ಆ್ಯಪ್ನಗರ

ಆ ನಟಿ ಆಧುನಿಕ ಮದರ್ ತೆರೇಸಾ ಅಲ್ಲ ಅಂತ ಜಗ್ಗೇಶ್ ಅಂದದ್ದು ಯಾರಿಗೆ?

ನವರಸ ನಾಯಕ ಜಗ್ಗೇಶ್ ನಟಿಯೊಬ್ಬರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆ ನಟಿ ಮದರ್ ತೆರೇಸಾ ಅಲ್ಲ, ಅಬ್ಬಕ್ಕನ್ನ, ಸಾಲುಮರದ ತಿಮ್ಮಕ್ಕನಲ್ಲ... ಇತ್ಯಾದಿ ಹೇಳಿ ತಮ್ಮ ಮನಸಿನ ಮಾತನ್ನು ಹೇಳಿದ್ದಾರೆ. ಹಾಗಿದ್ದರೆ ಯಾರು ಆ ನಟಿ?

Vijaya Karnataka Web 11 Nov 2019, 12:40 pm
ನವರಸ ನಾಯಕ ಜಗ್ಗೇಶ್ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅನುಭವ, ಗುರು ರಾಯರ ಬಗೆಗಿನ ಭಕ್ತಿ ಭಾವವನ್ನು ಸಮಯ ಸಿಕ್ಕಿದಾಗಲೆಲ್ಲಾ ಹೇಳಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ ತಮಗೆ ಇಷ್ಟವಾದ, ಆಗದ ಅದೆಷ್ಟೋ ಸಂಗತಿಗಳನ್ನೂ ಸಹೃದಯರೊಂದಿಗೆ ಜತೆಗೆ ಹಂಚಿಕೊಳ್ಳುತ್ತಿರುತ್ತಾರೆ. ಇದ್ದದ್ದನ್ನು ಇದ್ದ ಹಾಗೆ ಹೇಳುವ ಜಾಯಮಾನ ಜಗ್ಗೇಶ್ ಅವರದು.
Vijaya Karnataka Web ಜಗ್ಗೇಶ್


ಇದೀಗ ನಟಿಯೊಬ್ಬರ ಬಗ್ಗೆಯೂ ಅಸಹನೆ, ಅಸಮಾಧಾನ, ಬೇಸರದ ಮಾತುಗಳನ್ನು ಆಡಿದ್ದಾರೆ. ಆ ಕಾರ್ಯಕ್ರಮಕ್ಕೆ ನಾನು ಹೋಗಬಾರದಿದ್ದು, ಆದರೆ ಸಂದಿಗ್ಧ ಪರಿಸ್ಥಿತಿ. ಹೋಗುವಂತಿಲ್ಲ, ಬಿಡುವಂತಿಲ್ಲ. ಒಂದು ರೀತಿ ನುಂಗಲೂ ಆಗದ, ಉಗುಳಲೂ ಆಗದ ಪರಿಸ್ಥಿತಿ ಜಗ್ಗೇಶ್ ಅವರದು. ಇಷ್ಟಕ್ಕೂ ಜಗ್ಗೇಶ್ ಯಾರ ಬಗ್ಗೆ ತಮ್ಮ ಅಸಮಾಧಾನ, ಬೇಸರ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲೇ ಓದಿ.

ಅಮ್ಮ-ಮಗನನ್ನು ಒಂದು ಮಾಡಿದ 'ಮಠ' ಗುರುಪ್ರಸಾದ್!

"ಇಂದು ಬಲವಂತಕ್ಕೆ ಗೌರವಿಸಿ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕವಿಸ್ಮಿತನಾದೆ. ರಾಜ್ಯ, ರಾಷ್ಟ್ರಕ್ಕೆ ಯಾವ ಕೊಡುಗೆ ಇಲ್ಲ, ಬರಹಗಾರ್ತಿಯಲ್ಲಾ, ಸ್ವಾತಂತ್ರ್ಯ ಹೋರಾಟಗಾರ್ತಿಯಂತೂ ಅಲ್ಲವೆ ಅಲ್ಲ. ಹೋಗಲಿ ನೂರು ಸಿನಿಮಾ ನಟಿಯಂತು ಅಲ್ಲಾ, ಸಾಹಿತಿ ಅಲ್ಲಾ, ಅನಾಥ ಮಕ್ಕಳಿಗೆ ಮಹಾ ತಾಯಿ ಅಲ್ಲ, ಆಧುನಿಕ ಮದರ್ ತೆರೇಸಾ ಅಲ್ಲ, ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕ ಅಲ್ಲ, ಕಾದಂಬರಿ ಬರೆದ ತ್ರಿವೇಣಿ ಅಲ್ಲಾ, ಝಾನ್ಸಿ ಅಲ್ಲ! ಅಬ್ಬಕ್ಕನಲ್ಲ. ಕಿತ್ತೂರು ಚನ್ನಮ್ಮನಲ್ಲಾ! ಮತ್ತೆ ಯಾರು ಅಂಥ ಯೋಚಿಸಿದರೆ ಬೇರ್ಯಾರು ಅಲ್ಲಾ! ಕಣ್ಣು ಹೊಡೆದು ಕಣ್ಣಲ್ಲಿ ಯುವಕನಿಗೆ ಪ್ರೀತಿ ತೋರ್ಪಡಿಸುವ ಸಾಮಾನ್ಯ ವೀಡಿಯೋ ಮಾಡಿ ಜಗ ಮೆಚ್ಚಿದ ಸಾಮಾನ್ಯ ಹೆಣ್ಣುಮಗು!

ಜಗ್ಗೇಶ್ ಅವರ ವಿದೇಶಿ ಸೊಸೆ ಕನ್ನಡ ಮಾತನಾಡುತ್ತಾರಾ?

ಆಕೆ ಹೆಸರು ವಾರಿಯರ್ ಕೇರಳದ ಮಗು. ಕರೆದು ತಂದದ್ದು ಕನ್ನಡ ನಿರ್ಮಾಪಕ ಸ್ನೇಹಿತ ಮಂಜು. ಅದು ಒಕ್ಕಲಿಗರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಕ್ಕೆ. ನೂರು ಸಿನಿಮಾ ನಿರ್ದೇಶಕ ಸಾಯಿಪ್ರಕಾಶ್, ವಿದ್ಯಾದಾನಿ ಶ್ರೀ ನಿರ್ಮಲಾನಂದ ಶ್ರೀಗಳು, ಅನೇಕ ಸಾಧಕರಿಗಿಂತ ಕಣ್ಣು ಹೊಡೆವ ವಿಡಿಯೋ ನಟಿ ಇಂದು ದೇವರಂತೆ ಕಂಡಳು ಯುವಸಮಾಜಕ್ಕೆ. ಎಂಥ ಶಿಕ್ಷೆ. ಹೋದರೆ ಸಹಿಸಲಾಗದ ಹಿಂಸೆ! ಹೋಗದಿದ್ದರೆ ದುರಹಂಕಾರ ಪಟ್ಟ. ಎಂಥ ಶಿಕ್ಷೆ!


ಬದುಕು, ಜೀವನ, ದೇಶ, ಸಂಸ್ಕೃತಿ ತಾಯಿತಂದೆ ಶಿಕ್ಷಣ ಶಿಕ್ಷಕರು ಸಮಾಜ ಕಲಿಸುವ ಸಾಧಕರಿಗಿಂತ ಇಂದು ಇಂಥ ಕ್ಷಣಿಕ ಹೆಸರು ಮಾಡಿದ ಆರಾಧಕರು ದೇಶ ಸಂಸ್ಕೃತಿ ತಂದೆತಾಯಿ ಭಾವನೆ ಉಳಿಸುವ ಯುವ ಸಮುದಾಯವೇ? ಪ್ರಶ್ನೆ ನನ್ನ ಕಾಡಿ ಹುಚ್ಚನಂತೆ ಚಿಂತಿಸಿ ಮರಳಿದೆ..! ದೇಶದ ಬೆನ್ನೆಲುಬು ಯುವಸಮಾಜ? ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ. ಶುಭರಾತ್ರಿ" ಎಂದಿದ್ದಾರೆ.

ಆರಂಭದಲ್ಲೇ ಜಗ್ಗೇಶ್ 'ರಂಗನಾಯಕ'ನಿಗೆ ಟೈಟಲ್ ಕಿರಿಕ್!!

ಜಗ್ಗೇಶ್ ಅವರ ಮನದಾಳದ ಮಾತು ಕೇಳಿ ಅಭಿಮಾನಿಗಳೂ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ. "ಇದು ನಮ್ಮ ಕರ್ಮ ಅನ್ನಿಸುತ್ತದೆ ನಮ್ಮ ಚಲನಚಿತ್ರ ರಂಗದಲ್ಲಿ ಯು ಗಮನಿಸಿದ್ದೇನೆ ಯಾವುದಾದರೂ ಒಂದು ಸಿನಿಮಾದಲ್ಲಿ ನಟಿಸಿರುತ್ತಾರೆ ಅಂತವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕಾರ ಸನ್ಮಾನ ನೂರಾರು ಚಿತ್ರಗಳಲ್ಲಿ ಕೆಲಸ ಮಾಡಿ ರುವ ಖ್ಯಾತ ನಟ ನಟಿಯರು ನಿರ್ದೇಶಕರು ಅವರನ್ನೇಲ್ಲ ಕಡೆಗಣಿಸುತ್ತಾರೆ ಇದನ್ನೇಲ್ಲ ನೋಡುವ ಭಾಗ್ಯ ನಮ್ಮದು ಅಲ್ಲವೇ ಜಗ್ಗಣ್ಣ?" ಎಂದಿದ್ದಾರೆ.

ತಮಗೆ 'ಮುಠ್ಠಾಳ' ಎಂದವನನ್ನು ನೆನಪಿಸಿಕೊಂಡ 'ಪವರ್ ಸ್ಟಾರ್'

"ಎಲ್ಲಾ ಜಂಗಮವಾಣಿ ಮಹಿಮೆ ಸರ್, ಪಾಪ ಆಕೆಯದು ಏನೂ ತಪ್ಪಿಲ್ಲ ಅವರನ್ನು ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ ಆಡಳಿತ ವರ್ಗಕ್ಕೆ ಬುದ್ಧಿಮಾತು ಅಥವಾ ಏನಾದರೂ ಸಲಹೆ ಕೊಟ್ಟಿದ್ದರೆ ಉತ್ತಮ ಎನಿಸುತಿತ್ತು" ಎಂಬ ಸಲಹೆಯನ್ನೂ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌