ಆ್ಯಪ್ನಗರ

ಅಂಬಿ & ವಿಷ್ಣುವರ್ಧನ್‌ ಸ್ನೇಹದ ಬಗ್ಗೆ ಸಂಸದೆ ಸುಮಲತಾ ಅಂಬರೀಷ್‌ ಮನದಾಳದ ಮಾತು!

'ಸಾಹಸ ಸಿಂಹ' ಡಾ. ವಿಷ್ಣುವರ್ಧನ್‌ ಅವರು ಇಹಲೋಕ ತ್ಯಜಿಸಿ ಇಂದು (ಡಿ.30) 11 ವರ್ಷ ಪೂರೈಸಿದೆ. ಎಲ್ಲೆಡೆ 'ಸಾಹಸ ಸಿಂಹ'ನ 11ನೇ ಪುಣ್ಯತಿಥಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸುಮಲತಾ ಅಂಬರೀಷ್‌ ಕೂಡ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.

Vijaya Karnataka Web 30 Dec 2020, 12:24 pm
ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ಒಬ್ಬರಾದ ಡಾ. ವಿಷ್ಣುವರ್ಧನ್‌ ಅವರ 11ನೇ ವರ್ಷದ ಪುಣ್ಯತಿಥಿಯನ್ನು ಇಂದು (ಡಿ.30) ಆಚರಿಸಲಾಗುತ್ತಿದೆ. 'ಸಾಹಸ ಸಿಂಹ' ನಮ್ಮೆಲ್ಲರನ್ನೂ ಅಗಲಿ ಒಂದು ದಶಕವೇ ಕಳೆದಿದ್ದರೂ ಅಭಿಮಾನಿಗಳ ಹೃದಯದಲ್ಲಿ ಅವರಿನ್ನೂ ಜೀವಂತವಾಗಿದ್ದಾರೆ. ಅವರ ಜೊತೆ ಒಡನಾಟ ಹೊಂದಿದ್ದ ಸುಮಲತಾ ಅಂಬರೀಷ್‌ ಕೂಡ ಇಂದು ವಿಷ್ಣುವರ್ಧನ್‌ರನ್ನು ಸ್ಮರಿಸಿದ್ದಾರೆ.
Vijaya Karnataka Web ಸುಮಲತಾ ಅಂಬರೀಷ್‌ ವಿಷ್ಣುವರ್ಧನ್‌


'ಸ್ನೇಹ ಪ್ರೀತಿಗೆ ಸಾಕಾರ ರೂಪವಾಗಿದ್ದ ನಮ್ಮ ವಿಷ್ಣುವರ್ಧನ್ ನಮ್ಮ ಕಣ್ಣ ಮುಂದೆ ಇರದೇ ಇರಬಹುದು. ಆದರೆ ನಮ್ಮ ನಿಶ್ಚಲ ಯೋಚನೆಗಳಲ್ಲಿ, ನಮ್ಮ ಚೈತನ್ಯದ ಯೋಜನೆಗಳಲ್ಲಿ, ನಮ್ಮ ಸಾಕ್ಷಿ ಪ್ರಜ್ಞೆಯಲ್ಲಿ ಮತ್ತು ಎಲ್ಲದಕ್ಕೂ ಹೆಚ್ಚಾಗಿ ನಮ್ಮೆಲ್ಲರ ಸ್ನೇಹದ ಸೇತುವೆಯಾಗಿ ಇನ್ನೂ ಜೀವಂತವಾಗಿದ್ದಾರೆ. #ವಿಷ್ಣು_ಚಿರಾಯು' ಎಂದು ಸುಮಲತಾ ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ ಜೊತೆಯಲ್ಲಿ ಅವರೊಂದು ಫೋಟೋ ಹಂಚಿಕೊಂಡಿದ್ದಾರೆ. ವಿಷ್ಣುವರ್ಧನ್‌ ಅವರ ಭಾವಚಿತ್ರದ ಮುಂದೆ ಅಂಬರೀಷ್‌ ಕುಳಿತಿರುವ ಫೋಟೋ ಇದಾಗಿದೆ. ಅಂಬಿ-ವಿಷ್ಣು ಸ್ನೇಹದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. 'ನಾಗರಹಾವು' ಸಿನಿಮಾ ಕಾಲದಿಂದಲೂ ಅವರಿಬ್ಬರ ನಡುವೆ ಗೆಳತನವಿತ್ತು. ದಿಗ್ಗಜರ ಈ ಅಮರ ಸ್ನೇಹವನ್ನು ಸುಮಲತಾ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

also read: ಡಾ. ವಿಷ್ಣುವರ್ಧನ್‌ 11ನೇ ವರ್ಷದ ಪುಣ್ಯಸ್ಮರಣೆ! 'ಸಾಹಸ ಸಿಂಹ'ನನ್ನು ನೆನಪಿಸಿಕೊಂಡ ಅಭಿಮಾನಿಗಳು

ನೆಚ್ಚಿನ ನಟನ ಪುಣ್ಯತಿಥಿ ಆಚರಿಸುತ್ತಿರುವ ಅಭಿಮಾನಿಗಳು ಬೆಂಗಳೂರಿನ 'ಅಭಿಮಾನ್‌ ಸ್ಟುಡಿಯೋ' ಆವರಣದಲ್ಲಿ ಇರುವ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸುತ್ತಿದ್ದಾರೆ. ಭಾರತಿ ವಿಷ್ಣುವರ್ಧನ್‌ ಮತ್ತು ಅವರ ಕುಟುಂಬದವರು ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಇದೆ. ಪುಣ್ಯಸ್ಮರಣೆ ಅಂಗವಾಗಿ ಸೋಶಿಯಲ್‌ ಮೀಡಿಯಾ ಮೂಲಕ ಹಲವಾರು ಅಭಿಮಾನಿಗಳು ವಿಷ್ಣುವರ್ಧನ್‌ರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. 'ಸಾಹಸ ಸಿಂಹ'ನ ಫೋಟೋವನ್ನು ಶೇರ್‌ ಮಾಡಿಕೊಳ್ಳುವ ಮೂಲಕ ನಮನ ಸಲ್ಲಿಸಿದ್ದಾರೆ ಅವರ ಅಳಿಯ, ನಟ ಅನಿರುದ್ಧ.

also read: ವಿಷ್ಣುವರ್ಧನ್‌ ಪ್ರತಿಮೆ ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ಗುಡುಗಿದ 'ಡಿ ಬಾಸ್‌' ದರ್ಶನ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌