ಆ್ಯಪ್ನಗರ

ಜನ್ಮದಿನಕ್ಕೆ 'ಗುಡ್‌ ನ್ಯೂಸ್‌' ಕೊಟ್ಟ ವಸಿಷ್ಠ ಸಿಂಹ! ರಿಲೀಸ್‌ಗೂ ಮೊದಲೇ ದಾಖಲೆ ಬರೆದ 'ಕಾಲಚಕ್ರ'

ತಮ್ಮ ಖಡಕ್‌ ಧ್ವನಿ, ನಟನೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮಸನೆಳೆದ ಪ್ರತಿಭೆ ವಸಿಷ್ಠ ಎನ್‌. ಸಿಂಹ. ಅಂದಹಾಗೆ, ನಾಳೆ (ಅ.19) ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ಸಿನಿಮಾ ಕಡೆಯಿಂದ ಗುಡ್ ನ್ಯೂಸ್ ಹೊರಬಿದ್ದಿದೆ.

Vijaya Karnataka Web 18 Oct 2020, 2:08 pm
ನಟ ವಸಿಷ್ಠ ಎನ್‌. ಸಿಂಹಗೆ ಸೋಮವಾರ (ಅ.19) ಜನ್ಮದಿನದ ಸಂಭ್ರಮ. ಈ ಬಾರಿ ಅವರ ಹುಟ್ಟುಹಬ್ಬದ ಸಂತೋಷವನ್ನು ಇನ್ನಷ್ಟು ಹೆಚ್ಚಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಅವರು ನಟಿಸಿರುವ 'ಕಾಲಚಕ್ರ' ಚಿತ್ರವು ರಿಲೀಸ್‌ಗೆ ರೆಡಿ ಆಗಿದೆ. ಆದರೆ ಅದಕ್ಕೂ ಮುನ್ನವೇ ಒಂದು ದಾಖಲೆಯನ್ನು ಮಾಡಿದೆ ಆ ಸಿನಿಮಾ. ಏನದು ದಾಖಲೆ? ರಿಮೇಕ್‌! ಹೌದು, ಬಿಡುಗಡೆಗೂ ಮೊದಲೇ ವಸಿಷ್ಠ ನಟನೆಯ 'ಕಾಲಚಕ್ರ' ಸಿನಿಮಾದ ರಿಮೇಕ್‌ ಹಕ್ಕುಗಳು ಮಾರಾಟವಾಗಿವೆ.
Vijaya Karnataka Web vasishta simha


ಮಲಯಾಳಂಗೆ ಕಾಲಚಕ್ರ ರಿಮೇಕ್‌

ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ 'ಕಾಲಚಕ್ರ' ಸಿನಿಮಾದ ಟೀಸರ್‌ ಕೆಲ ದಿನಗಳ ಹಿಂದಷ್ಟೇ ರಿಲೀಸ್‌ ಆಗಿ ಗಮಸನೆಳೆದಿತ್ತು. ಇದೀಗ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕರೊಬ್ಬರು 'ಕಾಲಚಕ್ರ' ಚಿತ್ರದ ಕಥೆಯನ್ನು ಇಷ್ಟಪಟ್ಟು ಮಾಲಿವುಡ್‌ನಲ್ಲಿ ಸಿನಿಮಾ ರಿಮೇಕ್‌ ಮಾಡಲು ಮುಂದಾಗಿದ್ದಾರೆ. ಮಲಯಾಳಂನಲ್ಲಿ ನಿರ್ಮಿಸುತ್ತಿರುವ ಸಂಸ್ಥೆ ಯಾವುದು? ಯಾವಾಗ ಪ್ರಾರಂಭವಾಗುತ್ತದೆ? ಕಲಾವಿದರು ಯಾರು ಅನ್ನೋ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆಯಂತೆ. ಈ ಸಿನಿಮಾದಲ್ಲಿ 4 ಶೇಡ್‌ನಲ್ಲಿ ವಸಿಷ್ಠ ಕಾಣಿಸಿಕೊಂಡಿದ್ದಾರೆ.

ಸುಮಂತ್ ಕ್ರಾಂತಿ ನಿರ್ಮಿಸಿ, ನಿರ್ದೇಶನ ಮಾಡಿರುವ ಈ ಸಿನಿಮಾಗೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಹಾಡುಗಳಿಗೆ 'ಭರ್ಜರಿ' ಚೇತನ್ ಕುಮಾರ್, ಕವಿರಾಜ್, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಂಚಿತ್ ಹೆಗಡೆ, ಕೈಲಾಷ್ ಖೇರ್, ಪಂಚಮ್ ಜೀವ ಹಾಡಿದ್ದಾರೆ. ಎಲ್.ಎಂ. ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಸಿಂಹ, ರಕ್ಷಾ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ಬಳಿಕ ಟಾಲಿವುಡ್‌ಗೆ ಕಾಲಿಟ್ಟ ಖ್ಯಾತ ನಟ ವಸಿಷ್ಠ ಸಿಂಹ!

ವಸಿಷ್ಠ ಹುಟ್ಟುಹಬ್ಬ ಆಚರಣೆ ಇಲ್ಲ
'ಸೋಮವಾರ (ಅ.19) ನನ್ನ ಹುಟ್ಟುಹಬ್ಬ ಇದೆ. ಪ್ರತಿ ವರ್ಷ ನನ್ನ ಮನೆ ಬಳಿ ಈ ಸಮಯಕ್ಕೆ ದೊಡ್ಡ ಆಚರಣೆ ನಡೆಯುತ್ತಿತ್ತು. ಆದರೆ, ಈ ಬಾರಿ ಕೊರೊನಾದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಹುಟ್ಟುಹಬ್ಬ ಆಚರಣೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ನೀವೆಲ್ಲಿ ಇರುತ್ತಿರೋ, ಅಲ್ಲಿಂದಲೇ ತಮ್ಮ ಆಶೀರ್ವಾದ, ಪ್ರೀತಿ. ಹಾರೈಕೆಯನ್ನು ಕೊಡಿ. ನಾವೆಲ್ಲರೂ ಒಗ್ಗಟ್ಟಾಗಿ ಈ ಕೊರೊನಾ ವೈರಸ್ ವಿರುದ್ಧ ಹೋರಾಡೋಣ. ಆದಷ್ಟು ಬೇಗ ನಮ್ಮ ಜನಜೀವನ ಮೊದಲಿನ ಸ್ಥಿತಿಗೆ ಬರಲಿ' ಎಂದು ವಸಿಷ್ಠ ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌