ಆ್ಯಪ್ನಗರ

'ಅಭಿಮಾನಿ ದೇವರುಗಳು' ಎಂಬುದು ಮತ್ತೆ ಸಾಬೀತಾಯ್ತು! ಈ ಮಾತಿಗೆ ಪುನೀತ್‌ ಕೊಟ್ರು ಸಾಕ್ಷಿ

ಡಾ. ರಾಜ್‌ಕುಮಾರ್‌ ಅವರು ಅಭಿಮಾನಿಗಳನ್ನು 'ದೇವರು' ಎಂದು ಕರೆದಿದ್ದರು. ಆ ಮಾತು ಮತ್ತೆ ನಿಜವಾಗಿದೆ ಎಂಬುದು ಪುನೀತ್‌ ರಾಜ್‌ಕುಮಾರ್‌ ಅಭಿಪ್ರಾಯ. ಅದನ್ನ ಸಾಕ್ಷಿಸಮೇತ ವಿವರಿಸಿದ್ದಾರೆ 'ಪವರ್‌ ಸ್ಟಾರ್‌'.

Vijaya Karnataka Web 6 May 2020, 6:48 pm
'ಮೇರು ನಟ' ಡಾ. ರಾಜ್‌ಕುಮಾರ್‌ ಅವರು ಅಭಿಮಾನಿಗಳಿಗೆ ಅಪಾರ ಗೌರವ ನೀಡುತ್ತಿದ್ದರು. ಎಷ್ಟರಮಟ್ಟಿಗೆ ಎಂದರೆ ಅಭಿಮಾನಿಗಳನ್ನೇ ಅವರು ದೇವರು ಎಂದು ಕರೆದಿದ್ದರು. ಆ ಮಾತಿಗೆ ತಕ್ಕಂತೆಯೇ ಫ್ಯಾನ್ಸ್‌ ಕೂಡ ನಡೆದುಕೊಳ್ಳುತ್ತಿದ್ದರು. ರಾಜ್‌ ಹೇಳಿದ ಮಾತುಗಳನ್ನು ಅವರು ತಪ್ಪದೇ ಪಾಲಿಸುತ್ತಿದ್ದರು. 'ಅಭಿಮಾನಿ ದೇವರುಗಳು' ಎಂಬ ವಾಕ್ಯ ಈಗ ಪುನೀತ್‌ ರಾಜ್‌ಕುಮಾರ್‌ ಬಾಯಿಂದ ಮತ್ತೆ ಬಂದಿದೆ.
Vijaya Karnataka Web ಪುನೀತ್‌ ರಾಜ್‌ಕುಮಾರ್‌


ಹೌದು, ಇತ್ತೀಚೆಗೆ ಅಭಿಮಾನಿಗಳು ಮಾಡುತ್ತಿರುವ ಕೆಲಸ ಪುನೀತ್‌ ಮನ ಮುಟ್ಟಿದೆ. ಕೊರೊನಾ ವೈರಸ್‌ ಹಾವಳಿ ಹೆಚ್ಚಾಗಿರುವುದರಿಂದ ಬಡವರ ಜನಜೀವನ ಕಷ್ಟ ಆಗಿದೆ. ಅಂಥವರಿಗೆ ಸ್ಟಾರ್‌ ಕಲಾವಿದರು ಸಹಾಯ ಮಾಡುತ್ತಿದ್ದಾರೆ. ಅವರ ಜೊತೆಗೆ ಅಭಿಮಾನಿಗಳು ಕೂಡ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕೈಲಾದಷ್ಟು ಆಹಾರ ಹಂಚುತ್ತ ಮಾನವೀಯತೆ ಮರೆಯುತ್ತಿದ್ದಾರೆ. ಆ ಬಗ್ಗೆ ಪುನೀತ್‌ ರಾಜ್‌ಕುಮಾರ್‌ ಮಾತನಾಡಿದ್ದಾರೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ಒಂದು ವಿಡಿಯೋ ಶೇರ್‌ ಮಾಡಿಕೊಂಡಿರುವ ಪುನೀತ್‌, ಅದನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಜನರಿಗೆ ರಾಜ್‌ ಅಭಿಮಾನಿಗಳು ಸಹಾಯ ಮಾಡುತ್ತಿರುವ ದೃಶ್ಯಗಳು ಅದರಲ್ಲಿ ಇವೆ. ಅದರ ಬಗ್ಗೆ ಪುನೀತ್‌ ಮನಸಾರೆ ಮಾತನಾಡಿದ್ದಾರೆ. 'ಅಪ್ಪಾಜಿ ಅಭಿಮಾನಿಗಳನ್ನು ದೇವರು ಎಂದ್ರು. ಇವತ್ತಿಗೂ ಅವರ ಅಭಿಮಾನಿಗಳು ಮಾಡುತ್ತಿರುವ ಸಹಾಯವನ್ನು ನೋಡಿದರೆ ಅಪ್ಪಾಜಿ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ' ಎಂದಿದ್ದಾರೆ.

ಫ್ಯಾಂಟಸಿ ಕಥೆಯಲ್ಲಿ ಪುನೀತ್ ‌ರಾಜ್‌ಕುಮಾರ್‌! ಕೌತುಕ ಹೆಚ್ಚಿಸಿದ ನಿರ್ದೇಶಕ ಸತ್ಯ ಪ್ರಕಾಶ್‌

'ಕೋವಿಡ್‌ 19ನಿಂದ ಜನಜೀವನ ಸ್ಥಗಿತ ಆದಾಗ ಅಪ್ಪಾಜಿ ಅಭಿಮಾನಿಗಳು ಎಷ್ಟೋ ಜನರ ಬದುಕಿಗೆ ನೆರವಾಗಿದ್ದೀರಿ. ನಾಡಿನ ಪ್ರಜೆಯಾಗಿ, ಅವರ ಮಗನಾಗಿ ನಿಮ್ಮ ಈ ನಿಸ್ವಾರ್ಥ ಸೇವೆಗೆ ನನ್ನ ನಮನಗಳು. ನಮ್ಮ ಕುಟುಂಬದ ಜೊತೆ ನೀವಿದ್ದೀರಿ. ನಿಮ್ಮ ಜೊತೆ ನಾವಿದ್ದೇವೆ. ನಾಡು ಕಷ್ಟದಲ್ಲಿ ಇರುವಾಗ ನಿಮ್ಮ ಸ್ಪಂದನೆಯಲ್ಲಿ, ನಿಮ್ಮ ಪ್ರೀತಿಯಲ್ಲಿ ಅಪ್ಪಾಜಿ ಇನ್ನೂ ಜೀವಂತವಾಗಿ ಇದ್ದಾರೆ. ನಿಮಗೆ ಸದಾ ಋಣಿ ಈ ಪುನೀತ್‌ ರಾಜ್‌ಕುಮಾರ್‌' ಎಂದು ಎಲ್ಲ ಅಭಿಮಾನಿ ದೇವರುಗಳಿಗೆ ಅಪ್ಪು ಧನ್ಯವಾದ ಸಲ್ಲಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ 18 ವರ್ಷ ಪೂರೈಸಿದ ಅಪ್ಪುಗೆ ಅಭಿಮಾನಿಗಳ ಪ್ರೀತಿಯ ಅಪ್ಪುಗೆ

'ಪವರ್ ಸ್ಟಾರ್‌' ಅವರ ಈ ಮಾತಿಗೆ ಎಲ್ಲ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಕೊಳ್ಳಬೇಕು ಹುಮ್ಮಸ್ಸು ಅವರಲ್ಲಿ ಮೂಡಿದೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ 'ಯುವರತ್ನ' ಸಿನಿಮಾದಲ್ಲಿ ಅಪ್ಪು ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಲಾಕ್‌ಡೌನ್‌ ಇರುವುದರಿಂದ ರಿಲೀಸ್‌ ದಿನಾಂಕ ಮುಂದಕ್ಕೆ ಹೋಗಿದೆ.

ನಿಮ್ಮ ಜ್ಞಾನ ಹೆಚ್ಚಿಸಲು ಲಾಕ್‌ಡೌನ್‌ನಲ್ಲೂ ಮನೆಮನೆಗೆ ಬರಲಿದ್ದಾರೆ ಪುನೀತ್‌ ರಾಜ್‌ಕುಮಾರ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌