ಆ್ಯಪ್ನಗರ

ನಟ ಯಶ್- ಪ್ರಶಾಂತ್ ನೀಲ್‌ ಕ್ಯಾಮರಾ ಮುಂದೆ ಕುಳಿತಿದ್ದೇಕೆ? ಕೊನೆಗೂ ಸಿಕ್ಕಿತು ಉತ್ತರ!

ಇನ್‌ಸ್ಟಾಗ್ರಾಮ್‌ನಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕಂಡು ಸಿನಿಪ್ರಿಯರಲ್ಲಿ ಕುತೂಹಲ ಸೃಷ್ಟಿಸಿದ್ದರು 'ಕೆಜಿಎಫ್'ನಿರ್ದೇಶಕ ಪ್ರಶಾಂತ್ ನೀಲ್‌. ಇದೀಗ ಆ ಕುತೂಹಲ ಉತ್ತರ ಸಿಕ್ಕಿದೆ. ಏನಿದು ಹೊಸ ವಿಷಯ?

Vijaya Karnataka Web 3 Jul 2020, 4:29 pm
'ಕೆಜಿಎಫ್' ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಗುರುವಾರ (ಜುಲೈ 02) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳಲ್ಲಿ ಯಶ್ ಮತ್ತು ಪ್ರಶಾಂತ್ ಪ್ರತ್ಯೇಕವಾಗಿ ಕ್ಯಾಮರಾ ಮುಂದೆ ಕುಳಿತು, ಮಾತನಾಡುತ್ತಿರುವಂತೆ ಇತ್ತು. ಈ ಫೋಟೋಗಳನ್ನು ಹಂಚಿಕೊಂಡಿದ್ದ ಪ್ರಶಾಂತ್‌, 'ಇಲ್ಲಿ ಏನು ನಡೆಯುತ್ತಿದೆ ಎಂದು ಊಹಿಸಿ' ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಇದು ಏನಿರಬಹುದು ಎಂದು ರಾಕಿ ಭಾಯ್‌ ಫ್ಯಾನ್ಸ್ ಕೂಡ ಸಖತ್ ತಲೆ ಕೆಡಿಸಿಕೊಂಡಿದ್ದರು. ಅಂತಿಮವಾಗಿ ಆ ಕುತೂಹಲಕ್ಕೆ ಈಗೆ ತೆರೆಬಿದ್ದಿದೆ.
Vijaya Karnataka Web yash starrer kgf chapter 1 telugu world television premiere on star maa
ನಟ ಯಶ್- ಪ್ರಶಾಂತ್ ನೀಲ್‌ ಕ್ಯಾಮರಾ ಮುಂದೆ ಕುಳಿತಿದ್ದೇಕೆ? ಕೊನೆಗೂ ಸಿಕ್ಕಿತು ಉತ್ತರ!


ಇದು 'ಕೆಜಿಎಫ್‌ ಚಾಪ್ಟರ್‌ 1'ಕ್ಕೆ ಪ್ರಮೋಷನ್‌!
'ಅರೇ, 'ಕೆಜಿಎಫ್‌ ಚಾಪ್ಟರ್‌ 1' ಚಿತ್ರವು ತೆರೆಕಂಡು ಬರೋಬ್ಬರಿ ಒಂದೂವರೆ ವರ್ಷಗಳಾಯ್ತು. ಹೋಗಲಿ, ಆ ಸಿನಿಮಾ ಮರುಬಿಡುಗಡೆ ಮಾಡುವುದಕ್ಕಾಗಿ ಏನಾದರೂ ಪ್ರಮೋಷನ್ ಮಾಡ್ತಾ ಇದ್ದಾರಾ? ಅದಂತೂ ಈಗ ಸಾಧ್ಯವೇ ಇಲ್ಲ! ಹಾಗಾದರೆ, ಮತ್ಯಾಕೆ ಈ ಪ್ರಮೋಷನ್‌? ಅದಕ್ಕೆ ಉತ್ತರ, 'ಕೆಜಿಎಫ್ ಚಾಪ್ಟರ್‌ 1'ರ ತೆಲುಗು ವರ್ಷನ್. ಹೌದು, 'ಕೆಜಿಎಫ್' ಚಿತ್ರವು ಐದು ಭಾಷೆಗಳಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿತು. ತೆರೆಗೆ ಬಂದ ಕೆಲವೇ ತಿಂಗಳಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ಪ್ರಸಾರ ಕಂಡಿತು. ಆದರೆ, ವಿವಿಧ ಪ್ರಾದೇಶಿಕ ವಾಹಿನಿಗಳಲ್ಲೂ ಸಿನಿಮಾ ಪ್ರದರ್ಶನವಾಯ್ತು. ಆದರೆ, ಇದುವರೆಗೂ 'ಕೆಜಿಎಫ್‌'ನ ತೆಲುಗು ವರ್ಷನ್ ಪ್ರದರ್ಶನ ಕಂಡಿರಲಿಲ್ಲ. ಅದಕ್ಕೀಗ ಕಾಲ ಕೂಡಿಬಂದಿದೆ.

ತೆಲುಗು ವಾಹಿನಿಯಲ್ಲಿ 'ಕೆಜಿಎಫ್' ಪ್ರಸಾರ
ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಇದೇ ಭಾನುವಾರ (ಜುಲೈ 05) ಸಂಜೆ 5.30ಕ್ಕೆ 'ಕೆಜಿಎಫ್' ಚಿತ್ರವು ಪ್ರಸಾರವಾಗಲಿದೆ. ಸಿನಿಮಾದ ನಡುನಡುವೆ, 'ಕೆಜಿಎಫ್‌' ಮೇಕಿಂಗ್ ಬಗ್ಗೆ ನಟ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ಅದಕ್ಕಾಗಿಯೇ ಯಶ್ ಮತ್ತು ಪ್ರಶಾಂತ್ ಕ್ಯಾಮೆರಾ ಮುಂದೆ ಬಂದು ಮಾತನಾಡಿದ್ದರು. ಆ ವೇಳೆ ತೆಗೆದ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದರು ಪ್ರಶಾಂತ್.

ಯಶ್ ವಿಡಿಯೋ ಬೈಟ್ ನೀಡುತ್ತಿರುವ ಫೋಟೋ ಹಂಚಿಕೊಂಡು ಪ್ರೇಕ್ಷಕರ ತಲೆಗೆ ಹುಳಬಿಟ್ಟ ಪ್ರಶಾಂತ್ ನೀಲ್!

ಅಕ್ರಮವಾಗಿ ಪ್ರಸಾರ ಮಾಡಿತ್ತು ಲೋಕಲ್ ಚಾನೆಲ್‌! ಈ ಹಿಂದೆ ತೆಲುಗಿನ ಲೋಕಲ್ ವಾಹಿನಿಯೊಂದು 'ಕೆಜಿಎಫ್' ಚಿತ್ರವನ್ನು ಯಾವುದೇ ಹಕ್ಕುಗಳನ್ನು ಪಡೆಯದೇ ನೇರವಾಗಿ ಪ್ರಸಾರ ಮಾಡಿತ್ತು. ಇದು ಚಿತ್ರತಂಡದ ಕೆಂಗಣ್ಣಿಗೆ ಗುರಿಯಾಗಿತ್ತು. ಹೊಂಬಾಳೆ ಫಿಲ್ಮ್ಸ್‌ನ ಕಾರ್ತಿಕ್‌ ಗೌಡ ಈ ಕುರಿತು ಟ್ವೀಟ್ ಮಾಡಿ, 'Every ಎಂಬ ಲೋಕಲ್‌ ತೆಲುಗು ಚಾನಲ್‌ 'ಕೆಜಿಎಫ್‌' ಸಿನಿಮಾವನ್ನು ಅಕ್ರಮವಾಗಿ ಪ್ರಸಾರ ಮಾಡಿದೆ. ಅವರ ಈ ಕೃತ್ಯಕ್ಕೆ ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ. ಸ್ಯಾಟಲೈಟ್‌ ಹಕ್ಕುಗಳ ಮಾರಾಟದ ಮಾತುಕತೆ ಫೈನಲ್‌ ಹಂತದಲ್ಲಿ ಇರುವಾಗಲೇ ಈ ವಾಹಿನಿ ಈ ರೀತಿ ಮಾಡಿದೆ. ಅವರ ಈ ಕೃತ್ಯಕ್ಕೆ ವಿಡಿಯೋ ಮತ್ತು ಸ್ಕ್ರೀನ್‌ಶಾಟ್‌ ಸಾಕ್ಷಿ ಕೂಡ ಇದೆ' ಎಂದು ಅವರು ಗರಂ ಆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌