ಆ್ಯಪ್ನಗರ

ಮನೆ ಎದುರು ಹಾಳಾಗಿದ್ದ ರಸ್ತೆಯನ್ನು ರಿಪೇರಿ ಮಾಡಿದ 'ನಾದ ಬ್ರಹ್ಮ' ಹಂಸಲೇಖ!

'ನಾದ ಬ್ರಹ್ಮ' ಹಂಸಲೇಖ ಅವರ ಹಾಡುಗಳು ಎಲ್ಲ ಕಾಲಕ್ಕೂ ಸಲ್ಲುವಂತಹವು. ಸಂಗೀತದ ಮೂಲಕ ಕನ್ನಡಿಗರ ಮನಸೂರೆಗೊಂಡಿದ್ದ ಅವರೀಗ ಸಾಮಾಜಿಕ ಕೆಲಸದ ಮೂಲಕ ಮೆಚ್ಚುಗೆಗಳಿಸಿದ್ದಾರೆ. ಮನೆ ಎದುರಿನ ರಸ್ತೆಯನ್ನು ತಾವೇ ರಿಪೇರಿ ಮಾಡಿದ್ದಾರೆ.

ವಿಕ ವೆಬ್ ಡೆಸ್ಕ್ | Vijaya Karnataka Web 22 Apr 2020, 12:21 pm
ಕೊರೊನಾ ವೈರಸ್‌ ಮಹಾಮಾರಿಯಿಂದಾಗಿ ಲಾಕ್‌ಡೌನ್ ಜಾರಿಯಾಗಿದೆ. ಎಲ್ಲರು ಮನೆಯೊಳಗೆ ಬಂಧಿಯಾಗಿದ್ದಾರೆ. ಸಿನಿಮಾ ತಾರೆಗಳು ಸಾಮಾಜಿಕ ಕೆಲಸಗಳಲ್ಲಿ ಬ್ಯುಝಿ ಆಗಿದ್ದಾರೆ. ಅದರ ಜೊತೆಗೆ ಮನೆ ಕೆಲಸಗಳನ್ನು ಮಾಡುತ್ತ ಸಮಯ ಕಳೆಯುತ್ತಿದ್ದಾರೆ. ಆದರೆ, ಸಂಗೀತ ಮಾಂತ್ರಿಕ ಹಂಸಲೇಖ ಮನೆ ಹೊರಗಡೆಯೂ ಕೆಲಸ ಮಾಡಿ ಸುದ್ದಿಯಾಗಿದ್ದಾರೆ!
Vijaya Karnataka Web ಹಾರೆ, ಸಲಿಕೆ ಹಿಡಿದು ಹಾಳಾಗಿದ್ದ ರಸ್ತೆಯನ್ನು ರಿಪೇರಿ ಮಾಡಿದ ನಾದ ಬ್ರಹ್ಮ ಹಂಸಲೇಖ!


ಹೌದು, ಹಂಸಲೇಖ ಅವರ ಮನೆ ಎದುರಿನ ರಸ್ತೆ ಹಾಳಾಗಿತ್ತು. ಅದನ್ನು ರಿಪೇರಿ ಮಾಡಲು ಜಲ್ಲಿ ಕಲ್ಲುಗಳನ್ನು ತಂದು ಸುರಿಯಲಾಗಿತ್ತಾದರೂ, ಯಾರೊಬ್ಬರು ಬಂದು ಅದನ್ನು ಸರಿ ಮಾಡಿರಲಿಲ್ಲ. ಕೊನೆಗೆ ಸ್ವತಃ ಹಂಸಲೇಖ ಅವರೇ ಜಲ್ಲಿ, ಸಿಮೆಂಟ್ ಕಲಸಿ, ಆ ರಸ್ತೆ ರಿಪೇರಿಯನ್ನು ಮಾಡಿದ್ದಾರೆ. ಅವರು ರಸ್ತೆ ರಿಪೇರಿ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಂಸಲೇಖ ಅವರು ಮಾಡಿದ ಈ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಹಂಸಲೇಖ ಮತ್ತು ಅವರ ಮನೆಯವರು ಸೇರಿಕೊಂಡು ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು 'ಬೈ ಬೈ ಕೊರೋನಾ..' ಎಂಬ ಹಾಡನ್ನು ರಚಿಸಿದ್ದರು. ಆ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌