ಆ್ಯಪ್ನಗರ

ಉಪ್ಪಿ ಮಗ ಆಯುಷ್‌ ನಟನೆಯ ಮೊದಲ ಸಿನಿಮಾವನ್ನು ಯಾರು ಡೈರೆಕ್ಟ್ ಮಾಡಬೇಕು?

ಉಪೇಂದ್ರ ನಟ/ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಪತ್ನಿ ಪ್ರಿಯಾಂಕಾ ಕೂಡ ನಟಿ. ಉಪ್ಪಿ ಮಗಳು ಬಾಲನಟಿಯಾಗಿ ಎಂಟ್ರಿ ನೀಡಿದ್ದಾರೆ. ಈಗ ಅವರ ಸಹೋದರನ ಪುತ್ರನೂ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹಾಗಾದರೆ, ಉಪ್ಪಿ ಮಗ ಆಯುಷ್‌ ಬಣ್ಣದ ಲೋಕಕ್ಕೆ ಬರುವುದು ಯಾವಾಗ?

Vijaya Karnataka Web 21 Aug 2020, 2:35 pm
'ರಿಯಲ್ ಸ್ಟಾರ್' ಉಪೇಂದ್ರ ಯಾವುದೇ ಸಿನಿಮಾರಂಗದ ಹಿನ್ನೆಲೆಯಲ್ಲಿ ಇಲ್ಲದೇ ಚಿತ್ರರಂಗಕ್ಕೆ ಬಂದು ಸ್ವಂತ ಹೆಸರು ಸಾಧಿಸಿದರು. ಮೊದಲು ನಿರ್ದೇಶಕರಾಗಿ, ಅದರಲ್ಲಿ ತುಂಬ ದೊಡ್ಡ ಸಕ್ಸಸ್ ಕಂಡರು. ಭಾರತದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡರು. ನಂತರ ನಟನೆಗಿಳಿದರು. ಅಲ್ಲಿಯೂ ಅವರಿಗೆ ಗೆಲುವು ಸಿಕ್ಕಿತ್ತು. ಸದ್ಯ ಅವರ ಕುಟುಂಬದ ಮತ್ತೋರ್ವ ಪ್ರತಿಭೆ ನಿರಂಜನ್‌ ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಎಂಟ್ರಿ ನೀಡುತ್ತಿದ್ದಾರೆ. ಅಲ್ಲದೆ, ಉಪ್ಪಿ ಮಗಳು ಐಶ್ವರ್ಯಾ ಕೂಡ ಈಗಾಗಲೇ 'ದೇವಕಿ' ಚಿತ್ರದ ನಟನೆ ಶುರು ಮಾಡಿಯಾಗಿದೆ. ಹಾಗಾದರೆ, ಉಪ್ಪಿ ಮಗ ಆಯುಷ್ ಬಣ್ಣದ ಲೋಕಕ್ಕೆ ಬರುವುದು ಯಾವಾಗ?
Vijaya Karnataka Web upendra son ayush speaks about his debut to kannada industry
ಉಪ್ಪಿ ಮಗ ಆಯುಷ್‌ ನಟನೆಯ ಮೊದಲ ಸಿನಿಮಾವನ್ನು ಯಾರು ಡೈರೆಕ್ಟ್ ಮಾಡಬೇಕು?


ಉಪ್ಪಿಯ ಅಣ್ಣನ ಮಗ ನಿರಂಜನ್ ಸುಧೀಂದ್ರ ಹೀರೋ ಆಗಿ 'ಸೂಪರ್ ಸ್ಟಾರ್‌' ಚಿತ್ರದ ಮೂಲಕ ಗ್ರ್ಯಾಂಡ್ ಆಗಿ ಎಂಟ್ರಿ ನೀಡೋಕೆ ಸಜ್ಜಾಗಿದ್ದಾರೆ. ಈಚೆಗೆ ಆ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಲಾಯಿತು. ಟೀಸರ್‌ಗೆ 'ರಾಕಿಂಗ್ ಸ್ಟಾರ್‌' ಯಶ್ ಹಿನ್ನೆಲೆ ಧ್ವನಿ ನೀಡಿದ್ದರೆ, 'ರೋರಿಂಗ್ ಸ್ಟಾರ್' ಶ್ರೀಮುರಳಿ ಅದರ ಲಾಂಚ್ ಮಾಡಿದರು. ಈ ಕಾರ್ಯಕ್ರಮಕ್ಕೆ ಉಪ್ಪಿ ಮಗ ಆಯುಷ್‌ ಕೂಡ ಬಂದಿದ್ದರು. ಕಾರ್ಯಕ್ರಮದ ಕೊನೆಗೆ ವೇದಿಕೆ ಏರಿದ ಆಯುಷ್, ಸಹೋದರ ನಿರಂಜನ್‌ಗೆ ವಿಶ್ ಮಾಡಿದ್ದಲ್ಲದೆ, 'ನಾನು ಚಿತ್ರರಂಗಕ್ಕೆ ಬರುವುದಾದರೆ, ಅಪ್ಪನೇ ನನ್ನ ಸಿನಿಮಾವನ್ನು ಡೈರೆಕ್ಟ್ ಮಾಡ್ತಾರೆ' ಎಂದು ಆಯುಷ್‌ ಹೇಳಿದ್ದಾರೆ.

ಉಪೇಂದ್ರ ಈಗಾಗಲೇ 'ತರಲೆ ನನ್ಮಗ', 'ಶ್‌', 'ಓಂ', 'ಎ', 'ಉಪೇಂದ್ರ', 'ಸೂಪರ್‌' ಸಿನಿಮಾಗಳಿಂದ ಖ್ಯಾತರಾಗಿದ್ದಾರೆ. ನಟನೆಯ ಮೇಲೆ ಹೆಚ್ಚಿನ ಗಮನ ನೀಡಿರುವ ಅವರು, ನಿರ್ದೇಶನದಿಂದ ಕೊಂಚ ಬ್ರೇಕ್‌ ಪಡೆದುಕೊಂಡಿದ್ದಾರೆ. ಆಯುಷ್‌ ಚಿತ್ರರಂಗಕ್ಕೆ ಬರಬೇಕೆಂದರೆ, ಇನ್ನೂ ಕೆಲ ವರ್ಷ ಸಮಯ ಬೇಕೇಬೇಕು. ಮಗನ ಕೋರಿಕೆಯಂತೆ ಉಪೇಂದ್ರ ಒಂದೊಳ್ಳೆಯ ಕಥೆ ಮೂಲಕ ಲಾಂಚ್ ಮಾಡಿದರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಆಯುಷ್ ಹೇಳಿರುವ ಮಾತು ಕೇಳಿ, ಉಪ್ಪಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿರುವುದಂತೂ ಸತ್ಯ.

ಉಪೇಂದ್ರ ಸಹೋದರನ ಮಗನ 'ಸೂಪರ್ ಸ್ಟಾರ್' ಪ್ರಾಜೆಕ್ಟ್‌ಗೆ ಸಾಥ್ ಕೊಟ್ಟ ನಟ ಯಶ್

ಇನ್ನು, ನಿರಂಜನ್ ಈ ಹಿಂದೆ ಪ್ರಿಯಾಂಕಾ ಉಪೇಂದ್ರ ನಟನೆಯ 'ಸೆಕೆಂಡ್ ಹಾಫ್‌' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಆನಂತರ ಇದೀಗ 'ಸೂಪರ್ ಸ್ಟಾರ್‌' ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ನೀಡಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿ, ಬಾಡಿ ಬಿಲ್ಡ್ ಮಾಡಿದ್ದಾರೆ. ಟೀಸರ್‌ನಲ್ಲೂ ಸಖತ್‌ ಆಗಿ ಮಿಂಚಿರುವ ಅವರು, ಮೊದಲ ಯತ್ನದಲ್ಲೇ ಗಮನಸೆಳೆದಿದ್ದಾರೆ.

ಪರಭಾಷೆಗಳ ಮೇಲೂ ಕಣ್ಣಿಟ್ಟರು ರವಿಚಂದ್ರನ್, ಶಶಿಕುಮಾರ್, ಉಪೇಂದ್ರ ಪುತ್ರರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌