ಆ್ಯಪ್ನಗರ

50ನೇ ಸಿನಿಮಾದಲ್ಲಿ ಖಾಕಿ ತೊಟ್ಟ ವಿಜಯ್ ರಾಘವೇಂದ್ರ! ಖಡಕ್ ಲುಕ್‌ನಲ್ಲಿ 'ಚಿನ್ನಾರಿಮುತ್ತ'

'ಚಿನ್ನಾರಿಮುತ್ತ' ವಿಜಯ್ ರಾಘವೇಂದ್ರ ಸ್ಯಾಂಡಲ್‌ವುಡ್‌ನಲ್ಲಿ 50ನೇ ಸಿನಿಮಾದ ಗಡಿ ತಲುಪಿದ್ದಾರೆ. ಈ ಬಾರಿ ವಿಶೇಷವಾದ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಅವರು, ವಿಭಿನ್ನ ಸಿನಿಮಾ ನೀಡುವ ಸೂಚನೆ ನೀಡಿದ್ದಾರೆ.

Vijaya Karnataka Web 26 Oct 2020, 8:27 pm
ಸ್ಯಾಂಡಲ್‌ವುಡ್‌ 'ಚಿನ್ನಾರಿಮುತ್ತ' ವಿಜಯ್ ರಾಘವೇಂದ್ರ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ನೋಡುನೋಡುತ್ತಲೇ ಅವರೀಗ 50ನೇ ಸಿನಿಮಾದ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ. ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ ಅವರ 50ನೇ ಸಿನಿಮಾದ ಟೈಟಲ್ ಮತ್ತು ಫಸ್ಟ್‌ ಲುಕ್ ರಿವೀಲ್ ಆಗಿದೆ. ಅಷ್ಟಕ್ಕೂ ಚಿತ್ರದ ಶೀರ್ಷಿಕೆ ಏನು? 'ಸೀತಾರಾಮ್ ಬಿನೋಯ್'. ಇದರಲ್ಲಿ ಖಡಕ್ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 'ಕೇಸ್‌ ನಂ.18' ಅನ್ನೋದು ಚಿತ್ರದ ಅಡಿ ಬರಹ.
Vijaya Karnataka Web vijay raghavendra


ಈ ಹಿಂದೆ ತೆರೆಕಂಡಿದ್ದ 'ಹ್ಯಾಪಿ ನ್ಯೂ ಇಯರ್' ಸಿನಿಮಾದಲ್ಲಿ ಪೊಲೀಸ್ ಜೀಪ್‌ ಡ್ರೈವರ್ ಆಗಿ ಕಾಣಿಸಿಕೊಂಡಿದ್ದ ವಿಜಯ್, ಈಗ ಖಡಕ್ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ಪಾತ್ರಕ್ಕಾಗಿ ಅವರು ಸಾಕಷ್ಟು ಬದಲಾಗಿದ್ದಾರೆ. ಪೋಸ್ಟರ್ ನೋಡುತ್ತಿದ್ದರೆ, ಇದೊಂದು ಕ್ರೈಂ ಥ್ರಿಲ್ಲರ್ ಕಥೆ ಅನಿಸುತ್ತಿದೆ. ಈ ಸಿನಿಮಾಗೆ ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ. ಸಂಗೀತ ನಿರ್ದೇಶನವನ್ನು ಗಗನ್ ಬಡೇರಿಯ ಮಾಡುತ್ತಿದ್ದರೆ, ಛಾಯಾಗ್ರಹಣವನ್ನು ಹೇಮಂತ್ ನಿಭಾಯಿಸಲಿದ್ದಾರೆ. ಸಂಭಾಷಣೆ ಮತ್ತು ಸಂಕಲನ ಹೊಣೆ ಶಶಾಂಕ್ ನಾರಾಯಣ ಅವರದ್ದು. ವಿಜಯ್ ಹೊರತುಪಡಿಸಿ, ಮಿಕ್ಕಂತೆ ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ ಅನ್ನೋದು ಇನ್ನೂ ಬಹಿರಂಗ ಆಗಿಲ್ಲ.

ಶುಭಾಶಯ ತಿಳಿಸಿದ ಶಿವಣ್ಣ, ಶ್ರೀಮುರಳಿ
'ಸೀತಾರಾಮ್ ಬಿನೋಯ್' ಚಿತ್ರದ ಫಸ್ಟ್‌ಲುಕ್ ಶೇರ್ ಮಾಡಿರುವ ನಟ ಡಾ. ಶಿವರಾಜ್‌ಕುಮಾರ್, 'ಶುಭವಾಗಲಿ ರಾಘು.. 50ರ ಕ್ಲಬ್‌ಗೆ ನಿನಗೆ ಸ್ವಾಗತ' ಎಂದು ಹಾರೈಸಿದ್ದಾರೆ. ಇನ್ನು, ವಿಜಯ್ ರಾಘವೇಂದ್ರ ಸಹೋದರ, ನಟ ಶ್ರೀಮುರಳಿ ಕೂಡ , 'ಆಲ್‌ ದ ಬೆಸ್ಟ್.. ವಾವ್‌ ಅಣ್ಣ ಇದು ನಿನ್ನ 50ನೇ ಸಿನಿಮಾ! ನಿನ್ನ ಲುಕ್ ಅದ್ಭುತವಾಗಿದೆ, ಸಖತ್ ಆಗಿದೆ. 'ಸೀತಾರಾಮ್ ಬಿನೋಯ್' ತಂಡಕ್ಕೆ ಒಳ್ಳೆಯದಾಗಲಿ..' ಎಂದಿದ್ದಾರೆ.

'ಸೀತಾರಾಮ್ ಬಿನೋಯ್' 50ನೇ ಸಿನಿಮಾ

ವಿಜಯ್ ರಾಘವೇಂದ್ರ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಬಾಲ ನಟನಾಗಿ. ಡಾ. ರಾಜ್‌ಕುಮಾರ್ ಅವರು ನಟಿಸಿದ್ದ 'ಚಲಿಸುವ ಮೋಡಗಳು' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಆನಂತರ 'ಅರಳಿದ ಹೂವುಗಳು', 'ಜಗ ಮೆಚ್ಚಿದ ಹುಡುಗ', 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು' ಮುಂತಾದ ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ಕಾಣಿಸಿಕೊಂಡಿದ್ದರು. 'ಕೊಟ್ರೇಶಿ ಕನಸು' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. 2002ರಲ್ಲಿ 'ನಿನಗಾಗಿ' ಮೂಲಕ ವಿಜಯ್ ರಾಘವೇಂದ್ರ, ಹೀರೋ ಆಗಿ ಭರ್ಜರಿ ಎಂಟ್ರಿ ನೀಡಿದರು. ಇದೀಗ ಅವರು 50ನೇ ಸಿನಿಮಾದ ಗಡಿ ತಲುಪಿದ್ದಾರೆ.

ಶಿವಮೊಗ್ಗದಲ್ಲಿ ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡಿಸೇಲ್ ಹಾಕಿದ ಬಂಕ್ ಸಿಬ್ಬಂದಿ! ಮುಂದೇನಾಯ್ತು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌