ಆ್ಯಪ್ನಗರ

ಎಸ್‌ಪಿ ಬಾಲಸುಬ್ರಹ್ಮಣ್ಯಂ ಶೀಘ್ರ ಗುಣಮುಖರಾಗಲೆಂದು ವಿಶ್ವಾದ್ಯಂತ ಪ್ರಾರ್ಥನೆ

ಗಾನ ಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಶೀಘ್ರವೇ ಗುಣಮುಖರಾಗಲಿ ಎಂದು ವಿಶ್ವಾದ್ಯಂತ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ. ಸಿನಿಮಾರಂಗ, ಸಂಗೀತ ಕ್ಷೇತ್ರದ ಗಣ್ಯರು ಅವರ ಹಾಡುಗಳನ್ನು ಹಾಡಿದ್ದಾರೆ.

Vijaya Karnataka Web 20 Aug 2020, 7:20 pm
ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ಒಂದು ವಾರದಿಂದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಪ್ರಸ್ತುತ ಅವರನ್ನು ಚೆನ್ನೈ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಇನ್ನು, ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ವಿಶ್ವಾದ್ಯಂತ ಅವರ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ.
Vijaya Karnataka Web worldwide fans pray for singer sp balasubrahmanyam speedy recovery
ಎಸ್‌ಪಿ ಬಾಲಸುಬ್ರಹ್ಮಣ್ಯಂ ಶೀಘ್ರ ಗುಣಮುಖರಾಗಲೆಂದು ವಿಶ್ವಾದ್ಯಂತ ಪ್ರಾರ್ಥನೆ


ಆಗಸ್ಟ್ 20ರ ಸಂಜೆ 6 ಗಂಟೆಗೆ ಎಸ್‌ಪಿಬಿ ಅವರ ಹಾಡುಗಳನ್ನು ಹಾಡುವ ಮೂಲಕ ಅವರ ಆರೋಗ್ಯ ಶೀಘ್ರ ಸುಧಾರಿಸಲೆಂದು ಪ್ರಾರ್ಥನೆ ಮಾಡಲಾಗಿದೆ. ರಜನಿಕಾಂತ್, ಕಮಲ್ ಹಾಸನ್, ಇಳೆಯರಾಜಾ, ಎ.ಆರ್‌. ರೆಹಮಾನ್, ಹರಿಹರನ್, ಭಾರತೀರಾಜ, ಇಮ್ಮಾನ್, ಸತ್ಯರಾಜ್, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಚಿರಂಜೀವಿ ಸೇರಿದಂತೆ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಆಪ್ತರು, ಚಿತ್ರರಂಗದ ಸ್ನೇಹಿತರು ಪ್ರಾರ್ಥನೆ ಮಾಡಿದ್ದಾರೆ. ಎಸ್‌ಪಿಬಿ ದಾಖಲಾಗಿರುವ ಆಸ್ಪತ್ರೆಯಲ್ಲಿಯೂ ಅವರ ಹಾಡುಗಳನ್ನು ಕೇಳಿಸಲಾಗುತ್ತಿದೆಯಂತೆ. ಒಂದು ಸಕಾರಾತ್ಮಕ ಶಕ್ತಿ ಇರಲಿ ಎಂಬ ಕಾರಣಕ್ಕೆ ಎಸ್‌ಪಿಬಿ ಹಾಡಿರುವ ವಿವಿಧ ಭಾಷೆಗಳ ಹಾಡುಗಳನ್ನು ಪ್ಲೇ ಮಾಡಲು ಆಸ್ಪತ್ರೆಯ ಅಡಳಿತ ಮಂಡಳಿ ನಿರ್ಧಾರ ಮಾಡಿದೆಯಂತೆ.

ಇನ್ನು, ಅವರ ಆರೋಗ್ಯ ಸ್ಥಿತಿ ಬಗ್ಗೆ ಪುತ್ರ ಎಸ್‌ಪಿಬಿ ಚರಣ್ ಮಾಹಿತಿ ನೀಡಿದ್ದು, ಯಾವುದೇ ಚೇತರಿಕೆ ಇಲ್ಲ ಎಂದು ಹೇಳಿದ್ದಾರೆ. 'ಈವರೆಗೂ ನನ್ನ ತಂದೆಯ ಆರೋಗ್ಯದಲ್ಲಿ ಗಮನಾರ್ಹವಾದ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಆದರೆ, ನಿಮ್ಮೆಲ್ಲರ ಪ್ರಾರ್ಥನೆಯಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಅವರು ಗುಣಮುಖರಾಗಲಿದ್ದಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇವೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಆಗಸ್ಟ್ 20ರ ಸಂಜೆ 6 ಗಂಟೆಗೆ ದೇಶಾದ್ಯಂತ ಸಂಗೀತ ಕ್ಷೇತ್ರದ ಗಣ್ಯರು, ಸಿನಿಮಾರಂಗ ಗಣ್ಯರು ಪ್ರಾರ್ಥನೆ ಮಾಡಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ವಿಶ್ವಾದ್ಯಂತ ನಮ್ಮ ತಂದೆಯ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದೀರಿ. ನಮ್ಮ ಕುಟುಂಬ ನಿಮ್ಮೆಲ್ಲರಿಗೂ ಕೃತಜ್ಞವಾಗಿರುತ್ತದೆ' ಎಂದು ಚರಣ್‌ ಹೇಳಿದ್ದಾರೆ.

ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ! ವೈದ್ಯರಿಂದ ಮುಂದುವರಿದ ಚಿಕಿತ್ಸೆ

ಈ ವಿಡಿಯೋದಲ್ಲಿ ಚರಣ್‌ ತುಂಬ ಭಾವುಕರಾಗಿ ಮಾತನಾಡಿದ್ದಾರೆ. 'ಯಾರ ಪ್ರಾರ್ಥನೆಗಳು ವ್ಯರ್ಥವಾಗುವುದಿಲ್ಲ. ದೇವರಿಗೆ ಮನಸಾಕ್ಷಿ ಇದೆ. ಖಂಡಿತ ಅಪ್ಪ ಗುಣಮುಖರಾಗಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆಗಳಿಂದ ನಮ್ಮ ಕುಟುಂಬ ತುಂಬ ಧೈರ್ಯದಿಂದ ಇದೆ' ಎಂದಿದ್ದಾರೆ ಅವರು. ಆಗಸ್ಟ್‌ 5ರಂದು ಎಸ್‌ಪಿಬಿ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆ.13ರಂದು ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಅಂದಿನಿಂದ ಈವರೆಗೂ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಗಂಭೀರ; ಶೀಘ್ರ ಗುಣಮುಖರಾಗಲಿ ಎಂದ ರೆಹಮಾನ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌