ಸೂಪರ್ ಸ್ಟಾರ್ ರಜನಿಕಾಂತ್ ಕಾಣಿಸಿದರೆ ಸಾಕು ಅವರ ಕಾಲಿಗೆ ಬೀಳುವ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಆದರೆ ರಜನಿಕಾಂತ್ ಅವರೇ ಅಭಿಮಾನಿ ಕಾಲು ಹಿಡಿದಿಕೊಂಡಿರುವ ಘಟನೆ ನಡೆದಿದೆ. ಯಾಕೆಂದರೆ ಆ ಅಭಿಮಾನಿಗೆ ಎರಡೂ ಕೈಗಳು ಇಲ್ಲ.
ಈ ಅಭಿಮಾನಿಗೆ ಕೈಗಳು ಇಲ್ಲದಿರುವ ಕಾರಣ ಕಾಲಿನಲ್ಲೇ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಆ ಅಭಿಮಾನಿಗೆ ಷೇಕ್ ಹ್ಯಾಂಡ್ ನೀಡಲು ರಜನಿ ಅವರ ಕಾಲು ಹಿಡಿದುಕೊಂಡರು. ಆ ಸಮಯದಲ್ಲಿ ತೆಗೆದ ಫೋಟೋಗಳು ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸುತ್ತಿವೆ.
ಕೇರಳದಲ್ಲಿನ ಪಗಘಾಟ್ ಮೂಲದ ಪ್ರಣವ್ ಎಂಬ ದಿವ್ಯಾಂಗರೊಬ್ಬರ ಹೆಸರು ಮಾಧ್ಯಮಗಳಲ್ಲಿ ಈಗ ಮಾರ್ದನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಣವ್ಗೆ ರಜನಿಕಾಂತ್ರಿಂದ ಕರೆ ಬಂದಿದೆ. ತಲೈವಾರನ್ನು ಭೇಟಿಯಾಗಬೇಕು ಎಂದು ತುಂಬಾ ಸಮಯದಿಂದ ಕನಸು ಕಾಣುತ್ತಿದ್ದರು. ಈ ಸಂಗತಿ ತಿಳಿದುಕೊಂಡ ರಜನಿಕಾಂತ್ ಸ್ವತಃ ಪೊಯೆಸ್ ಗಾರ್ಡನ್ನಲ್ಲಿನ ತನ್ನ ಮನೆಗೆ ಆಹ್ವಾನಿಸಿದರು.
ಕೇರಳದಿಂದ ಚೈನ್ನೈಗೆ ಆಗಮಿಸಲು ಪ್ರಣವ್ ಕುಟುಂಬಕ್ಕೆ ರಜನಿಕಾಂತ್ ಟಿಕೆಟ್ ಬುಕ್ ಮಾಡಿಸಿದ್ದಾರೆ. 21 ವರ್ಷದ ಪ್ರಣವ್ ಅದ್ಭುತ ಕಲಾವಿದ. ತನ್ನ ಕಾಲಿನಿಂದ ರಜನಿಕಾಂತ್ ಚಿತ್ರವನ್ನು ಬಿಡಿಸಿ ಅದನ್ನು ತಲೈವಾಗೆ ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೆ ಅಲ್ಲದೆ ಪ್ರಣವ್ ಕಾಲು ಹಿಡಿದುಕೊಂಡ ರಜನಿಕಾಂತ್ ಷೇಕ್ ಹ್ಯಾಂಡ್ ನೀಡುವಂತೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಆಗ ಕ್ಲಿಕ್ಕಿಸಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಪ್ರಣವ್ ಬಿಡಿಸಿದ ಚಿತ್ರಗಳ ಮುಖಾಂತರ ಬರುವ ಹಣವನ್ನು ಕೇರಳ ಸರಕಾರಕ್ಕೆ ನಿಧಿಯಾಗಿ ನೀಡಿದ್ದಾರೆ. ಕಳೆದ ವರ್ಷ ಕೇರಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ತತ್ತರಿಸಿದ್ದು ಗೊತ್ತೇ ಇದೆ. ಈ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರಣವ್ ಸಹಾಯ ಮಾಡಿದ್ದಾರೆ.
ಹಿಮಾಲಯದ ಬಾಬಾ ಗುಹೆಗೆ ಹೊರಟ ಸ್ಟೈಲ್ ಕಿಂಗ್
ಪರಿಹಾರ ನಿಧಿ ನೀಡುವಾಗ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಸೆಲ್ಫಿ ತೆಗೆಸಿಕೊಂಡಿದ್ದರು. ಅಂದಿನಿಂದ ಪ್ರಣವ್ ಹೆಸರು ಮಾಧ್ಯಮಗಳಲ್ಲಿ ಮಾರ್ದನಿಸುತ್ತಿದೆ. ಇದಕ್ಕೂ ಮುನ್ನ ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ರನ್ನೂ ಪ್ರಣವ್ ಭೇಟಿ ಮಾಡಿ ಸೆಲ್ಫಿ ತೆಗೆಸಿಕೊಂಡಿದ್ದರು.
ತಲೈವಾ ರಜನಿಕಾಂತ್ ಸಂಭಾವನೆ ಕುರಿತ 27 ವರ್ಷಗಳ ಹಳೇ ವಿಡಿಯೋ ವೈರಲ್
ಈ ಅಭಿಮಾನಿಗೆ ಕೈಗಳು ಇಲ್ಲದಿರುವ ಕಾರಣ ಕಾಲಿನಲ್ಲೇ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಆ ಅಭಿಮಾನಿಗೆ ಷೇಕ್ ಹ್ಯಾಂಡ್ ನೀಡಲು ರಜನಿ ಅವರ ಕಾಲು ಹಿಡಿದುಕೊಂಡರು. ಆ ಸಮಯದಲ್ಲಿ ತೆಗೆದ ಫೋಟೋಗಳು ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸುತ್ತಿವೆ.
ಕೇರಳದಲ್ಲಿನ ಪಗಘಾಟ್ ಮೂಲದ ಪ್ರಣವ್ ಎಂಬ ದಿವ್ಯಾಂಗರೊಬ್ಬರ ಹೆಸರು ಮಾಧ್ಯಮಗಳಲ್ಲಿ ಈಗ ಮಾರ್ದನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಣವ್ಗೆ ರಜನಿಕಾಂತ್ರಿಂದ ಕರೆ ಬಂದಿದೆ. ತಲೈವಾರನ್ನು ಭೇಟಿಯಾಗಬೇಕು ಎಂದು ತುಂಬಾ ಸಮಯದಿಂದ ಕನಸು ಕಾಣುತ್ತಿದ್ದರು. ಈ ಸಂಗತಿ ತಿಳಿದುಕೊಂಡ ರಜನಿಕಾಂತ್ ಸ್ವತಃ ಪೊಯೆಸ್ ಗಾರ್ಡನ್ನಲ್ಲಿನ ತನ್ನ ಮನೆಗೆ ಆಹ್ವಾನಿಸಿದರು.
ಪ್ರಣವ್ ಬಿಡಿಸಿದ ಚಿತ್ರಗಳ ಮುಖಾಂತರ ಬರುವ ಹಣವನ್ನು ಕೇರಳ ಸರಕಾರಕ್ಕೆ ನಿಧಿಯಾಗಿ ನೀಡಿದ್ದಾರೆ. ಕಳೆದ ವರ್ಷ ಕೇರಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ತತ್ತರಿಸಿದ್ದು ಗೊತ್ತೇ ಇದೆ. ಈ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರಣವ್ ಸಹಾಯ ಮಾಡಿದ್ದಾರೆ.
ಹಿಮಾಲಯದ ಬಾಬಾ ಗುಹೆಗೆ ಹೊರಟ ಸ್ಟೈಲ್ ಕಿಂಗ್
ತಲೈವಾ ರಜನಿಕಾಂತ್ ಸಂಭಾವನೆ ಕುರಿತ 27 ವರ್ಷಗಳ ಹಳೇ ವಿಡಿಯೋ ವೈರಲ್