ಆ್ಯಪ್ನಗರ

ವಿಕ ಫೇಸ್‍ಬುಕ್ ಲೈವ್‌ನಲ್ಲಿ ಮಾಜಿ ಐಟಿ ಉದ್ಯೋಗಿ, ಹಾಲಿ ರಂಗಕರ್ಮಿ 'ಅಭಿಷೇಕ್ ಅಯ್ಯಂಗಾರ್'

ಬರಹಗಾರ, ನಿರ್ದೇಶಕ ಹಾಗೂ ನಾಟಕಕಾರ ಅಭಿಷೇಕ್ ಅಯ್ಯಂಗಾರ್ ಇದೇ ಶನಿವಾರ (ಮೇ 23) ವಿಜಯ ಕರ್ನಾಟಕ ವೆಬ್ ಫೇಸ್‍ಬುಕ್ ಲೈವ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ರಂಗಭೂಮಿಗೆ ಸಂಬಂಧಿಸಿದ ಹಲವಾರು ಸಂಗತಿಗಳನ್ನು ಅವರ ಜೊತೆಗೆ ಓದುಗರು ಮುಕ್ತವಾಗಿ ಚರ್ಚಿಸಬಹುದು.

Vijaya Karnataka Web 21 May 2020, 8:44 pm

ಐಟಿ ಉದ್ಯೋಗಿಯಾಗಿದ್ದ ಇವರು ಅದನ್ನು ಬಿಟ್ಟು ರಂಗಭೂಮಿ ಕಡೆಗಿನ ಸೆಳೆತದಿಂದಾಗಿ ಈಗ ಅಲ್ಲೇ ತೊಡಗಿಸಿಕೊಂಡು ಪ್ರಯೋಗಶೀಲರಾಗಿದ್ದಾರೆ. ಕನ್ನಡ ರಂಗಭೂಮಿಗೆ ಕಾರ್ಪೊರೇಟ್‌ ಟಚ್‌ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ 'ಮುಂದಿನ ನಿಲ್ದಾಣ' ಹಾಗೂ 'ಬ್ರಾಹ್ಮಿ' ಸಿನಿಮಾಗಳಿಗೆ ರೈಟರ್ ಆಗಿಯೂ ಕೆಲಸ ಮಾಡಿದ್ದಾರೆ.
Vijaya Karnataka Web ಅಭಿಷೇಕ್ ಅಯ್ಯಂಗಾರ್


ರಂಗಭೂಮಿ ಬರಿಯ ಹವ್ಯಾಸಕ್ಕಷ್ಟೇ, ಅದು ಹೊಟ್ಟೆ ತುಂಬಿಸುವುದಿಲ್ಲ ಎಂಬ ಮಾತಿದೆ. ಇದನ್ನು ಸುಳ್ಳು ಮಾಡಹೊರಟಿದ್ದಾರೆ ಅಭಿಷೇಕ್‌ ಅಯ್ಯಂಗಾರ್‌. ಸಂಸ್ಥೆಯೊಂದನ್ನು ಕಟ್ಟಿ ಆ ಮೂಲಕ ರಂಗಭೂಮಿಯನ್ನೇ ವೃತ್ತಿಯನ್ನೂ ಪ್ರವೃತ್ತಿಯನ್ನೂ ಆಗಿ ಸ್ವೀಕರಿಸಿರುವ ಛಲ ಇವರ ತಂಡದ್ದು.

ಮೈಸೂರಿನ ರಂಗಾಯಣದ ಸಮ್ಮರ್‌ ಕ್ಯಾಂಪ್‌ ಮೂಲಕ ಇವರ ರಂಗಭೂಮಿ ನಂಟು ಆರಂಭವಾಯಿತು. ಚಿಕ್ಕಂದಿನಲ್ಲೇ ರಂಗದ ಮೇಲೆ ಏನೋ ಒಂದು ರೀತಿಯ ಸೆಳೆತದಿಂದ 2006ರಿಂದಲೂ ರಂಗಭೂಮಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. "ಸಮಾಜದ ಒತ್ತಡಕ್ಕಾಗಿ ಎಂಜಿನಿಯರಿಂಗ್‌ ಓದಿ, ಒಂದು ಕಂಪನಿಯಲ್ಲಿ ಕೆಲಸವನ್ನೂ ಮಾಡುತ್ತಿದ್ದೆ. 2012ರಲ್ಲಿ ರಾಜೀನಾಮೆ ಕೊಟ್ಟು ಫುಲ್‌ ಟೈಮ್‌ ರಂಗಕರ್ಮಿಯಾದೆ. ರಂಗಭೂಮಿಗೆ ಬೇರೆ ರೀತಿಯ ಆಯಾಮ ಕೊಡಬೇಕು ಎಂಬ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬಂದೆ. 2015ರಲ್ಲಿ ಅಮೆರಿಕದ ಬಾಸ್ಟನ್‌ನಲ್ಲಿ ಅಡ್ವಾನ್ಸ್ಡ್‌ ಫಿಸಿಕಲ್‌ ಥಿಯೇಟರ್‌ ಕೋರ್ಸ್‌ ಮಾಡಿದೆ" ಎನ್ನುತ್ತಾರೆ ಅಭಿಷೇಕ್.

'ಮುಂದಿನ ನಿಲ್ದಾಣ'ದ ಕಥೆಯ ಲೈನ್‌ ಬಿಟ್ಟುಕೊಟ್ಟ ನಿರ್ದೇಶಕ

'ವಿ ಮೂವ್‌ ಸಲ್ಯೂಶನ್‌' ಎಂಬ ಕಂಪನಿ ಮುನ್ನಡೆಸುತ್ತಿದ್ದು, ಅದರಲ್ಲಿ ಇವರ ಜತೆ 10 ಜನ ಫುಲ್‌ ಟೈಮ್‌ ರಂಗಭೂಮಿಗಾಗಿ ದುಡಿಯುತ್ತಿದ್ದಾರೆ . ಅವರೆಲ್ಲರಿಗೂ ಸಂಬಳ ನೀಡುತ್ತಿದ್ದಾರೆ. ವಿ ಮೂವ್‌ ಥಿಯೇಟರ್‌ನಿಂದ ಸುಮಾರು 176 ಶೋಗಳು ಆಗಿವೆ. ಎಲ್ಲವೂ ಕಾಂಟೆಂಪರರಿ ನಾಟಕಗಳು ಎಂಬುದು ವಿಶೇಷ.

ಮುಂದಿನ ನಿಲ್ದಾಣಕ್ಕಾಗಿ 13 ಕೆಜಿ ತೂಕ ಇಳಿಸಿದ ಚೂರಿಕಟ್ಟೆ ಪ್ರವೀಣ್‌

ನಮ್ಮ ಮೆಟ್ರೊ, ಮಾಗಡಿ ಡೇಸ್, E=mc2, ಒಂದು ಸೆಕೆಂಡ್, ಅನಾವರಣ, ಸಂಬಂಧಗಳ ಸುತ್ತ, S I Don’t Love You, ಕಾಕ್‍ಟೇಲ್ (ಇಂಗ್ಲಿಷ್), ಮಾಲ್ಗುಡಿ ಎಕ್ಸ್‌ಪ್ರೆಸ್ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ಇಂತಹ ಅಪರೂಪದ ಪ್ರತಿಭೆಯನ್ನು ಮೇ 23ರಂದು ವಿಜಯಕರ್ನಾಟಕ ಫೇಸ್‍ಬುಕ್‌ನಲ್ಲಿ ನೇರವಾಗಿ ಮಾತನಾಡಿಸುವ, ಪ್ರಶ್ನೆಗಳನ್ನು ಕೇಳುವ, ರಂಗಾಸಕ್ತರು, ರಂಗಭೂಮಿ ಬಗ್ಗೆ ತಿಳಿಯಬೇಕು ಎಂಬುವವರು ಪ್ರಶ್ನೆಗಳನ್ನು ಕೇಳಬಹುದು.

ನಾಟಕಗಳು ಜನರ ಕಥೆ ಹೇಳಬೇಕು: ಅಭಿಷೇಕ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌