ಆ್ಯಪ್ನಗರ

ಅಂತೂ ಬಾಡಿ ಶೇಮಿಂಗ್ ಬಗ್ಗೆ ಮೌನ ಮುರಿದ ದರ್ಶನ್, ಸುದೀಪ್ ಸಿನಿಮಾ ನಾಯಕಿ ಕನಿಹಾ!

ಬಾಡಿ ಶೇಮಿಂಗ್ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಅನೇಕರು ಈ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತಾರೆ. ದರ್ಶನ್ ಹಾಗೂ ಸುದೀಪ್ ಸಿನಿಮಾಗಳಲ್ಲಿ ನಾಯಕಿಯಾಗಿದ್ದ ನಟಿ ಕನಿಹಾ ಅವರು ಈ ಬಗ್ಗೆ ಮೌನ ಮುರಿದಿದ್ದಾರೆ.

THE TIMES OF INDIA NEWS SERVICE 30 Oct 2020, 8:06 pm
ಕಲಾವಿದರ ವಿಥ್ ಮೇಕಪ್, ವಿಥೌಟ್ ಮೇಕಪ್ ಫೋಟೋಗಳು ವೈರಲ್ ಆಗುತ್ತವೆ. ಒಂದು ವೇಳೆ ಕಲಾವಿದರು ಚೆನ್ನಾಗಿ ಕಾಣದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಟ್ರೋಲ್ ಮಾಡಲಾಗುವುದು, ಮನ ಬಂದಂತೆ ಕಾಮೆಂಟ್ ಮಾಡಲಾಗುವುದು. ಇನ್ನು ಮನುಷ್ಯ ಅನಾರೋಗ್ಯದಿಂದಲೋ ಅಥವಾ ಅನಿಯಮಿತವಾಗಿ ಆಹಾರ ಸೇವಿಸಿ, ಸರಿಯಾಗಿ ವ್ಯಾಯಾಮ ಮಾಡದೆ ಇರೋದರಿಂದ ದಪ್ಪಗಾಗುತ್ತಾನೆ. ಅದರಲ್ಲೂ ಕಲಾವಿದರು ದಪ್ಪ ಆದಾಗ ದೊಡ್ಡ ಮಟ್ಟದಲ್ಲಿ ಜನರ ಬಾಯಿಗೆ ಸಿಲುಕುತ್ತಾರೆ. ನಟಿ ಕನಿಹಾ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.
Vijaya Karnataka Web sye movie actress kaniha comments on body shaming
ಅಂತೂ ಬಾಡಿ ಶೇಮಿಂಗ್ ಬಗ್ಗೆ ಮೌನ ಮುರಿದ ದರ್ಶನ್, ಸುದೀಪ್ ಸಿನಿಮಾ ನಾಯಕಿ ಕನಿಹಾ!


ನಾನು ಈಗ ಬೇಸರದಿಂದಿಲ್ಲ: ಕನಿಹಾ
ಸಿನಿ ಜೀವನ ಆರಂಭಿಸಿದಾಗಿನ ತನ್ನ ಫೋಟೋ ಹಾಗೂ ಈಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಬಾಡಿ ಶೇಮಿಂಗ್ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂದು ಕನಿಹಾ ಹೇಳಿದ್ದಾರೆ. 'ಹೌದು, ಇದು ನನ್ನ ಹಳೆಯ ಫೋಟೋ. ಹಳೆಯ ಫೋಟೋ ನೋಡಿದಾಗ ಕೆಲವರಿಗೆ ನನ್ನ ಕೂದಲು ಎಷ್ಟು ಚೆನ್ನಾಗಿತ್ತು? ಸುಂದರವಾದ ಹೊಟ್ಟೆಯಿತ್ತು ಅಂತ ಅನಿಸಬಹುದು. ಇದರರ್ಥ ನಾನು ಈಗ ಇರುವ ಸ್ಥಿತಿ ಕಂಡು ಬೇಸರದಲ್ಲಿದ್ದೇನೆ ಎಂದರ್ಥವಲ್ಲ. ಈ ಹಿಂದಿನಿಕ್ಕಿಂತಲೂ ನಾನು ಸುಂದರವಾಗಿದ್ದೇನೆ, ಖುಷಿಯಾಗಿದ್ದೇನೆ' ಎಂದು ಕನಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲರ ಕಥೆ ಒಂದೇ ರೀತಿ ಇರೋದಿಲ್ಲ!
'ನನ್ನಲ್ಲಿರುವ ಕಲೆ, ಗುರುತಿನ ಬಗ್ಗೆ ಕಥೆ ಹೇಳಬಹುದು. ಆದರೆ ಎಲ್ಲವೂ ಸರಿಯಾಗಿದ್ದರೆ ಕಥೆ ಹುಟ್ಟುವುದು ಹೇಗೆ? ನಿಮ್ಮ ದೇಹವನ್ನು ಪ್ರೀತಿಸುವುದು ತುಂಬ ಮುಖ್ಯ. ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳೋದನ್ನು ಬಿಡಿ. ನಮ್ಮೆಲ್ಲರಿಗೂ ಬೇರೆ ಬೇರೆಯದ್ದೇ ಆದ ಕಥೆಯಿದೆ. ನೀವು ಕಡಿಮೆ ಅಂತ ಬೇಸರ ಮಾಡಿಕೊಳ್ಳಬೇಡಿ. ನಿಮ್ಮ ದೇಹವನ್ನು ನೀವು ಪ್ರೀತಿಸಿಸೋದನ್ನು ಕಲಿಯಿರಿ' ಎಂದು ಕನಿಹಾ ಹೇಳಿದ್ದಾರೆ.

Also Read-ಮೊಣಕಾಲಿಗಿಂತ ಮೇಲೆ ಸೀರೆಯುಟ್ಟು ಫೋಟೋಶೂಟ್: ಫೋಟೋಗ್ರಾಫರ್ ಮೇಲೆ ಲವ್ ಜಿಹಾದ್ ಆರೋಪ!

ಕನ್ನಡದಲ್ಲಿ ನಟಿಸಿರುವ ಕನಿಹಾ
ಮಲಯಾಳಂನ ಅನೇಕ ಸಿನಿಮಾಗಳಲ್ಲಿ ಕನಿಹಾ ನಟಿಸಿದ್ದಾರೆ. ನಟ ದರ್ಶನ್ ಹಾಗೂ ಅಂಬರೀಶ್ ಅಭಿನಯದ 'ಅಣ್ಣಾವ್ರು' ಹಾಗೂ ಸುದೀಪ್ ನಟನೆಯ 'ಸೈ' ಸಿನಿಮಾದಲ್ಲಿ ಕನಿಹಾ ನಾಯಕಿಯಾಗಿ ನಟಿಸಿದ್ದಾರೆ. 'ರಾಜಕುಮಾರಿ' ಎಂಬ ಕನ್ನಡ ಸಿನಿಮಾದಲ್ಲಿಯೂ ಕನಿಹಾ ಅಭಿನಯಿಸಿದ್ದರು. ಅಮೆರಿಕ ಮೂಲದ ಇಂಜಿನಿಯರ್ ಜೊತೆ ಕನಿಹಾ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಓರ್ವ ಮಗನಿದ್ದಾನೆ.

Also Read-ದಪ್ಪಗಿದ್ದವರಿಗೆ ಫಿಟ್ ಆಗಲು ಟಿಪ್ಸ್ ನೀಡಿದ 'ವರದನಾಯಕ' ಸಿನಿಮಾ ನಟಿ ಸಮೀರಾ ರೆಡ್ಡಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌