ಆ್ಯಪ್ನಗರ

ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು

ಕೊರೊನಾದ ಎರಡನೇ ಅಲೆ ಎಲ್ಲರನ್ನೂ ಮನೆಯಲ್ಲೇ ಇರುವಂತೆ ಮಾಡಿದೆ. ಕನ್ನಡದ ಕೆಲ ಕಲಾವಿದರು ಬಿಡುವಿನ ಈ ಸಮಯದಲ್ಲಿತಮ್ಮ ಫಾರ್ಮ್‌ ಹೌಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.

Vijaya Karnataka Web 18 May 2021, 9:38 pm
ಹರೀಶ್‌ ಬಸವರಾಜ್‌
Vijaya Karnataka Web upendra dhananjaya and others sandalwood celebrities spend quality time in their farms
ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು

ಕೊರೊನಾದಿಂದಾಗಿ ಚಿತ್ರರಂಗದ ಕೆಲಸಗಳು ಸ್ಥಗಿತಗೊಂಡಿವೆ. ಇದರಿಂದಾಗಿ ನಟನಟಿಯರಿಗೆ ಶೂಟಿಂಗ್‌ಗೆ ಹೋಗುವಂತಿಲ್ಲ. ವರ್ಕೌಟ್‌ ಸೇರಿದಂತೆ ಯಾವುದೇ ಚಟುವಟಿಕೆ ಇದ್ದರೂ ಮನೆಗೇ ಸೀಮಿತ. ಬಿಡುವಿನ ಈ ಸಮಯ ಕಳೆಯಲು ಕಳೆದ ಬಾರಿಯ ಲಾಕ್‌ಡೌನ್‌ನಲ್ಲಿ ಹಲವು ಕಲಾವಿದರು ತಮ್ಮ ತೋಟದ ಮನೆಗಳನ್ನು ಸೇರಿಕೊಂಡಿದ್ದರು. ಈ ಬಾರಿಯೂ ಅದು ಮುಂದುವರಿದಿದೆ. ಬೇಸಿಗೆ ಬಿಸಿಲಿಗೆ ತಣ್ಣಗಿರುವುದರ ಜೊತೆಗೆ ಜನಸಂದಣಿ, ಸೋಂಕಿನಿಂದ ಸುರಕ್ಷಿತವಾಗಿರಲು ಅವರು ಕಂಡುಕೊಂಡಿರುವ ದಾರಿಯಿದು.

ತೋಟದ ಮನೆಯಲ್ಲಿ ದರ್ಶನ್‌
ನಟ ದರ್ಶನ್‌ಗೆ ತೋಟದ ಮನೆ ಹೊಸದಲ್ಲ. ಆದರೆ, ಲಾಕ್‌ಡೌನ್‌ ಸಮಯದಲ್ಲಿಅವರು ಹೆಚ್ಚು ಕಾಲ ಕಳೆದ ಜಾಗವೆಂದರೆ ಅದು ತೋಟದ ಮನೆ. ಜನತಾ ಕರ್ಫ್ಯೂ ಜಾರಿಯಾದಾಗಿನಿಂದಲೂ ಮೈಸೂರು ಮತ್ತು ಟಿ. ನರಸೀಪುರ ರಸ್ತೆಯಲ್ಲಿರುವ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿರುವ ಹಸುಗಳ ಹಾಲು ಕರೆಯುವುದರಿಂದ ಹಿಡಿದು ತೋಟದ ಎಲ್ಲ ಕೆಲಸಗಳನ್ನೂ ದರ್ಶನ್‌ ಮಾಡುತ್ತಾರೆ. ಈ ಬಾರಿ ಅವರ ಜತೆ ನಟ ರಾಜವರ್ಧನ್‌ ಸಹ ಇದ್ದಾರೆ.

​ಕೃಷಿಗೆ ಮರಳಿದ ಉಪ್ಪಿ

'ರಿಯಲ್‌ ಸ್ಟಾರ್‌' ಉಪೇಂದ್ರ ಈಗ ಚಿತ್ರರಂಗದವರು ಮತ್ತು ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ. ಆದರೆ ಲಾಕ್‌ಡೌನ್‌ ಆರಂಭಕ್ಕೂ ಮುನ್ನ ಬೆಂಗಳೂರಿನ ದೊಡ್ಡಾಲದ ಮರದ ಬಳಿ ಇರುವ ತಮ್ಮ ತೋಟಕ್ಕೆ ಹೋಗಿ ಕೆಲಸ ಮಾಡುತ್ತಿದ್ದರು. ಈಗಲೂ ಸಮಯ ಸಿಕ್ಕ ತಕ್ಷಣ ಅವರು ತೋಟದ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. 'ತೋಟದಲ್ಲಿ ಕೆಲಸ ಮಾಡುವಾಗ ಒಂದು ರೀತಿಯ ಖುಷಿಯಾಗುತ್ತದೆ. ಕಳೆದ ವರ್ಷ ನಾವೇ ಒಂದಷ್ಟು ತರಕಾರಿ ಬೆಳೆದಿದ್ದೆವು. ಈ ಬಾರಿಯೂ ಪ್ರಯತ್ನ ಮಾಡುತ್ತಿದ್ದೇವೆ. ಜನತಾ ಕರ್ಫ್ಯೂ ಆರಂಭದಲ್ಲಿ ಫಾರ್ಮ್‌ ಹೌಸ್‌ಗೆ ಹೋಗಿದ್ದೆ. ಈಗ ದಿನಸಿ ಕಿಟ್‌ ವಿತರಣೆ ಮಾಡುತ್ತಿರುವ ಕಾರಣ ಬೆಂಗಳೂರಿನಲ್ಲಿದ್ದೇವೆ. ಪ್ರಕೃತಿ ನಡುವೆ ಇರುವ ಖುಷಿಯೇ ಬೇರೆ' ಎನ್ನುತ್ತಾರೆ ಉಪೇಂದ್ರ.

ನೇರವಾಗಿ ರೈತರಿಂದಲೇ ಟೊಮೇಟೋ ಖರೀದಿಸಿ ಅಗತ್ಯ ಇದ್ದವರಿಗೆ ಹಂಚಿದ ನಟ ಉಪೇಂದ್ರ

​ಬಿಡದಿ ತೋಟದ ಮನೆಗೆ ನಿಖಿಲ್‌

ನಟ ನಿಖಿಲ್‌ ಕುಮಾರಸ್ವಾಮಿಗೆ ಕೊರೊನಾ ಸೋಂಕು ತಗುಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಚೇತರಿಸಿಕೊಂಡ ನಂತರ ಅವರು ಬಿಡದಿ ಬಳಿಯ ತಮ್ಮ ತೋಟದ ಮನೆಗೆ ಕುಟುಂಬ ಸಮೇತ ಹೋಗಿದ್ದಾರೆ. ಮೊನ್ನೆಯಷ್ಟೇ ತೋಟದ ಮನೆಗೆ ಗೀರ್‌ ತಳಿಯ ಹಸುಗಳನ್ನು ಸಹ ಬರಮಾಡಿಕೊಂಡಿದ್ದರು. ತಮ್ಮ ಬಿಡದಿ ತೋಟದಲ್ಲಿರುವ ಕೃಷಿ ಹೊಂಡದ ಮುಂದೆ ಕುಳಿತಿರುವ ಫೋಟೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿಅವರು ಪೋಸ್ಟ್‌ ಮಾಡಿದ್ದರು.

Nikhil Kumaraswamy: ತೋಟದಲ್ಲಿ ಹೊಸ ಮನೆ ಕಟ್ಟೋಕೆ ಭೂಮಿ ಪೂಜೆ ಮಾಡಿದ ನಿಖಿಲ್‌-ರೇವತಿ

​ಸ್ವಗ್ರಾಮದಲ್ಲಿ ಧನಂಜಯ

ಲಾಕ್‌ಡೌನ್‌ಗಿಂತಲೂ ಮುನ್ನ ಕನ್ನಡ, ತೆಲುಗು, ತಮಿಳು ಚಿತ್ರಗಳ ಶೂಟಿಂಗ್‌ಗಾಗಿ ಬೆಂಗಳೂರು, ಚೆನ್ನೈ, ಹೈದರಾಬಾದ್‌ ಎಂದು ಓಡಾಡುತ್ತಿದ್ದ ಡಾಲಿ ಧನಂಜಯ, ಜನತಾ ಕರ್ಫ್ಯೂ ಆರಂಭದಲ್ಲಿ ಬೆಂಗಳೂರಿನಲ್ಲಿಯೇ ಇದ್ದರು. ಇಲ್ಲಿ ಸಂಕಷ್ಟದಲ್ಲಿದ್ದ ಕೆಲವರಿಗೆ ಸಹಾಯ ಮಾಡಿದ್ದ ಧನಂಜಯ ಈಗ ಅರಸೀಕೆರೆ ಬಳಿಯ ತಮ್ಮ ಹುಟ್ಟೂರಾದ ಕಾಳೇನಹಳ್ಳಿಗೆ ಹೋಗಿದ್ದಾರೆ. ಅಲ್ಲಿಯೇ ತಮ್ಮ ತೋಟಕ್ಕೂ ಹೋಗಿ ಬರುತ್ತಿದ್ದಾರೆ. 'ಬಹಳ ವರ್ಷಗಳಿಂದ ಮನೆಯವರ ಜತೆ ಕಾಲ ಕಳೆದಿರಲಿಲ್ಲ. ಎಲ್ಲರೂ ಪ್ಯಾನಿಕ್‌ ಆಗಿರುವ ಸಮಯವಿದು. ಎಲ್ಲರೂ ಒಟ್ಟಿಗಿದ್ದರೆ ಮಾನಸಿಕವಾಗಿ ಧೈರ್ಯ ತುಂಬಬಹುದು. ಪ್ರತಿದಿನ ಇಲ್ಲಿಯೇ ಇರುವ ನಮ್ಮ ತೋಟಕ್ಕೆ ಹೋಗಿ ಬರುತ್ತೇನೆ. ಚಿತ್ರೀಕರಣ ಆರಂಭವಾಗುವವರೆಗೂ ಇಲ್ಲಿಯೇ ಇರುತ್ತೇನೆ. ಎಲ್ಲ ಸಮಯದಲ್ಲೂಕುಟುಂಬದ ಜತೆ ಇರಲಾಗದಿದ್ದರೂ, ಈ ರೀತಿಯ ಸಂಕಷ್ಟದ ಸಮಯದಲ್ಲಿ ನಮ್ಮ ನಮ್ಮ ಇರುವಿಕೆ ಕುಟುಂಬಕ್ಕೆ ದೊಡ್ಡ ಶಕ್ತಿ ನೀಡುತ್ತದೆ. ಹಾಗಾಗಿ ಅವರೊಂದಿಗೆ ಇದ್ದು, ಅವರ ಆರೈಕೆಯಲ್ಲಿ ತೊಡಗಿದ್ದೇನೆ. ಹಾಗೆ ತೋಟದ ಕೆಲಸ ಕಾರ್ಯಗಳಲ್ಲಿಯೂ ಬ್ಯುಸಿಯಾಗಿದ್ದೇನೆ' ಎನ್ನುತ್ತಾರೆ ಧನಂಜಯ.

ಹಳ್ಳಿಯ ಸರ್ಕಾರಿ ಶಾಲೆಗೆ ಪ್ರೊಜೆಕ್ಟರ್ ನೀಡಿ ಸಹಾಯ ಮಾಡಿದ 'ಡಾಲಿ' ಧನಂಜಯ!

​ತೋಟದ ಕೆಲಸಗಳಲ್ಲಿ ವರ್ಧನ್ ಮತ್ತು ಶ್ರೀ ಮಹದೇವ್ ಬ್ಯುಸಿ

ಇವರೆಲ್ಲರ ಜತೆ ಸ್ಯಾಂಡಲ್‌ವುಡ್‌ನ ಭರವಸೆಯ ನಟರಾದ ವರ್ಧನ್‌ ತಮ್ಮ ಹುಟ್ಟೂರಿಗೆ ತೆರಳಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಬ್ಬ ಭರವಸೆಯ ಕಲಾವಿದ ಶ್ರೀ ಮಹದೇವ್ ಕೂಡ ಮೈಸೂರಿನ ಬಳಿಯ ತೋಟವೊಂದರಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿಅಪ್ಲೋಡ್‌ ಮಾಡಿದ್ದಾರೆ.

ನಟ ಶಿವರಾಜ್‌ಕುಮಾರ್‌ ಕೂಡ ಸಮಯ ಸಿಕ್ಕ ಕೂಡಲೇ ಕನಕಪುರ ಬಳಿ ಇರುವ ತಮ್ಮ ಸ್ನೇಹಿತರ ಮನೆಗೆ ತೋಟಕ್ಕೆ ಹೋಗುತ್ತಾರೆ. ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅವರು ಬೆಂಗಳೂರಿನ ಹೊರ ವಲಯದಲ್ಲಿ ಒಂದೊಳ್ಳೆ ತೋಟವನ್ನು ಖರೀದಿಸಿದ್ದು, ಅಲ್ಲಿ ಒಂದು ಮನೆ ಕಟ್ಟುತ್ತಿದ್ದಾರಂತೆ. ತಮ್ಮ ಬೆಂಗಳೂರಿನ ಮನೆಯ ಬಳಿ ಇರುವ ಸುಮಾರು 500 ಜನ ಕಟ್ಟಡ ಕಾರ್ಮಿಕರಿಗೆ ಪ್ರತಿದಿನ ಊಟದ ವ್ಯವಸ್ಥೆ ಮಾಡಿದ್ದಾರೆ.

ಸಂಕಷ್ಟದಲ್ಲಿರುವ ರೈತರ ಬೆಳೆ ಖರೀದಿ ಮಾಡಲು ನಟ ಉಪೇಂದ್ರ ನಿರ್ಧಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌