ಆ್ಯಪ್ನಗರ

ಹೊಸ ಚಿತ್ರದ ಬಗ್ಗೆ 'ಬ್ರೇಕಿಂಗ್ ನ್ಯೂಸ್' ನೀಡಿದ ವಿಜಯ್! ಕನ್ನಡದಲ್ಲೂ ಬರುತ್ತಾ ಈ ಸಿನಿಮಾ?

ನಟ ವಿಜಯ್ ದೇವರಕೊಂಡ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕೊರೊನಾದಿಂದ ಅವರ 'ಫೈಟರ್‌' ಸಿನಿಮಾದ ಶೂಟಿಂಗ್‌ ನಿಂತಿದ್ದು, ಈ ಮಧ್ಯೆ ಹೊಸ ಘೋಷಣೆ ಮಾಡಿ, ಅಚ್ಚರಿ ಮೂಡಿಸಿದ್ದಾರೆ. ಇದರ ನಿರ್ದೇಶಕರು ಯಾರು?

Vijaya Karnataka Web 28 Sep 2020, 8:02 pm
ಟಾಲಿವುಡ್‌ ಮಾತ್ರವಲ್ಲದೇ ಸೌತ್‌ ಇಂಡಿಯಾದಲ್ಲೇ ಸೆನ್ಸೇಷನ್‌ ಸೃಷ್ಟಿಸಿರುವ ನಟ ವಿಜಯ್ ದೇವರಕೊಂಡ. ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವುದರ ಜೊತೆಗೆ ಪ್ಲಾಫ್‌ ಸಿನಿಮಾಗಳನ್ನೂ ಅವರು ಮಾಡಿದ್ದಾರೆ. ಆದರೂ ಅವರ ಬೇಡಿಕೆಗೆ ಮಾತ್ರ ಅದರಿಂದ ಧಕ್ಕೆ ಆಗಿಲ್ಲ. ಸದ್ಯ ಪ್ಯಾನ್ ಇಂಡಿಯಾ ರೇಂಜ್‌ನ ಸಿನಿಮಾಗಳನ್ನು ಮಾಡುತ್ತಿರುವ ವಿಜಯ್, ಈಗ ಹೊಸದೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿಶೇಷವೆಂದರೆ, ಇದರ ನಿರ್ದೇಶಕ ಸುಕುಮಾರ್‌!
Vijaya Karnataka Web vijay deverakonda


'ಆರ್ಯ', 'ನಾನ್ನಕು ಪ್ರೇಮತೋ', 'ರಂಗಸ್ಥಲಂ'ನಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸುಕುಮಾರ್ ಜೊತೆ ವಿಜಯ್ ದೇವರಕೊಂಡ ಸಿನಿಮಾ ಮಾಡೋದು ಖಚಿತವಾಗಿದೆ. ಸ್ವತಃ ಇದನ್ನು ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ನನ್ನೊಳಗಿನ ನಟ ಸೂಪರ್ ಎಕ್ಸೈಟ್ ಆಗಿದ್ದಾನೆ. ನನ್ನೊಳಗಿರುವ ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾರೆ. ಇದೊಂದು ಸ್ಮರಣೀಯವಾದ ಸಿನಿಮಾವಾಗಲಿದೆ. ಸುಕುಮಾರ್ ಅವರೊಂದಿಗೆ ಸೆಟ್ ಸೇರಿಕೊಳ್ಳಲು ಕಾತುರನಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ ವಿಜಯ್. ಇದನ್ನು ನಿರ್ಮಾಣ ಮಾಡುತ್ತಿರುವವರು ಕೇದರ್ ಸೆಲಗಮ್‌ಸೆಟ್ಟಿ. ಇದು ಅವರ ನಿರ್ಮಾಣದ ಮೊದಲ ಸಿನಿಮಾವಾಗಿದೆ.

ಸದ್ಯ ಸುಕುಮಾರ್ ಗಮನವೆಲ್ಲ 'ಪುಷ್ಪ' ಸಿನಿಮಾದ ಮೇಲಿದೆ. ಇದು ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಸಿನಿಮಾವಾಗಿದ್ದು, ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಕೊರೊನಾದಿಂದಾಗಿ ಇನ್ನೂ ಶೂಟಿಂಗ್‌ ಶುರುವಾಗಿಲ್ಲ. ಒಂದುವೇಳೆ, ಈ ಸಿನಿಮಾದ ಶೂಟಿಂಗ್ ಶುರುವಾಗಿ, ಚಿತ್ರೀಕರಣ ಮುಗಿಸಿ, ರಿಲೀಸ್ ಆಗುವ ವೇಳೆಗೆ ಇನ್ನೂ ಒಂದು ವರ್ಷವಾದರೂ ಬೇಕು. ಹಾಗಾಗಿ, ವಿಜಯ್-ಸುಕುಮಾರ್ ಕಾಂಬಿನೇಷನ್‌ನ ಸಿನಿಮಾವು 2022ರಲ್ಲಿ ಸೆಟ್ಟೇರಲಿದೆ.

Balakot Airstrike: ಅಭಿನಂದನ್‌ ಪಾತ್ರದಲ್ಲಿ ಮಿಂಚಲಿದ್ದಾರೆ ನಟ ವಿಜಯ್ ದೇವರಕೊಂಡ!

ವಿಜಯ್ ನಟನೆಯ 'ಡಿಯರ್ ಕಾಮ್ರೇಡ್' ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿದ್ಧಗೊಂಡಿತ್ತು. ನಿರ್ದೇಶಕ ಪುರಿ ಜಗನ್ನಾಥ್‌ ಜೊತೆಗೆ ವಿಜಯ್ ಮಾಡುತ್ತಿರುವ 'ಫೈಟರ್' ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಆದ್ದರಿಂದ ಈಗ ಘೋಷಣೆ ಆಗಿರುವ ವಿಜಯ್-ಸುಕುಮಾರ್ ಕಾಂಬಿನೇಷನ್‌ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ವಿಜಯ್ ನಟನೆಯ ಈ ಚಿತ್ರ ಸಹ ಕನ್ನಡದಲ್ಲಿ ಮೂಡಿಬರುವ ಸಾಧ್ಯತೆಗಳಿವೆ.

ಪ್ರೊಡಕ್ಷನ್ ಕಂಪನಿಗಳ ಮೇಲೆ ಗರಂ ಆದ ವಿಜಯ್ ದೇವರಕೊಂಡ; ವಾರ್ನಿಂಗ್ ನೀಡಿದ ನಟ!


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌