ಆ್ಯಪ್ನಗರ

ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾದ ಸ್ಪೆಷಲ್ ಏನು ಗೊತ್ತಾ? ಯಾರ ಜೊತೆ?

ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾ ಬಗ್ಗೆ ಹಲವರಿಗೆ ಕುತೂಹಲವಿದೆ. ಅವರ ಸಿನಿಮಾ ಹೇಗಿದೆ ಎಂಬುದನ್ನು 'ರಂಗನಾಯಕಿ' ಸಿನಿಮಾದ ಪ್ರೀಮಿಯರ್ ಶೋಗೆ ಆಗಮಿಸಿದ್ದ ವೇಳೆ ನಿಖಿಲ್ ಕುಮಾರಸ್ವಾಮಿ ಹಂಚಿಕೊಂಡಿದ್ದಾರೆ.

Vijaya Karnataka Web 31 Oct 2019, 10:39 am
ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಸಿನಿಮಾ ನವೆಂಬರ್ 1ಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ, ತ್ರಿವಿಕ್ರಮ್, ಶ್ರೀನಿವಾಸ್, ಸುಂದರ್ ರಾಜ್ ಮುಂತಾದವರು ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿತ್ತು. ಶೋಗೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ 'ರಂಗನಾಯಕಿ' ಸಿನಿಮಾ ಮತ್ತು ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
Vijaya Karnataka Web nikhil kumaraswamy


"ಜನರು ತುಂಬ ಪ್ರಬುದ್ಧರಾಗಿದ್ದಾರೆ, ಬುದ್ಧಿವಂತರಿದ್ದಾರೆ. ಕಂಟೆಂಟ್ ಸಿನಿಮಾಗಳನ್ನು ಜನರು ಇಷ್ಟಪಡುತ್ತಾರೆ. 'ರಂಗನಾಯಕಿ' ಸಿನಿಮಾ ಒಂದು ಸೆನ್ಸೇಬಲ್, ಸೆನ್ಸಿಟಿವ್ ಸಿನಿಮಾ. ಹೆಣ್ಣುಮಕ್ಕಳು ಸಮಾಜದಲ್ಲಿ ಏನೇ ಕಷ್ಟ ಆದರೂ, ಏನೇ ಅನ್ಯಾಯ ಆದರೂ ಕೂಡ ಹೇಗೆ ಎದುರಿಸುತ್ತಾರೆ ಎಂಬುದನ್ನು ಚೆನ್ನಾಗಿ ತೋರಿಸಿದ್ದಾರೆ ಈ ಚಿತ್ರದಲ್ಲಿ. ಎಲ್ಲರೂ 'ರಂಗನಾಯಕಿ' ಸಿನಿಮಾ ನೋಡಿ" ಎಂದಿದ್ದಾರೆ.

ತನ್ನ ಮುಂದಿನ ಸಿನಿಮಾ ಕುರಿತ ಕುತೂಹಲಕ್ಕೆ ತೆರೆ ಎಳೆದ ನಿಖಿಲ್‌ ಕುಮಾರಸ್ವಾಮಿ

" 'ಪೈಲ್ವಾನ್' ಸಿನಿಮಾ ನಿರ್ದೇಶಕ ಕೃಷ್ಣ ಜೊತೆ ನಾನು ಎರಡನೇ ಸಿನಿಮಾ ಮಾಡಬೇಕಿತ್ತು. ಈ ಬಗ್ಗೆ ತುಂಬ ಸಲ ಮಾತುಕತೆ ಆಗಿತ್ತು. ಆಗ ಅವರು 'ಹೆಬ್ಬುಲಿ'ಯಲ್ಲಿ ಬಿಜಿಯಿದ್ರು. ಆಗ ಹರ್ಷ ಅವರ ಜೊತೆ ಸಿನಿಮಾ ಮಾಡಿದೆ. ಇತ್ತೀಚೆಗೆ ತೆರೆ ಕಂಡ 'ಪೈಲ್ವಾನ್' ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕಮರ್ಷಿಯಲ್ ಸಿನಿಮಾಗಳನ್ನು ಬ್ರೇಕ್ ಮಾಡಿ ಸಿನಿಮಾ ಮಾಡಬೇಕು ಎನ್ನುವ ಯೋಚನೆಯಿದೆ. ಆದರೆ ಕಮರ್ಷಿಯಲ್ ಅಂಶ ಕೂಡ ಇಲ್ಲಿರುತ್ತದೆ. ಏಕೆಂದರೆ ಮಾಸ್‌ಗೆ ಕಮರ್ಷಿಯಲ್ ಬೇಕೇ ಬೇಕು. ಕಮರ್ಷಿಯಲ್ ಅಂಶ ಇಟ್ಟುಕೊಂಡು ಯಾವ ರೀತಿಯಲ್ಲಿ ವಿಭಿನ್ನವಾಗಿ ಸಿನಿಮಾ ಮಾಡಬಹುದು ಎಂಬ ಯೋಚನೆಯಲ್ಲಿದ್ದೇವೆ. ಚುನಾವಣೆ ಮುಗಿಸಿ 5 ತಿಂಗಳು ಆಗಿದೆ ಅಷ್ಟೇ. ಜನವರಿಯಿಂದ ಸಿನಿಮಾ ಶುರು ಆಗಲಿದೆ. ಈಗಾಗಲೇ ಸಣ್ಣ ಆಗಿದ್ದೇನೆ, ಸಿನಿಮಾಕ್ಕಾಗೋಸ್ಕರ ಇನ್ನೂ ಸಣ್ಣ ಆಗಬೇಕಿದೆ" ಎಂದಿದ್ದಾರೆ.

ಖ್ಯಾತ ನಟಿಯ ಮಗಳ ಜತೆ ನಿಖಿಲ್‌ ಕುಮಾರಸ್ವಾಮಿ ಕ್ಯೂಟ್‌ ಫೋಟೋ! ಆಂಧ್ರದಲ್ಲಿ ಏನು ಮಾಡ್ತಿದ್ದಾರೆ 'ಜಾಗ್ವಾರ್‌' ಹುಡುಗ!

ಕೆಲ ದಿನಗಳ ಹಿಂದೆ ಮಾತನಾಡಿದ್ದ ನಿಖಿಲ್ "ನನ್ನ ಕಳೆದೆರಡು ಚಿತ್ರಗಳಿಗಿಂತ ಈ ಬಾರಿ ಕೊಂಚ ವಿಭಿನ್ನ ಕಾನ್ಸೆಪ್ಟ್‌ ಕೈಗೆತ್ತಿಕೊಂಡಿದ್ದೇವೆ. ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಬರೆಯಲಾಗಿದೆ. ನನ್ನ ಎರಡು ಸಿನಿಮಾಗಳು ಸಹ ಬೇರೆ ಬೇರೆ ರೀತಿಯಲ್ಲೇ ಇದ್ದವು. ಹೀಗಾಗಿ ಇಬ್ಬರೂ ಸೇರಿದಾಗ ಹೊಸ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸಿ ಅದೇ ತಯಾರಿಯಲ್ಲಿದ್ದೇವೆ. ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತೇನೆ' ಎಂದಿದ್ದರು.
ಮತ್ತೆ ಚಿತ್ರರಂಗಕ್ಕೆ ಮರಳಿದ ನಿಖಿಲ್ ಕುಮಾರಸ್ವಾಮಿ! ನಿರ್ದೇಶಕರು ಯಾರು ಗೊತ್ತಾ?

ಈ ಬಾರಿಯ ಇಂಡಿಯನ್‌ ಪನೋರಮಾಗೆ ಆಯ್ಕೆಯಾದ ಏಕೈಕ ಕನ್ನಡ ಸಿನಿಮಾ ಎಂಬ ಖ್ಯಾತಿಗೂ 'ರಂಗನಾಯಕಿ' ಸಿನಿಮಾ ಸೇರ್ಪಡೆಯಾಗಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌