ಆ್ಯಪ್ನಗರ

'ಅಂಬರೀಷ್ ಅವರನ್ನು ನಾನು ದೇವರ ಥರ ಪೂಜಿಸುತ್ತೇನೆ'- ನಟ ದರ್ಶನ್‌

'ರೆಬೆಲ್ ಸ್ಟಾರ್' ಅಂಬರೀಷ್ ಅವರ 2ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಸುಮಲತಾ ಅಂಬರೀಷ್, ದರ್ಶನ್‌ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Vijaya Karnataka Web 24 Nov 2020, 1:37 pm
'ಮಂಡ್ಯದ ಗಂಡು' ಅಂಬರೀಷ್ ಅವರಿಗೆ ಇಂದು (ನ.24) 2ನೇ ವರ್ಷದ ಪುಣ್ಯತಿಥಿ. ಈ ದಿನ ಅವರ ಅಭಿಮಾನಿಗಳು, ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅವರ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ. ಅಂಬರೀಷ್‌ ಪತ್ನಿ, ಸಂಸದೆ ಸುಮಲತಾ, ಪುತ್ರ ಅಭಿಷೇಕ್, ನಟ ದರ್ಶನ್‌ ಮುಂತಾದವರು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ದರ್ಶನ್, 'ಅಂಬರೀಷ್ ಅವರನ್ನು ನಾನು ದೇವರ ಥರ ಪೂಜಿಸುತ್ತೇನೆ' ಎಂದಿದ್ದಾರೆ.
Vijaya Karnataka Web ambareesh darshan


ಅವರ ಸಮಾಧಿ ನನಗೆ ದೇವಸ್ಥಾನ ಇದ್ದಂಗೆ
'ಅವರು ನಮ್ಮ ನೆನಪಲ್ಲಿ ಇರುತ್ತಾರೆ ಅನ್ನೋದಕ್ಕಿಂತ ಅವರು 24 ಗಂಟೆಯೂ ನಮ್ಮ ಜೊತೆಗೆ ಇರ್ತಾರೆ. ಇಲ್ಲಿಗೆ ಬಂದಾಗೆಲ್ಲ ಅವರ ಸಮಾಧಿಗೆ ಭೇಟಿ ನೀಡುತ್ತೇನೆ. ನಾನಿಲ್ಲಿಗೆ ಆಗಾಗ ಬರುತ್ತಲೇ ಇರುತ್ತೇನೆ. ಇದು ನಮಗೆ ಒಂಥರಾ ದೇವಸ್ಥಾನ ಇದ್ದಂಗೆ. ಇಲ್ಲಿಗೆ ಬರುತ್ತೇನೆ. ಕೈಮುಗಿತಿನಿ, ನನ್ನದೇನಿದೆಯೋ, ಅದನ್ನು ಹೇಳಿಕೊಳ್ಳುತ್ತೇನೆ, ಹೋಗುತ್ತೇನೆ. ಇನ್ನು, ಅವರು ಬೈಯುತ್ತಿದ್ದರು. ಈಗ ಅವರ ಬೈಗುಳ ಇಲ್ಲವಾಗಿರುವುದು ಬೇಸರವಾಗಿದೆ. ಇವತ್ತು ಏನೇ ಸಮಸ್ಯೆ ಆದ್ರು 'ಬಾರಯ್ಯ ಇಲ್ಲಿ' ಅಂತ ಹೇಳುವುದಕ್ಕೆ ಒಂದು ವಾಯ್ಸ್ ಇಲ್ಲದಂತಾಗಿದೆ' ಎಂದರು ದರ್ಶನ್.

ಇನ್ನು, ಮಂಡ್ಯದ ಹಳ್ಳಿಯೊಂದರಲ್ಲಿ ಅಂಬರೀಷ್‌ ಅವರಿಗೆ ದೇವಸ್ಥಾನ ಕಟ್ಟಲಾಗಿದೆ. ಆ ಕುರಿತು ಪ್ರತಿಕ್ರಿಯಿಸಿದ ದರ್ಶನ್, 'ಅವರಿಗೆ ದೇವಸ್ಥಾನ ಕಟ್ಟಿದ್ರೆ ಅದರಲ್ಲೇನು ತಪ್ಪಿಲ್ಲ. ಯಾಕೆಂದರೆ, ಅವರು ಇದ್ದಿದ್ದೇ ಆ ಥರ. ನಾನು ಅವರನ್ನು ದೇವರ ಥರ ಪೂಜಿಸುತ್ತೇನೆ. ಹಾಗಿರುವಾಗ ಗುಡಿ ಕಟ್ಟುವುದರಲ್ಲಿ ತಪ್ಪಿಲ್ಲ ಅಲ್ವಾ? ನಾನು ಕೂಡ ಆ ಕಾರ್ಯಕ್ರಮಕ್ಕಾಗಿ ಮಂಡ್ಯಕ್ಕೆ ಹೋಗುತ್ತಿದ್ದೇನೆ' ಎಂದು ಅವರು ಹೇಳಿದರು.

ಅಂಬರೀಷ್‌ ಪುಣ್ಯಸ್ಮರಣೆ: 'ಕಲಿಯುಗದ ಕರ್ಣ'ನನ್ನು ಸ್ಮರಿಸಿದ ತಾರೆಯರು & ರಾಜಕೀಯ ಗಣ್ಯರು

ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಮಾತನಾಡಿ, 'ಪ್ರತಿದಿನವೂ ಅವರನ್ನು ನೆನಪು ಮಾಡಿಕೊಳ್ಳುತ್ತೇವೆ. ಈಚೆಗೆ ಅರ್ಜುನ್ ಸರ್ಜಾ ಸೇರಿದಂತೆ ಒಂದಷ್ಟು ಜನರು ಮನೆಗೆ ಬಂದಿದ್ದರು. 5-6 ಗಂಟೆ ಬರೀ ಅಪ್ಪನ ಕುರಿತಾಗಿಯೇ ಮಾತನಾಡಿದೆವು. ನಾನು, ನನ್ನ ಸಣ್ಣ ವಯಸ್ಸಿನಲ್ಲಿನ ನೆನಪುಗಳನ್ನು ಹಂಚಿಕೊಂಡೆ. ಸೋಮವಾರ (ನ.23) ನಾನು ಮತ್ತು ದರ್ಶನ್‌ ಅಣ್ಣ ಇಬ್ಬರೇ ಊಟಕ್ಕೆ ಕುಳಿತುಕೊಂಡು ಸಾಕಷ್ಟು ಮಾತನಾಡಿದೆವು. ಇವತ್ತು ಅವರ ಹೆಸರಲ್ಲಿ ತುಂಬ ಒಳ್ಳೊಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿವೆ. ಅವರ ಸಾಧನೆಗಳ ಬಗ್ಗೆ ಮಾತನಾಡುವುದಕ್ಕೆ ನಾನು ತುಂಬ ಚಿಕ್ಕವನು. ಅವರು ಮತ್ತು ಅವರ ಅಭಿಮಾನಿಗಳ ಮಧ್ಯೆ ಮಾತನಾಡುವುದಕ್ಕೆ ನನಗೇ ಅಧಿಕಾರ ಇಲ್ಲ. ಅಭಿಮಾನಿಗಳೊಂದಿಗೆ ಅವರ ಸಂಬಂಧ ಹಾಗೇ ಇತ್ತು. ಅವರ ಮಗನಾಗಿ ಹುಟ್ಟೋದಕ್ಕೆ ನಾನು ಪುಣ್ಯ ಮಾಡಿದ್ದೇನೆ' ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌