ಆ್ಯಪ್ನಗರ

'ಪೈಲ್ವಾನ್' ಬಳಿಕ ಪುನಃ ಕನ್ನಡಕ್ಕೆ ಮರಳಿದ ಸುನೀಲ್ ಶೆಟ್ಟಿ; ಆದ್ರೆ, ಈ ಬಾರಿ ಸಿನಿಮಾದಲ್ಲಿ ನಟಿಸಲ್ಲ!

ಬಾಲಿವುಡ್‌ ನಟ ಸುನೀಲ್‌ ಈಗಾಗಲೇ 'ಪೈಲ್ವಾನ್‌' ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದರು. ಇದೀಗ ಅವರು ಇನ್ನೊಮ್ಮೆ ಸ್ಯಾಂಡಲ್‌ವುಡ್‌ ಕಡೆಗೆ ಮುಖ ಮಾಡಲಿದ್ದಾರೆ. ವಿಶೇಷವೆಂದರೆ, ಈ ಬಾರಿ ಸಿನಿಮಾದಲ್ಲಿ ನಟಿಸುತ್ತಿಲ್ಲ!

Vijaya Karnataka Web 23 Jul 2020, 9:15 pm
ನಟ ಸುನೀಲ್‌ ಶೆಟ್ಟಿ ಮೂಲತಃ ಕರಾವಳಿಯವರು. ಆದರೆ, ಅವರು ಹೆಚ್ಚು ಗುರುತಿಸಿಕೊಂಡಿದ್ದು ಬಾಲಿವುಡ್‌ನಲ್ಲಿ. 1992ರಿಂದಲೂ ಹಿಂದಿ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿರುವ 58ರ ಪ್ರಾಯದ ಈ ನಟ, ಆಗೊಮ್ಮ ಹೀಗೊಮ್ಮೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸುತ್ತಾರೆ. ಕಳೆದ ವರ್ಷ ತೆರೆಕಂಡಿದ್ದ 'ಕಿಚ್ಚ' ಸುದೀಪ್ ನಟನೆಯ 'ಪೈಲ್ವಾನ್' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡಕ್ಕೆ ಮೊದಲ ಬಾರಿಗೆ ಅವರು ಕಾಲಿಟ್ಟಿದ್ದರು. ಇದೀಗ ಮತ್ತೊಮ್ಮೆ ಕರುನಾಡಿತ್ತ ಮುಖ ಮಾಡಿದ್ದಾರೆ. ಆದರೆ, ಈ ಬಾರಿ ಅವರು ಸಿನಿಮಾ ಮಾಡುತ್ತಿಲ್ಲ! ಹಾಗಾದರೆ, ಮತ್ತೇನು ಮಾಡುತ್ತಾರೆ? ಇಲ್ಲಿದೆ ಮಾಹಿತಿ!
Vijaya Karnataka Web suniel shetty plays prominent role in amr rameshs veerappan web series
'ಪೈಲ್ವಾನ್' ಬಳಿಕ ಪುನಃ ಕನ್ನಡಕ್ಕೆ ಮರಳಿದ ಸುನೀಲ್ ಶೆಟ್ಟಿ; ಆದ್ರೆ, ಈ ಬಾರಿ ಸಿನಿಮಾದಲ್ಲಿ ನಟಿಸಲ್ಲ!


ನಿರ್ದೇಶಕ ಎಎಂಆರ್ ರಮೇಶ್‌ ಈ ಹಿಂದೆ ದಂತಚೋರ, ಕಾಡುಗಳ್ಳ ವೀರಪ್ಪನ್ ಜೀವನವನ್ನು ಆಧರಿಸಿ 'ಅಟ್ಟಹಾಸ' ಸಿನಿಮಾ ಮಾಡಿದ್ದರು. ಇದೀಗ ಆ ಕಥೆಗೆ ವೆಬ್ ಸಿರೀಸ್‌ ರೂಪ ನೀಡುವುದಕ್ಕೆ ಮುಂದಾಗಿದ್ದಾರೆ. ವಿಶೇಷವೆಂದರೆ, ಅದರಲ್ಲಿನ ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರವನ್ನು ಸುನೀಲ್ ಶೆಟ್ಟಿ ಅವರಿಂದ ಮಾಡಿಸಲು ರಮೇಶ್‌ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಈ ವೆಬ್ ಸಿರೀಸ್‌ನಲ್ಲಿ ವೀರಪ್ಪನ್ ಬದುಕಿನ ಇನ್ನಷ್ಟು ರೋಚಕ ಸಂಗತಿಗಳನ್ನು ಬಿಚ್ಚಿಡಲು ರಮೇಶ್‌ ನಿರ್ಧರಿಸಿದ್ದಾರೆ. ಇದರಲ್ಲಿ ಬಾಲಿವುಡ್‌ನ ಹಲವು ನಟರು ಬಣ್ಣ ಹಚ್ಚಲಿದ್ದು, ಸುನೀಲ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಆರಂಭಿಕ ಹಂತದ ಮಾತುಕತೆಗಳನ್ನು ಮಾಡಲಾಗಿದೆಯಂತೆ. ಈ ವೆಬ್ ಸಿರೀಸ್‌ ಸುಮಾರು 10 ಗಂಟೆ ಅವಧಿಯಲ್ಲಿ ಮೂಡಿಬರಲಿದೆಯಂತೆ. 'ಅಟ್ಟಹಾಸ'ದಲ್ಲಿ ವೀರಪ್ಪನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಕಿಶೋರ್ ಇಲ್ಲಿಯೂ ವೀರಪ್ಪನ್ ಅವತಾರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಇದು ಮೂಡಿಬರಲಿದ್ದು, ಆ ಭಾಷೆಯ ಜನಪ್ರಿಯ ನಟರು ಇದರಲ್ಲಿ ಬಣ್ಣ ಹಚ್ಚಲಿದ್ದಾರೆ!

ಇನ್ನಷ್ಟು ಕಾಡುಗಳ್ಳ ವೀರಪ್ಪನ್ 'ಅಟ್ಟಹಾಸ' ತೋರಿಸಲಿದ್ದಾರೆ ಕನ್ನಡ ನಟ ಕಿಶೋರ್!

ಈ ವೆಬ್‌ ಸಿರೀಸ್‌ನ ಛಾಯಾಗ್ರಹಣವನ್ನು ವೈದಿ. ಎಸ್ ಮತ್ತು ವಿಜಯ್ ಮಿಲ್ಟನ್ ಮಾಡಲಿದ್ದಾರೆ. ಇಂಧುಮತಿ ಇದರ ನಿರ್ಮಾಣ ಮಾಡಿದರೆ, ವಿಜಯ್ ಶಂಕರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಬಂದ 'ಅಟ್ಟಹಾಸ' ಸಿನಿಮಾದಲ್ಲಿ ಅರ್ಜುನ್ ಸರ್ಜಾ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರೆ, ವೆಬ್‌ ಸಿರೀಸ್‌ನಲ್ಲಿ ಅದು ಸುನೀಲ್ ಶೆಟ್ಟಿ ಪಾಲಾಗಿದೆ.

ಕನ್ನಡ ಟಿವಿ ಉದ್ಯಮಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಿ ಎಂದ 'ಪೈಲ್ವಾನ್' ಸಿನಿಮಾ ನಿರ್ದೇಶಕ ಕೃಷ್ಣ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌