಟೇ ಪವರ್‌ಫುಲ್‌. ಅವನು ಏನ್‌ ಮಾಡ್ತಾನೆ, ಯಾಕೆ ಮಾಡ್ತಾನೆ, ಹೇಗೆ ಮಾಡ್ತಾನೆ ಅನ್ನೋದು ಯಾರಿಗೂ ಅರ್ಥ ಆಗೋದೇ ಇಲ್ಲ. ಆದರೆ ಅವನು ಏನೇ ಮಾಡಿದರೂ ಅದಕ್ಕೊಂದು ಕಾರಣ ಇರುತ್ತೆ' ಎಂದು ವಿಕ್ರಾಂತ್ ರೋಣ ಪಾತ್ರದ ಬಗ್ಗೆ ಹೇಳಿದ್ದರು. 'ನಮ್ಮ 'ಫ್ಯಾಂಟಮ್' ಸಿನಿಮಾದ ಇನ್ನೊಂದು ಪ್ರಮುಖ ಪಾತ್ರ ಸಂಜೀವ್ ಗಂಭೀರ. ಸಂಜು ಲಂಡನ್‌ನಲ್ಲಿ ಬೆಳೆದು, ಹುಟ್ಟಿದ ಊರಿಗೆ ವಾಪಸ್ ಬರುತ್ತಾನೆ. ಸಂಜು ನಗ್ತಾನೆ, ನಗಿಸ್ತಾನೆ, ತರಲೆ ಮಾಡ್ತಾನೆ, ಎಲ್ಲರ ಮನಸ್ಸಿಗೂ ಹತ್ರ ಆಗ್ತಾನೆ' ಎಂದು ನಿರೂಪ್ ನಿಭಾಯಿಸಿರುವ ಪಾತ್ರದ ಬಗ್ಗೆ ಅವರ ಹೇಳಿದ್ದರು.

'ಕಿಚ್ಚ' ಸುದೀಪ್ ಅಭಿಮಾನಿಗಳಿಗೆ ಆಗಸ್ಟ್ 10ಕ್ಕೆ ಸಿಗಲಿದೆ ಬಿಗ್ ಸರ್ಪ್ರೈಸ್‌!

ಜಾಕ್‌ ಮಂಜು ನಿರ್ಮಾಣದ ಈ ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣ, ಅಜನೀಶ್‌ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಬೃಹತ್ ಕಾಡಿನ ಸೆಟ್‌ ಹಾಕಿ ಶೂಟಿಂಗ್‌ ಮಾಡಲಾಗುತ್ತಿದೆ. ಕೊರೊನಾ ವೈರಸ್‌ನಿಂದಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಮಾಡಲಾಗುತ್ತಿದೆ.

ನೀವು ಕೊಟ್ಟ ಉಡುಗೊರೆಯನ್ನು ಕೊನೆವರೆಗೂ ಉಳಿಸಿಕೊಳ್ತೀನಿ: ಕಿಚ್ಚ ಸುದೀಪ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌