ಆ್ಯಪ್ನಗರ

ಸುಶಾಂತ್‌ಗೆ ಇದ್ದ ಮಾನಸಿಕ ಖಾಯಿಲೆ ಆಧರಿಸಿ ಸಿನಿಮಾ ಮಾಡಲಿದ್ದಾರಾ ಸ್ಟಾರ್‌ ನಟ ನಾನಿ?

ಸುಶಾಂತ್‌ ಸಿಂಗ್‌ ರಜಪೂತ್‌ ಅವರಿಗೆ ಬೈಪೋಲಾರ್‌ ಡಿಸಾರ್ಡರ್‌ ಇತ್ತು ಎಂದು ಹೇಳಲಾಗುತ್ತಿದೆ. ಆ ಮಾನಸಿಕ ಖಾಯಿಲೆಯನ್ನು ಆಧರಿಸಿದ ಸಿನಿಮಾದಲ್ಲಿ ಸ್ಟಾರ್‌ ನಟ ನಾನಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ!

Vijaya Karnataka Web 14 Aug 2020, 1:42 pm
ಹಿಂದಿ ಚಿತ್ರರಂಗದಲ್ಲಿ ಮಿಂಚಿ ಮೆರೆಯಬೇಕಾಗಿದ್ದ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಮಾಡಿಕೊಂಡಿದ್ದು ವಿಪರ್ಯಾಸ. ಅವರ ಬಗ್ಗೆ ಸಿನಿಮಾ ಕೂಡ ಮೂಡಿಬರಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಆದರೆ ಆ ಸಿನಿಮಾ ಈಗ ಯಾವ ಹಂತದಲ್ಲಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಷ್ಟರಲ್ಲಾಗಲೇ ಟಾಲಿವುಡ್‌ನಲ್ಲಿ ಮತ್ತೊಂದು ವದಂತಿ ಹಬ್ಬಿದೆ.
Vijaya Karnataka Web tuck jagadish movie actor nani rubbishes reports of him playing bipolar disorder character
ಸುಶಾಂತ್‌ಗೆ ಇದ್ದ ಮಾನಸಿಕ ಖಾಯಿಲೆ ಆಧರಿಸಿ ಸಿನಿಮಾ ಮಾಡಲಿದ್ದಾರಾ ಸ್ಟಾರ್‌ ನಟ ನಾನಿ?


ಸುಶಾಂತ್‌ ಸಿಂಗ್‌ ರಜಪೂತ್‌ ಅವರಿಗೆ ಖಿನ್ನತೆ ಇತ್ತು ಎಂದು ಕೆಲವರು ಹೇಳಿಕೆ ನೀಡಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಅದೇ ಕಾರಣ ಎಂಬ ವಾದ ಕೂಡ ಇದೆ. ಇನ್ನು, ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಮನೋವೈದ್ಯರು ಕೂಡ ಕೆಲವೇ ದಿನಗಳ ಹಿಂದೆ ಪೊಲೀಸರ ವಿಚಾರಣೆಗೆ ಒಳಗಾಗಿದ್ದು, ಸುಶಾಂತ್‌ಗೆ ಬೈಪೋಲಾರ್‌ ಡಿಸಾರ್ಡರ್‌ ಇತ್ತು ಎಂದು ಹೇಳಿಕೆ ನೀಡಿದ್ದಾರೆ. ಆ ಮಾನಸಿಕ ಖಾಯಿಲೆ ಬಗ್ಗೆ ಹೊಸದೊಂದು ಗಾಸಿಪ್‌ ಹರಿದಾಡಿದೆ.

ಟಾಲಿವುಡ್‌ನ ಸ್ಟಾರ್‌ ನಟ ನಾನಿ 'ಟಕ್‌ ಜಗದೀಶ್‌' ಚಿತ್ರದಲ್ಲಿ ಅಭಿನಯಿಸಿದ್ದು, ಅವರ ಪಾತ್ರದ ಬಗ್ಗೆ ಗುಸುಗುಸು ಕೇಳಿಬಂದಿದೆ. ಆ ಚಿತ್ರದಲ್ಲಿ ಅವರು ಬೈಪೋಲಾರ್‌ ಡಿಸಾರ್ಡರ್‌ನಿಂದ ಬಳಲುತ್ತಿರುವ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಕೇಳಿಬಂದಿದೆ. ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮಾನಸಿಕ ಆರೋಗ್ಯದ ವಿಷಯ ಭಾರಿ ಹೈಪ್‌ ಸೃಷ್ಟಿಸಿರುವ ಈ ಸಂದರ್ಭದಲ್ಲಿ ನಾನಿ ಕೂಡ ಅಂಥದ್ದೇ ಪಾತ್ರ ಮಾಡಿರುವುದು ಅನೇಕರ ಅಚ್ಚರಿಗೆ ಕಾರಣ ಆಯಿತು. ಆದರೆ ಅದರಲ್ಲೊಂದು ಟ್ವಿಸ್ಟ್‌ ಇದೆ.

also read: ಸುಶಾಂತ್‌ ಮೃತ ದೇಹದ ಮೇಲಿತ್ತು ಅನುಮಾನಾಸ್ಪದ ಕಲೆ! ಆಂಬ್ಯುಲೆನ್ಸ್‌ ಸಹಾಯಕ ಬಿಚ್ಚಿಟ್ಟ ರಹಸ್ಯ!

ಈ ಸುದ್ದಿ ನಾನಿ ಕಿವಿಗೂ ಬಿದ್ದಿದೆ. ಅದನ್ನು ಅವರು ತಳ್ಳಿಹಾಕಿದ್ದಾರೆ. 'ನಾನು ಬೈಪೋಲಾರ್‌ ಡಿಸಾರ್ಡರ್‌ ಇರುವ ವ್ಯಕ್ತಿಯ ಪಾತ್ರ ಮಾಡುತ್ತಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಶುದ್ಧ ಸುಳ್ಳು' ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದಲ್ಲಿ ರಿತೂ ವರ್ಮಾ ಮತ್ತು ಐಶ್ವರ್ಯಾ ರಾಜೇಶ್‌ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷ ಜುಲೈ ತಿಂಗಳಲ್ಲೇ 'ಟಕ್‌ ಜಗದೀಶ್‌' ತೆರೆಕಾಣಬೇಕಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

also read: ಸುಶಾಂತ್‌ ನಂಬರ್‌ ಬ್ಲಾಕ್‌ ಮಾಡಿ, ಮಹೇಶ್‌ ಭಟ್‌ ಜೊತೆ ಮಾತುಕಥೆ ಜಾಸ್ತಿ ಮಾಡಿದ್ದ ರಿಯಾ ಚಕ್ರವರ್ತಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌