ಕಾಲಿವುಡ್ ನಟ ಸೂರ್ಯ ಕೇವಲ ನಟನಾಗಿ ಅಷ್ಟೇ ಅಲ್ಲದೆ, ಇತರರಿಗೆ ಸಹಾಯ ಹಸ್ತ ಚಾಚುವಲ್ಲೂ ಸದಾ ಮುಂದಿರುತ್ತಾರೆ ಎಂಬ ಸಂಗತಿ ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತೇ ಇರುತ್ತದೆ. ತಾವು ಮುನ್ನಡೆಸುತ್ತಿರುವ 'ಅಗರಂ ಫೌಂಡೇಷನ್' ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ಅಗರಂ ಫೌಂಡೇಷನ್ ಪರವಾಗಿ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಸೂರ್ಯ ಸಹ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗಾಯತ್ರಿ ಎಂಬ ಯುವತಿ ತನ ಜೀವನದಲ್ಲಿ ಎದುರಾದ ಕಷ್ಟಗಳು, ತನ್ನ ಶಿಕ್ಷಣಕ್ಕೆ ಅಗರಂ ಫೌಂಡೇಷನ್ ಹೇಗೆಲ್ಲಾ ಸಹಾಯ ಮಾಡಿತು ಎಂಬುದನ್ನು ವಿವರಿಸಿದರು.
ತಾನು ತಂಜಾವೂರಿನ ಕುಗ್ರಾಮವೊಂದರಿಂದ ಬಂದಿದ್ದು, ಹತ್ತನೇ ತರಗತಿವರೆಗೂ ಊರಿನ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದೆ. ಅಮ್ಮ ದಿನಗೂಲಿ ಕಾರ್ಮಿಕರು. ತಂದೆ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಹತ್ತನೇ ತರಗತಿ ಮುಗಿಸಿದ ಬಳಿಕ ಮನೆಯ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೂಲಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿದೆ.
ಆದರೆ ಅಮ್ಮ ಮಾತ್ರ ನನ್ನಂತೆ ನೀನು ಕಷ್ಟಪಡಬಾರದು, ಭಿಕ್ಷೆ ಬೇಡಿಯಾದರೂ ನಿನ್ನನ್ನು ಓದಿಸುತ್ತೇನೆ ಎಂದರು. ಆ ಬಳಿಕ ನಾನು ಅಗರಂ ಫೌಂಡೇಷನ್ನಲ್ಲಿ ಸೇರಿದೆ. ಆ ಬಳಿಕ ಸ್ವಲ್ಪ ದಿನಕ್ಕೇ ನನ್ನ ತಂದೆ ತೀರಿಕೊಂಡರು. ಆಗ ಶಿಕ್ಷಣಕ್ಕೆ ಪೂರ್ಣವಿರಾಮ ನೀಡೋಣ ಎಂದುಕೊಂಡೆ. ಆದರೆ ಅಮ್ಮ ನಿನಗಾಗಿ ನೀನು ಓದಬೇಕು ಎಂದು ಹೇಳಿದರು.
ಬಹಳಷ್ಟು ಮಂದಿ ಇಲ್ಲಿ ನನ್ನನ್ನು ಅಪಹಾಸ್ಯ ಮಾಡಿದರು. ಅಗರಂ ಸಹಾಯದಿಂದ ಕಾಲೇಜು ಪೂರ್ಣಗೊಳಿಸಿದೆ. ಆ ಬಳಿಕ ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಉದ್ಯೋಗ ಸಿಕ್ಕಿತು. ನನ್ನ ಜೀವನದಲ್ಲಿ ಬೆಳಕು ತುಂಬಿದ ಅಗರಂಗೆ, ಸೂರ್ಯ ಅಣ್ಣನಿಗೆ ಕೃತಜ್ಞತೆಗಳನ್ನು ತಿಳಿಸಲು ಇಲ್ಲಿಗೆ ಬಂದೆ ಎಂದು ಗಾಯತ್ರಿ ತಮ್ಮ ಪಯಣದ ಬಗ್ಗೆ ತಿಳಿಸಿದರು.
ಗಾಯತ್ರಿ ತನ್ನ ಕಥೆ ಹೇಳುತ್ತಿದ್ದ ಸಮಯದಲ್ಲಿ ವೇದಿಕೆ ಮೇಲೆ ಇದ್ದ ಸೂರ್ಯ ಭಾವೋದ್ವೇಗಕ್ಕೆ ಒಳಗಾದರು. ತುಂಬಿ ಬರುತ್ತಿದ್ದ ಕಣ್ಣೀರನ್ನು ಅವರ ಕೈಲಿ ತಡೆದುಕೊಳ್ಳಲು ಆಗಲಿಲ್ಲ. ಗಾಯತ್ರಿ ಬಳಿಗೆ ಬಂದು ಆಪ್ಯಾಯದಿಂದ ಮಾತನಾಡುವುದರ ಜೊತೆಗೆ ಅವರನ್ನು ಸಮಾಧಾನಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಚೆನ್ನೈನಲ್ಲಿ ಅಗರಂ ಫೌಂಡೇಷನ್ ಪರವಾಗಿ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಸೂರ್ಯ ಸಹ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗಾಯತ್ರಿ ಎಂಬ ಯುವತಿ ತನ ಜೀವನದಲ್ಲಿ ಎದುರಾದ ಕಷ್ಟಗಳು, ತನ್ನ ಶಿಕ್ಷಣಕ್ಕೆ ಅಗರಂ ಫೌಂಡೇಷನ್ ಹೇಗೆಲ್ಲಾ ಸಹಾಯ ಮಾಡಿತು ಎಂಬುದನ್ನು ವಿವರಿಸಿದರು.
ತಾನು ತಂಜಾವೂರಿನ ಕುಗ್ರಾಮವೊಂದರಿಂದ ಬಂದಿದ್ದು, ಹತ್ತನೇ ತರಗತಿವರೆಗೂ ಊರಿನ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದೆ. ಅಮ್ಮ ದಿನಗೂಲಿ ಕಾರ್ಮಿಕರು. ತಂದೆ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಹತ್ತನೇ ತರಗತಿ ಮುಗಿಸಿದ ಬಳಿಕ ಮನೆಯ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೂಲಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿದೆ.
ಆದರೆ ಅಮ್ಮ ಮಾತ್ರ ನನ್ನಂತೆ ನೀನು ಕಷ್ಟಪಡಬಾರದು, ಭಿಕ್ಷೆ ಬೇಡಿಯಾದರೂ ನಿನ್ನನ್ನು ಓದಿಸುತ್ತೇನೆ ಎಂದರು. ಆ ಬಳಿಕ ನಾನು ಅಗರಂ ಫೌಂಡೇಷನ್ನಲ್ಲಿ ಸೇರಿದೆ. ಆ ಬಳಿಕ ಸ್ವಲ್ಪ ದಿನಕ್ಕೇ ನನ್ನ ತಂದೆ ತೀರಿಕೊಂಡರು. ಆಗ ಶಿಕ್ಷಣಕ್ಕೆ ಪೂರ್ಣವಿರಾಮ ನೀಡೋಣ ಎಂದುಕೊಂಡೆ. ಆದರೆ ಅಮ್ಮ ನಿನಗಾಗಿ ನೀನು ಓದಬೇಕು ಎಂದು ಹೇಳಿದರು.
ಬಹಳಷ್ಟು ಮಂದಿ ಇಲ್ಲಿ ನನ್ನನ್ನು ಅಪಹಾಸ್ಯ ಮಾಡಿದರು. ಅಗರಂ ಸಹಾಯದಿಂದ ಕಾಲೇಜು ಪೂರ್ಣಗೊಳಿಸಿದೆ. ಆ ಬಳಿಕ ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಉದ್ಯೋಗ ಸಿಕ್ಕಿತು. ನನ್ನ ಜೀವನದಲ್ಲಿ ಬೆಳಕು ತುಂಬಿದ ಅಗರಂಗೆ, ಸೂರ್ಯ ಅಣ್ಣನಿಗೆ ಕೃತಜ್ಞತೆಗಳನ್ನು ತಿಳಿಸಲು ಇಲ್ಲಿಗೆ ಬಂದೆ ಎಂದು ಗಾಯತ್ರಿ ತಮ್ಮ ಪಯಣದ ಬಗ್ಗೆ ತಿಳಿಸಿದರು.
ಗಾಯತ್ರಿ ತನ್ನ ಕಥೆ ಹೇಳುತ್ತಿದ್ದ ಸಮಯದಲ್ಲಿ ವೇದಿಕೆ ಮೇಲೆ ಇದ್ದ ಸೂರ್ಯ ಭಾವೋದ್ವೇಗಕ್ಕೆ ಒಳಗಾದರು. ತುಂಬಿ ಬರುತ್ತಿದ್ದ ಕಣ್ಣೀರನ್ನು ಅವರ ಕೈಲಿ ತಡೆದುಕೊಳ್ಳಲು ಆಗಲಿಲ್ಲ. ಗಾಯತ್ರಿ ಬಳಿಗೆ ಬಂದು ಆಪ್ಯಾಯದಿಂದ ಮಾತನಾಡುವುದರ ಜೊತೆಗೆ ಅವರನ್ನು ಸಮಾಧಾನಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.