ಆ್ಯಪ್ನಗರ

ಎರಡನೇ ಮದುವೆಗೆ ರೆಡಿಯಾದ್ರಾ ಟಾಲಿವುಡ್ ಖ್ಯಾತ ನಿರ್ಮಾಪಕ ದಿಲ್ ರಾಜು?

ತೆಲುಗು ಚಿತ್ರೋದ್ಯಮದಲ್ಲಿ ಸಕ್ಸಸ್‌ಫುಲ್ ನಿರ್ಮಾಪಕರಾಗಿ ಹೆಸರು ಮಾಡಿರುವ ದಿಲ್ ರಾಜು ರಾಷ್ಟ್ರ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಇದುವರೆಗೂ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ. 2003ರಲ್ಲಿ ರಿಲೀಸ್ ಆದ ದಿಲ್ ಸಿನಿಮಾ ಮೂಲಕ ನಿರ್ಮಾಪಕರಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು.

Samayam Telugu 10 Feb 2020, 8:09 pm
ಟಾಲಿವುಡ್‌ನ ಯಶಸ್ವಿ ನಿರ್ಮಾಪಕ, ವಿತರಕ ದಿಲ್ ರಾಜು ಮತ್ತೆ ಮದುವೆಯಾಗಲು ನಿರ್ಧರಿಸಿದ್ದಾರಂತೆ. ದಿಲ್ ರಾಜು ಪತ್ನಿ ಅನಿತಾ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾದರು. ಆ ಬಳಿಕ ತನ್ನ ಒಬ್ಬಳೇ ಮಗಳಿಗೆ ಮದುವೆ ಮಾಡಿ ಅತ್ತೆ ಮನೆಗೆ ಕಳುಹಿಸಿದ್ದಾರೆ. ಮಗಳು ಅತ್ತೆ ಮನೆಗೆ ಹೋದ ಬಳಿಕ ದಿಲ್ ರಾಜು ಈಗ ಏಕಾಂಗಿಯಾಗಿದ್ದಾರೆ ಎಂದಿವೆ ಟಾಲಿವುಡ್ ಮೂಲಗಳು.
Vijaya Karnataka Web ದಿಲ್ ರಾಜು


ಏಕಾಂಗಿಯಾಗಿರುವ ದಿಲ್ ರಾಜು ಮತ್ತೆ ಮದುವೆಯಾಗಲು, ಬಾಳ ಸಂಗಾತಿಯೊಬ್ಬರನ್ನು ಹುಟ್ಟುಕುತ್ತಿದ್ದಾರಂತೆ. ಚಿತ್ರರಂಗದ ಹಿನ್ನೆಲೆ ಇಲ್ಲದ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಯುವತಿಯನ್ನು ಕೈಹಿಡಿಯಲು ದಿಲ್ ರಾಜು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿರುವ ಗಾಸಿಪ್ ಬಗ್ಗೆ ದಿಲ್ ರಾಜು ಇನ್ನೂ ಪ್ರತಿಕ್ರಿಯಿಸಿಲ್ಲ.

ತೆಲುಗು ಚಿತ್ರೋದ್ಯಮದಲ್ಲಿ ಸಕ್ಸಸ್‌ಫುಲ್ ನಿರ್ಮಾಪಕರಾಗಿ ಹೆಸರು ಮಾಡಿರುವ ದಿಲ್ ರಾಜು ರಾಷ್ಟ್ರ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಇದುವರೆಗೂ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ. 2003ರಲ್ಲಿ ರಿಲೀಸ್ ಆದ ದಿಲ್ ಸಿನಿಮಾ ಮೂಲಕ ನಿರ್ಮಾಪಕರಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುವ ಮೂಲಕ ಆ ಸಿನಿಮಾ ಹೆಸರು ಇವರ ಹೆಸರಿನ ಜೊತೆಗೆ ಸೇರಿಕೊಂಡಿತು.

ದಿಲ್ ರಾಜು ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹೊರಬೀಳಲು ಕಾರಣ ಇದೇನಾ?

ಆ ಬಳಿಕ ಆರ್ಯ, ಬೊಮ್ಮರಿಲ್ಲು, ಮಿಸ್ಟರ್ ಪರ್ಫೆಕ್ಟ್, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಸಿನಿಮಾಗಳಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿದರು. ಈಗ ಟಾಲಿವುಡ್ ಚಿತ್ರೋದ್ಯಮದಲ್ಲೇ ಟಾಪ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ ದಿಲ್ ರಾಜು.

ವಕೀಲ ವೃತ್ತಿ ಆರಂಭಿಸಿದ ತೆಲುಗು ನಟ ಪವನ್‌ ಕಲ್ಯಾಣ್!
ದಿಲ್ ರಾಜು ನಿರ್ಮಾಣದ ಜಾನು ಸಿನಿಮಾ ಇದೀಗ ರಿಲೀಸ್ ಆಗಿದೆ. ಆದರೆ ಈ ಸಿನಿಮಾ ನಿರೀಕ್ಷಿಸಿದ ಪ್ರಮಾಣದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ದಿಲ್ ರಾಜು ಬ್ಯಾನರ್‌ನಲ್ಲಿ ಬಂದಂತಹ ಮೊದಲ ರೀಮೇಕ್ ಸಿನಿಮಾ ಇದು. ಸದ್ಯಕ್ಕೆ ನಾನಿ ಅಭಿನಯದ V, ಅಲ್ಲು ಅರ್ಜುನ್ ನಟನೆಯ ಐಕಾನ್ ಸಿನಿಮಾಗಳನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಖ್ಯಾತ ನಿರ್ದೇಶಕ ವಿವಿ ವಿನಾಯಕ್ ಹೀರೋ ಆಗಿ ಪರಿಚಯವಾಗುತ್ತಿರುವ ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌