ಆ್ಯಪ್ನಗರ

ಚಿರು ಸರ್ಜಾ, ಸುಶಾಂತ್‌ ಸಿಂಗ್‌, ಇರ್ಫಾನ್‌ ಖಾನ್‌ಗೆ ವಿಶೇಷ ಗೌರವ ಸಲ್ಲಿಸಿದ ಇನ್‌ಸ್ಟಾಗ್ರಾಮ್‌!

ಸುಶಾಂತ್‌ ಸಿಂಗ್‌ ರಜಪೂತ್‌, ಚಿರಂಜೀವಿ ಸರ್ಜಾ, ಇರ್ಫಾನ್‌ ಖಾನ್‌ ಮುಂತಾದವರ ನಿಧನದಿಂದ ಈ ವರ್ಷ ಇಡೀ ಭಾರತೀಯ ಚಿತ್ರರಂಗ ಸೊರಗಿದೆ. ಅಕಾಲಿಕವಾಗಿ ಅಗಲಿದ ಈ ನಟರಿಗೆ ಇನ್‌ಸ್ಟಾಗ್ರಾಮ್‌ ಮೂಲಕ ಗೌರವ ಸಲ್ಲಿಸಲಾಗಿದೆ.

Vijaya Karnataka Web 7 Jul 2020, 10:42 pm
ಭಾರತೀಯ ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ ಎದುರಾಗುತ್ತಲೇ ಇದೆ. ಈ ಲಾಕ್‌ಡೌನ್‌ನ ಕಡುಕಷ್ಟದ ಸಂದರ್ಭದಲ್ಲಿಯೇ ಹಲವು ಖ್ಯಾತ ನಟರು ಕೊನೆಯುಸಿರೆಳೆದಿರುವುದು ನೋವಿನ ಸಂಗತಿ. ಸುಶಾಂತ್ ಸಿಂಗ್‌ ರಜಪೂತ್‌ ಆದಿಯಾಗಿ ಬಣ್ಣದ ಲೋಕದಲ್ಲಿ ಬಾಳಿ ಬದುಕಬೇಕಾದ ಪ್ರತಿಭಾವಂತರು ಹೀಗೆ ಸಾವಿನ ಮನೆಯ ಕದ ತಟ್ಟಿದ್ದನ್ನು ಅವರ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ.
Vijaya Karnataka Web sushant singh rajput chiranjeevi sarja irrfan khan instagram account memorialized
ಚಿರು ಸರ್ಜಾ, ಸುಶಾಂತ್‌ ಸಿಂಗ್‌, ಇರ್ಫಾನ್‌ ಖಾನ್‌ಗೆ ವಿಶೇಷ ಗೌರವ ಸಲ್ಲಿಸಿದ ಇನ್‌ಸ್ಟಾಗ್ರಾಮ್‌!


ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇರ್ಫಾನ್ ಖಾನ್‌ ಇನ್ನೇನು ಚೇತರಿಕೆ ಕಾಣುತ್ತಾರೆ ಎಂಬಷ್ಟರಲ್ಲೇ ನಿಧನರಾದರು. ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ಒಳಗಾಗುವ ಮೂಲಕ ವಿಧಿವಶರಾದರು. ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಯಾರನ್ನು ಹೊಣೆ ಮಾಡಬೇಕೋ ಗೊತ್ತಿಲ್ಲ. ಈ ಎಲ್ಲ ನಟರೂ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚಿ ಸಕ್ರಿಯ ಆಗಿದ್ದರು. ಅವರಿಗೆ ಈಗ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.

ಸೆಲೆಬ್ರಿಟಿಗಳನ್ನು ಅಭಿಮಾನಿಗಳ ಜೊತೆ ಬೆಸೆಯಲು ಸೋಶಿಯಲ್‌ ಮೀಡಿಯಾ ತುಂಬ ಸಹಕಾರಿ ಆಗಿದೆ. ಅದರಲ್ಲೂ ಇನ್‌ಸ್ಟಾಗ್ರಾಮ್‌ ಮೂಲಕ ತಮ್ಮ ಸಿನಿಮಾ ಮತ್ತು ರಿಯಲ್‌ ಲೈಫ್‌ ಬಗ್ಗೆ ಆಗಾಗ ಮಾಹಿತಿ ನೀಡುತ್ತಾರೆ ಸಿನಿಮಾ ಕಲಾವಿದರು. ಸುಶಾಂತ್‌, ಚಿರು, ಇರ್ಫಾನ್‌ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಸಕ್ರಿಯ ಆಗಿದ್ದರು. ಲಕ್ಷಾಂತರ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಿದ್ದರು. ಅವರನ್ನು ಸದಾ ಕಾಲ ನೆನಪಿಸಿಕೊಳ್ಳಲಿದೆ ಇನ್‌ಸ್ಟಾಗ್ರಾಮ್‌.

also read: ಚಿರಂಜೀವಿ ಸರ್ಜಾ ಹೆಸರಲ್ಲಿ ಮಹತ್ವದ ನಿರ್ಧಾರ ಕೈಗೊಂಡ ಮೇಘನಾ ಸರ್ಜಾ, ಚಿರು ಆತ್ಮೀಯರು!

ಲಾಕ್‌ಡೌನ್‌ ಸಂದರ್ಭದಲ್ಲಿ ವಿಧಿವಶರಾದ ಈ ಸೆಲೆಬ್ರಿಟಿಗಳಿಗೆ ಇನ್‌ಸ್ಟಾಗ್ರಾಮ್‌ 'ರಿಮೆಂಬರಿಂಗ್‌' ಟ್ಯಾಗ್‌ ನೀಡಿದೆ. ಅಂದರೆ ನಿಮ್ಮನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ ಎಂಬುದನ್ನು ಈ ಟ್ಯಾಗ್‌ ಸೂಚಿಸುತ್ತದೆ. ಸುಶಾಂತ್‌ ಸಿಂಗ್‌ ರಜಪೂತ್‌, ಚಿರಂಜೀವಿ ಸರ್ಜಾ, ಇರ್ಫಾನ್‌ ಖಾನ್‌ ಅವರ ಪ್ರೊಫೈಲ್‌ ಪೋಟೋ ಕೆಳಗಡೆ 'ರಿಮೆಂಬರಿಂಗ್‌' ಟ್ಯಾಗ್‌ ಗೋಚರಿಸಲು ಆರಂಭ ಆಗಿದೆ. ಇನ್‌ಸ್ಟಾಗ್ರಾಮ್‌ನ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

also read: ಬಯಲಾಯ್ತು ಸುಶಾಂತ್ ಸಿಂಗ್‌ ರಜಪೂತ್‌ ನಟನೆಯ ಕೊನೇ ಸಿನಿಮಾ ಕಥೆ! 'ದಿಲ್‌ ಬೇಚಾರ' ಟ್ರೇಲರ್‌ನಲ್ಲಿ ಏನಿದೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌