ರಿಯಲ್ ಲೈಫ್ ಅಲ್ಲಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿ ಹೀರೋ ಆದವರು ಇವರು, ಹೇಗೆ?
ತಂದೆ ರೌಡಿ, ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗುತ್ತಾನೆ, ಅವನ ಮಗನ ಬದುಕು ಭವಣೆ ಸಾಗುವ ರೀತಿ, ಅವನ ಭವಿಷ್ಯದ ಬಗ್ಗೆ ಯೋಚಿಸುವ, ಜೀವ ನೀಡುವ ಹೃದಯವಂತ ಪೊಲೀಸ್ ಅಧಿಕಾರಿ ಒಂದೆಡೆ. ಆದರೆ ಆ ಹುಡುಗನ ಬಾಳಿನ ದಾರಿ ಎಂಬುದೇ 'ಭಾರ್ಗವ' ಚಿತ್ರದ ಸಾರಾಂಶ. ಇತ್ತೀಚೆಗಷ್ಟೇ 'ಭಾರ್ಗವ' ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಗಿತ್ತು.
ಜಾಹೀರಾತಿಗಾಗಿ ಬೆಂಗಳೂರಿಗೆ ಬಂದ ದೀಪಿಕಾ ಹೀರೋಯಿನ್ ಆದ್ರು
ದೀಪಿಕಾ ರಾಯ್ "ವೆಸ್ಟ್ ಬೆಂಗಾಲಿಯವಳು ನಾನು. ಜಾಹೀರಾತಿಗಾಗಿ ಇಲ್ಲಿಗೆ ಬಂದಿದ್ದೆ. ಸಿನಿಮಾ ಅವಕಾಶ ಸಿಕ್ತು. ನಿರ್ದೇಶಕರ ಚಿತ್ರಕಥೆ ತುಂಬ ಇಷ್ಟ ಆಯ್ತು. ಹೀರೋ ನಮಗೆ ಫ್ಯಾಮಿಲಿ ಫ್ರೆಂಡ್. ಹೀಗಾಗಿ ಸಿನಿಮಾ ಮಾಡೋದು ಸ್ವಲ್ಪ ಸಹಾಯವಾಯಿತು. ಇದೇ ನನ್ನ ಮೊದಲ ಸಿನಿಮಾ. ಕನ್ನಡ ಕೂಡ ಕಲಿತಿದ್ದೇನೆ. ಎಂಬಿಎ ವಿದ್ಯಾರ್ಥಿ ಪಾತ್ರ. ಸಂಪ್ರದಾಯಸ್ಥ ಹುಡುಗಿಯಾಗಿರುತ್ತಾಳೆ ಅವಳು ಎಂದಿದ್ದಾರೆ.
ಹೀರೋ ವೆಂಕಟ್ ಹೇಳಿದ್ದೇನು?
ವೆಂಕಟ್ "ಆಂಧ್ರದಿಂದ ಬಂದು ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿ, ನಂತರ ಹೀರೋ ಆದೆ. ಕರ್ಥ ಎಂಬ ಇನ್ನೊಂದು ಸಿನಿಮಾ ಮಾಡಿದ್ದೇನೆ. ಏನೋ ಒಂದು ಬಿಜಿನೆಸ್ ಮಾಡಬೇಕು ಎಂಬ ಉದ್ದೇಶ ನಿರ್ಮಾಪಕರದ್ದಗಿತ್ತು. ಅದರ ಬದಲು ಸಿನೆಮಾ ಮಾಡಿ ಅಂತ ನಾನು ಮನವೊಲಿಸಿದೆ. ಖಂಡಿತಾ ನಷ್ಟ ಆಗಲ್ಲ" ಎಂದಿದ್ದಾರೆ.
'ಭಾರ್ಗವ' ಚಿತ್ರದಲ್ಲಿ ಏನಿದೆ?
"ರೌಡಿಯ ಮಗ, ತನ್ನ ಅಪ್ಪ ತೀರಿಹೋದ ನಂತರ ಪೊಲೀಸ್ ಅಧಿಕಾರಿ ಜತೆ ಬೆಳೆದು, ಸುಶಿಕ್ಷಿತನಾಗಿ ಮುಂಬೈನಲ್ಲಿ ದೊಡ್ಡ ಕಂಪನಿಗೆ ಎಂ.ಡಿ.ಆಗುತ್ತಾನೆ. ಮತ್ತೆ ಒಂದು ಸಮಸ್ಯೆ ಎದುರಾಗಿ ಅವನು ಬೆಂಗಳೂರಿಗೆ ಬರುತ್ತಾನೆ. ಮುಂದೇನಾಗುತ್ತದೆ" ಎಂಬುದು 'ಭಾರ್ಗವ' ಸಿನಿಮಾದ ಕಥೆ. ಹರೀಶ್ ಮತ್ತು ಸುನೀಲ್ ಈ ಚಿತ್ರದ ತೆಲುಗು ಮೂಲ ನಿರ್ಮಾಪಕರು. ವಿಕ್ರಮ್ ಯಶೋಧರ ಈ ಚಿತ್ರದ ನಿರ್ದೇಶಕ. ಶ್ಯಾಮ್ ಸಿಂದನೂರು ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆ ಕಾಣಲಿದೆ.