ಆ್ಯಪ್ನಗರ

ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಅಣ್ತಮ್ಮ! ಸೂರ್ಯ-ಕಾರ್ತಿ ಬಗ್ಗೆ ಏನಿದು ನ್ಯೂಸ್?

ತಮಿಳು ಚಿತ್ರರಂಗದಲ್ಲಿ ಸೂರ್ಯ ಮತ್ತು ಕಾರ್ತಿ ಸಹೋದರರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಇವರಿಬ್ಬರು ದಸರಾ ಹಬ್ಬದ ದಿನ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ.

Vijaya Karnataka Web 26 Oct 2020, 10:36 pm
ಕಾಲಿವುಡ್‌ನಲ್ಲಿ ಸ್ಟಾರ್ ಸಹೋದರರು ಎಂದೇ ಖ್ಯಾತಿ ಪಡೆದವರು ನಟ ಸೂರ್ಯ ಮತ್ತು ಕಾರ್ತಿ. ಹಿರಿಯ ನಟ ಶಿವಕುಮಾರ್ ಅವರ ಪುತ್ರರಾದ ಇವರಿಬ್ಬರು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಈ ಸ್ಟಾರ್ ಸಹೋದರರು ವಿಜಯ ದಶಮಿ ದಿನ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಹವಾ ಕ್ರಿಯೆಟ್ ಮಾಡಿದ್ದಾರೆ. ಅದೇನು ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.
Vijaya Karnataka Web karthi suriya


ಬೆಳಗ್ಗೆ ಅಣ್ಣನ ಟ್ರೇಲರ್ ರಿಲೀಸ್‌
ನಟ ಸೂರ್ಯ ಅಭಿನಯದ 'ಸೂರರೈ ಪೊಟ್ರು' ಸಿನಿಮಾವು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸ್ವತಃ ಸೂರ್ಯ ಅವರೇ ಬಂಡವಾಳ ಹೂಡಿರುವ ಈ ಸಿನಿಮಾದಲ್ಲಿ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್‌ ಅವರ ಕಥೆ ಇದೆ. ಸುಧಾ ಕೊಂಗರ ಇದರ ನಿರ್ದೇಶಕಿ. ಇಂಥ ಬಿಗ್ ಬಜೆಟ್ ಸಿನಿಮಾವನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ ಸೂರ್ಯ. ನ.12ರಿಂದ ಓಟಿಟಿಯಲ್ಲಿ ಈ ಸಿನಿಮಾ ಪ್ರಸಾರ ಆರಂಭಿಸಲಿದೆ. ಅದಕ್ಕೂ ಮೊದಲು ಇಂದು (ಅ.26) ಬೆಳಗ್ಗೆ ಚಿತ್ರದ ಟ್ರೇಲರ್ ಅನ್ನು ರಿಲೀಸ್ ಮಾಡಲಾಗಿದೆ. ತಮಿಳು, ತೆಲುಗು ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್‌ನಲ್ಲಿದೆ!

ಮಧ್ಯಾಹ್ನ ತಮ್ಮನ ಫಸ್ಟ್‌ ಲುಕ್ ರಿಲೀಸ್‌
ಇನ್ನು, ಕಾರ್ತಿ ನಟಿಸಿರುವ 'ಸುಲ್ತಾನ್' ಸಿನಿಮಾದ ಫಸ್ಟ್‌ ಲುಕ್ ಅನ್ನು ಸೋಮವಾರ (ಅ.26) ಮಧ್ಯಾಹ್ನ ರಿಲೀಸ್ ಮಾಡಲಾಗಿದೆ. ಶಿವಕಾರ್ತಿಕೇಯನ್ ಜೊತೆ 'ರೆಮೋ' ಸಿನಿಮಾ ಮಾಡಿದ್ದ ಬಕ್ಕಿಯರಾಜ್ ಕಣ್ಣನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ 'ಸುಲ್ತಾನ್' ಮೂಲಕ ತಮಿಳಿಗೆ ಎಂಟ್ರಿ ನೀಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಸಿನಿಮಾದ ಫಸ್ಟ್‌ ಲುಕ್ ರಿಲೀಸ್ ಆಗಿರುವುದಕ್ಕೆ ರಶ್ಮಿಕಾ ತುಂಬ ಸಂತಸ ವ್ಯಕ್ತಪಡಿಸಿದ್ದಾರೆ. ಅತ್ತ ಸೂರ್ಯ ಕೂಡ ತಮ್ಮನ ಸಿನಿಮಾಗೆ ವಿಶ್‌ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಫಸ್ಟ್‌ ಲುಕ್ ಟ್ರೆಂಡಿಂಗ್‌ನಲ್ಲಿದೆ.

ಸೂರ್ಯ ನಟನೆಯ 'ಸೂರರೈ ಪೊಟ್ರು:' ತಮಿಳುನಾಡಿನಲ್ಲಿ ಕನ್ನಡದ ಸಾಧಕನ ಸಿನಿಮಾ ರಿಲೀಸ್‌ಗೆ ವಿರೋಧ;

'ಸೂರರೈ ಪೊಟ್ರು' ಕನ್ನಡದಲ್ಲಿ ಯಾವಾಗ ಬರಲಿದೆ?
ಸೂರ್ಯ ಅವರ 'ಸೂರರೈ ಪೊಟ್ರು' ಚಿತ್ರವು ಓಟಿಟಿಯಲ್ಲಿ ರಿಲೀಸ್ ಆಗುವುದು ಖಚಿತವಾಗಿದೆ. ಸದ್ಯ 'ಸೂರರೈ ಪೊಟ್ರು' ಟ್ರೇಲರ್ ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗಿದೆ. ಕನ್ನಡದಲ್ಲಿ ಯಾವಾಗ ಬರಲಿದೆ ಅನ್ನೋ ಪ್ರಶ್ನೆ ಕೇಳಿಬಂದಿದೆ. ಯಾಕೆಂದರೆ, ಈ ಸಿನಿಮಾವನ್ನು ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಬದುಕನ್ನಾಧರಿಸಿ ಮಾಡಿರುವಂಥದ್ದು. ಹಾಗಾಗಿ, ಕನ್ನಡಿಗನ ಯಶೋಗಾಥೆಯನ್ನು ಕನ್ನಡದಲ್ಲೇ ನೋಡಬೇಕು ಎಂಬುದು ಕನ್ನಡಿಗರ ಬೇಡಿಕೆಯಾಗಿದೆ. ಈ ಹಿಂದೆ ಕನ್ನಡದಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗುವುದು ಎಂದು ತಂಡ ಹೇಳಿಕೊಂಡಿತ್ತಾದರೂ, ಈಗ ಕನ್ನಡ ವರ್ಷನ್ ಟ್ರೇಲರ್ ಮಾತ್ರ ರಿಲೀಸ್ ಮಾಡಿಲ್ಲ!

ಚಿತ್ರಮಂದಿರದಲ್ಲೇ ರಿಲೀಸ್ ಆಗಲಿದೆ ಕರುನಾಡ ಸಾಧಕನ ಸಿನಿಮಾ! ನಟ ಸೂರ್ಯ ಸ್ಪಷ್ಟನೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌