ಹಿಡಿತಕ್ಕೆ ಸಿಗದ ಬದುಕಿನಲಿ ರತ್ನಾಕರನ ಅಲೆದಾಟ; 'ರತ್ನನ್ ಪ್ರಪಂಚ' ಸಿನಿಮಾ ವಿಮರ್ಶೆ
ಧನಂಜಯ,ಉಮಾಶ್ರೀ,ಶ್ರುತಿ,ಪ್ರಮೋದ್,ಅನು ಪ್ರಭಾಕರ್,ರೆಬಾ ಮೋನಿಕಾ,ಅಚ್ಯುತ್ ಕುಮಾರ್
ಅವಿನಾಶ್ ಜಿ. ರಾಮ್
'ಡಾಲಿ' ಧನಂಜಯ ನಟನೆಯ 'ರತ್ನನ್ ಪ್ರಪಂಚ' ಸಿನಿಮಾವು ಟ್ರೈಲರ್ ಮೂಲಕವೇ ಗಮನಸೆಳೆದಿತ್ತು. ಮಿಡಲ್ ಕ್ಲಾಸ್ ಕುಟುಂಬವೊಂದರ ಯುವಕನ ಬದುಕಿನ ಹಲವು ರೋಚಕ ಘಟ್ಟಗಳನ್ನು 'ರತ್ನನ್ ಪ್ರಪಂಚ' ಒಳಗೊಂಡಿದೆ ಎಂಬುದು ಟ್ರೈಲರ್ನಲ್ಲಿ ಗೊತ್ತಾಗಿತ್ತು. ಇದೀಗ ಸಿನಿಮಾ ತೆರೆಕಂಡಿದೆ. ರೋಹಿತ್ ಪದಕಿ ನಿರ್ದೇಶನದ ಎರಡನೇ ಸಿನಿಮಾ ಇದಾಗಿದ್ದು, ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ರಂಜಿಸಿದೆ? 'ರತ್ನನ್ ಪ್ರಪಂಚ'ದ ಒಳಗೆ ಏನೇನಿದೆ? ಮುಂದೆ ಓದಿ.
ರತ್ನಾಕರನ ಎಮೋಷನಲ್ ಅಲೆದಾಟ
ಇನ್ಶುರೆನ್ಸ್ ಏಜೆಂಟ್ ರತ್ನಾಕರನಿಗೆ (ಧನಂಜಯ) ಬದುಕಿನಲ್ಲಿ ಹಲವಾರು ತೊಡಕುಗಳು. ಹಠಮಾರಿಯಂತಹ ಅಮ್ಮ ಸರೋಜಾ (ಉಮಾಶ್ರೀ) ಜೊತೆಗೆ ಸದಾ ಕಿರಿಕ್ಕು. ಸರೋಜಾಳ ಒರಟು, ಹಠಮಾರಿತನದ ಒಳಗೂ ಮಗನ ಮೇಲೊಂದು ಅಪಾರವಾದ ಮುಗ್ಧ ಪ್ರೀತಿ ಇದೆ. ಅದು ರತ್ನನಿಗೆ ಕನೆಕ್ಟ್ ಆಗುತ್ತಿಲ್ಲ. ತಮ್ಮ ರಘು ಮದುವೆ ಆಗಿ ಹೆಂಡ್ತಿ, ಮಗುವಿನೊಂದಿಗೆ ಸಂಸಾರ ನಡೆಸುತ್ತಿದ್ದರೂ ರತ್ನನಿಗೆ ಗುರು ಬಲ ಕೂಡಿ ಬಂದಿಲ್ಲ! ಒಂದಿಲ್ಲೊಂದು ಸಮಸ್ಯೆಗಳು ಆಫೀಸ್ ಐಡಿ ಕಾರ್ಡ್ನಂತೆ ರತ್ನನ ಕುತ್ತಿಗೆಗೆ ಜೋತುಬಿದ್ದಿವೆ. ಹತಾಶೆಯ ತುತ್ತತುದಿ ತಲುಪಿದ್ದಾನೆ ರತ್ನಾಕರ! ಇಂಥ ಟೈಮ್ನಲ್ಲಿ ಆತನ ಬಾಳಿಗೆ ಎಂಟ್ರಿ ನೀಡುವ ಮಯೂರಿ (ರೆಬಾ ಮೋನಿಕಾ) ದೆಸೆಯಿಂದಾಗಿ ರತ್ನಾಕರ ಬದುಕಿನಲ್ಲಿ ಎದುರಾಗುವ ತಿರುವುಗಳು ಒಂದೆರಡಲ್ಲ! ಅಲ್ಲಿಂದ ಶುರುವಾಗುವುದೇ ರತ್ನನ ನಿಜವಾದ ಹುಡುಕಾಟ. ತನ್ನನ್ನು ತಾನೇ ಹುಡುಕಿಕೊಳ್ಳುತ್ತ, ತನ್ನ ಅಸ್ತಿತ್ವ ಹುಡುಕುತ್ತ, ತನ್ನವರನ್ನೂ ಹುಡುಕುತ್ತ ಸಾಗುತ್ತದೆ ರತ್ನನ ಹುಡುಕಾಟ!
'ದಯವಿಟ್ಟು ಗಮನಿಸಿ' ಥರದ ಪ್ರಯೋಗಾತ್ಮಕ ಸಿನಿಮಾ ಮಾಡಿ ಗಮನಸೆಳೆದಿದ್ದ ನಿರ್ದೇಶಕ ರೋಹಿತ್ ಪದಕಿ, ಈ ಬಾರಿ ಒಂದು ಎಮೋಷನಲ್ ಕಾಮಿಡಿ ಸಬ್ಜೆಕ್ಟ್ ಆಯ್ದುಕೊಂಡಿದ್ದಾರೆ. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..' ಎನ್ನುವಂತೆ ರತ್ನಾಕರನನ್ನು ಹಲವು ಕಡೆ ಅಲೆದಾಡಿಸಿದ್ದಾರೆ. ಇದ್ದುದರಲ್ಲೇ ಈ ಕಥೆಯ ಆಯ್ಕೆ ವಿಭಿನ್ನವಾಗಿದೆ. ಆದರೆ, ಚಿತ್ರಕಥೆಯಲ್ಲಿ ಇನ್ನಷ್ಟು ಗಟ್ಟಿತನ ಬೇಕಿತ್ತು ಎನಿಸುವುದು ಸುಳ್ಳಲ್ಲ. ಒಮ್ಮೊಮ್ಮೆ ಕಥೆಯು ಅತ್ತ ಕಾಮಿಡಿಯೂ ಆಗದೇ, ಇತ್ತ ಭಾವುಕತೆಯನ್ನು ಸೃಷ್ಟಿಸದೇ ಎತ್ತೆತ್ತಲೋ ಸಾಗುತ್ತದೆ. ಕಾಶ್ಮೀರದಲ್ಲಿ ಬರುವ ರವಿಶಂಕರ್ ಪಾತ್ರ ನಾಟಕೀಯ ಎನಿಸುತ್ತದೆ. ಉಡಾಳ್ ಬಾಬುವಿನ ಸುತ್ತಮುತ್ತ ಇರುವವರು ಕೊಡುವ ಬಿಲ್ಡಪ್ ಕೊಂಚ ಹೆಚ್ಚಾಯಿತೇನೋ ಎಂದು ಭಾಸವಾಗುತ್ತದೆ. ರತ್ನಾಕರನೊಂದಿಗೆ ಹುಡುಕಾಟದಲ್ಲಿ ಭಾಗಿಯಾಗುವ ನಾಯಕಿ ಪಾತ್ರಕ್ಕೆ ಇನ್ನಷ್ಟು ಸ್ಟ್ರಾಂಗ್ ಬುನಾದಿ ಬೇಕಿತ್ತು ಎನಿಸುತ್ತದೆ. ಇದರ ಹೊರತಾಗಿ ಸಿನಿಮಾದಲ್ಲಿನ ಕೆಲವೊಂದು ರೂಪಕಗಳು ಖುಷಿ ನೀಡುತ್ತವೆ ಮತ್ತು ಚಿಂತನೆಗೆ ಹಚ್ಚುತ್ತವೆ. ಸಂಬಂಧಗಳಿಗೆ ಹೊಸ ಅರ್ಥ ಹುಡುಕುವ ಪ್ರಯತ್ನ ಖುಷಿ ನೀಡುತ್ತದೆ.
ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿದೆ. ಶ್ರೀಶ ಕುದುವಳ್ಳಿ, ತಮ್ಮ ಕ್ಯಾಮೆರಾ ಮೂಲಕ ಬೆಂಗಳೂರಿನ ಮಿಡಲ್ ಕ್ಲಾಸ್ ಬದುಕನ್ನು, ಕಾಶ್ಮೀರದ ಹಿಮದ ಬಿಳುಪನ್ನು, ಉತ್ತರ ಕರ್ನಾಟಕದ ಬಯಲು ಸೀಮೆಯನ್ನು ಸಮರ್ಥವಾಗಿ ಸೆರೆಹಿಡಿದಿದ್ದಾರೆ. ಹಾಡುಗಳ ಮೂಲಕ ಅಷ್ಟೇನೂ ಸ್ಕೋರ್ ಮಾಡದ ಅಜನೀಶ್ ಲೋಕನಾಥ್, ಹಿನ್ನೆಲೆ ಸಂಗೀತದ ಮೂಲಕ ಟಾಪ್ ಎನಿಸಿಕೊಂಡುಬಿಡುತ್ತಾರೆ. ಸಂಭಾಷಣೆ ಇಡೀ ಸಿನಿಮಾದ ದೊಡ್ಡ ಹೈಲೈಟ್. 'ಯಾಕಪ್ಪ, ಏನಾದ್ರು ಮರ್ತು ಹೋಗಿಯೇನಾ?.. ಮೈಮರ್ತು ಹೋದ್ನೇ ಯವ್ವಾ..'- ಉತ್ತರ ಕರ್ನಾಟಕದ ಸೊಗಡಿನ ಇಂಥ ಹಲವು ಸಂಭಾಷಣೆಗಳು ಮನಮುಟ್ಟುತ್ತದೆ.
ಅಚ್ಚುಕಟ್ಟಾದ ಕಲಾವಿದರ ಅಭಿನಯ
ನಟ ಧನಂಜಯ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿದ್ದು 'ಟಗರು' ಚಿತ್ರದ ಡಾಲಿ ಪಾತ್ರ. ಆ ಮೂಲಕ ಅವರು ನಟ ರಾಕ್ಷಸ ಎನಿಸಿಕೊಂಡರು. ಹಾಗೇ ನೋಡಿದ್ರೆ, 'ರತ್ನನ್ ಪ್ರಪಂಚ' ಧನು ಕರಿಯರ್ಗೆ ಮತ್ತೊಂದು ತಿರುವು. ನಟ ರಾಕ್ಷಸ ಎನಿಸಿಕೊಂಡವರು, ಇಲ್ಲಿ 'ನಟ ರತ್ನ' ಎನಿಸಿಕೊಳ್ಳುತ್ತಾರೆ. ಈಚೆಗೆ ಅವರು ಮಾಡಿದ ಡಾಲಿ, ಸಾಮ್ರಾಟ್, ಟೈಗರ್ ಸೀನ, ಆಂಟನಿ ಜೋಸೇಫ್... ಈ ಯಾವ ಪಾತ್ರಗಳ ಶೇಡ್ ಕೂಡ 'ರತ್ನನ್ ಪ್ರಪಂಚ'ದಲ್ಲಿ ಕಾಣಸಿಗೋದಿಲ್ಲ. ರತ್ನಾಕರನಾಗಿ ಸದಾ ಸೀದಾ ಹುಡುಗನಾಗಿ, ಹುಡುಕಾಟದ ಪರಿಧಿಯಲ್ಲಿ ಅಲೆಯುವ, ಹತಾಶೆಯ ಗೂಡಲ್ಲಿ ಒದ್ದಾಡುವ ಪಾತ್ರದಲ್ಲಿ ಮಿಂದೆದ್ದಿದ್ದಾರೆ. ಅಷ್ಟರ ಮಟ್ಟಿಗೆ ಪಾತ್ರವನ್ನು ಜೀವಿಸಿದ್ದಾರೆ. ಹಲವು ವರ್ಷಗಳಿಂದ ನಟನೆಯತ್ತ ಮುಖ ಮಾಡದ ಉಮಾಶ್ರೀ, ರತ್ನನ್ ಪ್ರಪಂಚದ ಸರೋಜಮ್ಮನ ಪಾತ್ರದಲ್ಲಿ ಜಗಮಗಿಸಿದ್ದಾರೆ. ಚಿತ್ರದ ಪ್ರಥಮಾರ್ಧದಲ್ಲಿ ಉಮಾಶ್ರೀ ಆವರಿಸಿಕೊಳ್ಳುತ್ತಾರೆ. ತಮಾಷೆ, ಹಠ, ಒರಟು, ಸಿಟ್ಟು, ವಾಚಾಳಿ, ಭಾವುಕ.. ಹೀಗೆ ನಾನಾ ರೂಪದಲ್ಲಿ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ.
ಬಣ್ಣದ ಲೋಕಕ್ಕೆ ಮರಳಿದ ನಟಿ ಉಮಾಶ್ರೀ; 'ರತ್ನನ್ ಪ್ರಪಂಚ'ದಲ್ಲಿ ಡಾಲಿಗೆ ಅಮ್ಮನಾದ 'ಪುಟ್ಮಲ್ಲಿ'
ಪ್ರಮೋದ್ ಎಂಬ ಅಚ್ಚರಿ'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ಗಮನಸೆಳೆದಿದ್ದ ಪ್ರಮೋದ್ ಇಲ್ಲಿ ಉಡಾಳ್ ಬಾಬು ರಾವ್ ಎಂಬ ಪಾತ್ರದ ಮೂಲಕ ದ್ವಿತಿಯಾರ್ಧವನ್ನು ಆವರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ರಗಡ್ ಯುವಕನಾಗಿ ಅವರ ನಟನೆ ಖುಷಿ ಕೊಡುತ್ತದೆ. ಬಯಲು ಸೀಮೆ ಸೊಗಡಿನ ಖಡಕ್ ಸಂಭಾಷಣೆ ಹೇಳುತ್ತ ಮಿಂಚುವ ಅವರು, ನೋಡುಗರನ್ನು ಅಳಿಸುವ ಕೆಲಸವನ್ನೂ ಮಾಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಪ್ರಮೋದ್ಗೆ ದೊಡ್ಡ ಭವಿಷ್ಯ ಇದೆ ಅನ್ನೋದು ಗೊತ್ತಾಗುತ್ತದೆ. ಹಾಗೆಯೇ ಯಲ್ಲವ್ವಳಾಗಿ ಶ್ರುತಿ ಅವರದ್ದು ಎಮೋಷನಲ್ ನಟನೆ. ಅಚ್ಯುತ್ ಕುಮಾರ್, ಅನು ಪ್ರಭಾಕರ್, ಜಹಾಂಗೀರ್, ದಾನಪ್ಪ, ಬಿರಾದರ್, ಅಕ್ಕಯ್ಯ ಪದ್ಮಾಶಾಲಿ, ಅಶೋಕ್, ದಿವ್ಯಾ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ರೆಬಾ ಮೋನಿಕಾ ಕನ್ನಡಕ್ಕೆ ಸಿಕ್ಕಿದ ಭರವಸೆಯ ನಟಿ.
'ಡಾಲಿ' ಧನಂಜಯ ನಟನೆಯ 'ರತ್ನನ್ ಪ್ರಪಂಚ' ಸಿನಿಮಾವು ಟ್ರೈಲರ್ ಮೂಲಕವೇ ಗಮನಸೆಳೆದಿತ್ತು. ಮಿಡಲ್ ಕ್ಲಾಸ್ ಕುಟುಂಬವೊಂದರ ಯುವಕನ ಬದುಕಿನ ಹಲವು ರೋಚಕ ಘಟ್ಟಗಳನ್ನು 'ರತ್ನನ್ ಪ್ರಪಂಚ' ಒಳಗೊಂಡಿದೆ ಎಂಬುದು ಟ್ರೈಲರ್ನಲ್ಲಿ ಗೊತ್ತಾಗಿತ್ತು. ಇದೀಗ ಸಿನಿಮಾ ತೆರೆಕಂಡಿದೆ. ರೋಹಿತ್ ಪದಕಿ ನಿರ್ದೇಶನದ ಎರಡನೇ ಸಿನಿಮಾ ಇದಾಗಿದ್ದು, ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ರಂಜಿಸಿದೆ? 'ರತ್ನನ್ ಪ್ರಪಂಚ'ದ ಒಳಗೆ ಏನೇನಿದೆ? ಮುಂದೆ ಓದಿ.
ರತ್ನಾಕರನ ಎಮೋಷನಲ್ ಅಲೆದಾಟ
ಇನ್ಶುರೆನ್ಸ್ ಏಜೆಂಟ್ ರತ್ನಾಕರನಿಗೆ (ಧನಂಜಯ) ಬದುಕಿನಲ್ಲಿ ಹಲವಾರು ತೊಡಕುಗಳು. ಹಠಮಾರಿಯಂತಹ ಅಮ್ಮ ಸರೋಜಾ (ಉಮಾಶ್ರೀ) ಜೊತೆಗೆ ಸದಾ ಕಿರಿಕ್ಕು. ಸರೋಜಾಳ ಒರಟು, ಹಠಮಾರಿತನದ ಒಳಗೂ ಮಗನ ಮೇಲೊಂದು ಅಪಾರವಾದ ಮುಗ್ಧ ಪ್ರೀತಿ ಇದೆ. ಅದು ರತ್ನನಿಗೆ ಕನೆಕ್ಟ್ ಆಗುತ್ತಿಲ್ಲ. ತಮ್ಮ ರಘು ಮದುವೆ ಆಗಿ ಹೆಂಡ್ತಿ, ಮಗುವಿನೊಂದಿಗೆ ಸಂಸಾರ ನಡೆಸುತ್ತಿದ್ದರೂ ರತ್ನನಿಗೆ ಗುರು ಬಲ ಕೂಡಿ ಬಂದಿಲ್ಲ! ಒಂದಿಲ್ಲೊಂದು ಸಮಸ್ಯೆಗಳು ಆಫೀಸ್ ಐಡಿ ಕಾರ್ಡ್ನಂತೆ ರತ್ನನ ಕುತ್ತಿಗೆಗೆ ಜೋತುಬಿದ್ದಿವೆ. ಹತಾಶೆಯ ತುತ್ತತುದಿ ತಲುಪಿದ್ದಾನೆ ರತ್ನಾಕರ! ಇಂಥ ಟೈಮ್ನಲ್ಲಿ ಆತನ ಬಾಳಿಗೆ ಎಂಟ್ರಿ ನೀಡುವ ಮಯೂರಿ (ರೆಬಾ ಮೋನಿಕಾ) ದೆಸೆಯಿಂದಾಗಿ ರತ್ನಾಕರ ಬದುಕಿನಲ್ಲಿ ಎದುರಾಗುವ ತಿರುವುಗಳು ಒಂದೆರಡಲ್ಲ! ಅಲ್ಲಿಂದ ಶುರುವಾಗುವುದೇ ರತ್ನನ ನಿಜವಾದ ಹುಡುಕಾಟ. ತನ್ನನ್ನು ತಾನೇ ಹುಡುಕಿಕೊಳ್ಳುತ್ತ, ತನ್ನ ಅಸ್ತಿತ್ವ ಹುಡುಕುತ್ತ, ತನ್ನವರನ್ನೂ ಹುಡುಕುತ್ತ ಸಾಗುತ್ತದೆ ರತ್ನನ ಹುಡುಕಾಟ!
'ದಯವಿಟ್ಟು ಗಮನಿಸಿ' ಥರದ ಪ್ರಯೋಗಾತ್ಮಕ ಸಿನಿಮಾ ಮಾಡಿ ಗಮನಸೆಳೆದಿದ್ದ ನಿರ್ದೇಶಕ ರೋಹಿತ್ ಪದಕಿ, ಈ ಬಾರಿ ಒಂದು ಎಮೋಷನಲ್ ಕಾಮಿಡಿ ಸಬ್ಜೆಕ್ಟ್ ಆಯ್ದುಕೊಂಡಿದ್ದಾರೆ. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..' ಎನ್ನುವಂತೆ ರತ್ನಾಕರನನ್ನು ಹಲವು ಕಡೆ ಅಲೆದಾಡಿಸಿದ್ದಾರೆ. ಇದ್ದುದರಲ್ಲೇ ಈ ಕಥೆಯ ಆಯ್ಕೆ ವಿಭಿನ್ನವಾಗಿದೆ. ಆದರೆ, ಚಿತ್ರಕಥೆಯಲ್ಲಿ ಇನ್ನಷ್ಟು ಗಟ್ಟಿತನ ಬೇಕಿತ್ತು ಎನಿಸುವುದು ಸುಳ್ಳಲ್ಲ. ಒಮ್ಮೊಮ್ಮೆ ಕಥೆಯು ಅತ್ತ ಕಾಮಿಡಿಯೂ ಆಗದೇ, ಇತ್ತ ಭಾವುಕತೆಯನ್ನು ಸೃಷ್ಟಿಸದೇ ಎತ್ತೆತ್ತಲೋ ಸಾಗುತ್ತದೆ. ಕಾಶ್ಮೀರದಲ್ಲಿ ಬರುವ ರವಿಶಂಕರ್ ಪಾತ್ರ ನಾಟಕೀಯ ಎನಿಸುತ್ತದೆ. ಉಡಾಳ್ ಬಾಬುವಿನ ಸುತ್ತಮುತ್ತ ಇರುವವರು ಕೊಡುವ ಬಿಲ್ಡಪ್ ಕೊಂಚ ಹೆಚ್ಚಾಯಿತೇನೋ ಎಂದು ಭಾಸವಾಗುತ್ತದೆ. ರತ್ನಾಕರನೊಂದಿಗೆ ಹುಡುಕಾಟದಲ್ಲಿ ಭಾಗಿಯಾಗುವ ನಾಯಕಿ ಪಾತ್ರಕ್ಕೆ ಇನ್ನಷ್ಟು ಸ್ಟ್ರಾಂಗ್ ಬುನಾದಿ ಬೇಕಿತ್ತು ಎನಿಸುತ್ತದೆ. ಇದರ ಹೊರತಾಗಿ ಸಿನಿಮಾದಲ್ಲಿನ ಕೆಲವೊಂದು ರೂಪಕಗಳು ಖುಷಿ ನೀಡುತ್ತವೆ ಮತ್ತು ಚಿಂತನೆಗೆ ಹಚ್ಚುತ್ತವೆ. ಸಂಬಂಧಗಳಿಗೆ ಹೊಸ ಅರ್ಥ ಹುಡುಕುವ ಪ್ರಯತ್ನ ಖುಷಿ ನೀಡುತ್ತದೆ.
ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿದೆ. ಶ್ರೀಶ ಕುದುವಳ್ಳಿ, ತಮ್ಮ ಕ್ಯಾಮೆರಾ ಮೂಲಕ ಬೆಂಗಳೂರಿನ ಮಿಡಲ್ ಕ್ಲಾಸ್ ಬದುಕನ್ನು, ಕಾಶ್ಮೀರದ ಹಿಮದ ಬಿಳುಪನ್ನು, ಉತ್ತರ ಕರ್ನಾಟಕದ ಬಯಲು ಸೀಮೆಯನ್ನು ಸಮರ್ಥವಾಗಿ ಸೆರೆಹಿಡಿದಿದ್ದಾರೆ. ಹಾಡುಗಳ ಮೂಲಕ ಅಷ್ಟೇನೂ ಸ್ಕೋರ್ ಮಾಡದ ಅಜನೀಶ್ ಲೋಕನಾಥ್, ಹಿನ್ನೆಲೆ ಸಂಗೀತದ ಮೂಲಕ ಟಾಪ್ ಎನಿಸಿಕೊಂಡುಬಿಡುತ್ತಾರೆ. ಸಂಭಾಷಣೆ ಇಡೀ ಸಿನಿಮಾದ ದೊಡ್ಡ ಹೈಲೈಟ್. 'ಯಾಕಪ್ಪ, ಏನಾದ್ರು ಮರ್ತು ಹೋಗಿಯೇನಾ?.. ಮೈಮರ್ತು ಹೋದ್ನೇ ಯವ್ವಾ..'- ಉತ್ತರ ಕರ್ನಾಟಕದ ಸೊಗಡಿನ ಇಂಥ ಹಲವು ಸಂಭಾಷಣೆಗಳು ಮನಮುಟ್ಟುತ್ತದೆ.
ಅಚ್ಚುಕಟ್ಟಾದ ಕಲಾವಿದರ ಅಭಿನಯ
ನಟ ಧನಂಜಯ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿದ್ದು 'ಟಗರು' ಚಿತ್ರದ ಡಾಲಿ ಪಾತ್ರ. ಆ ಮೂಲಕ ಅವರು ನಟ ರಾಕ್ಷಸ ಎನಿಸಿಕೊಂಡರು. ಹಾಗೇ ನೋಡಿದ್ರೆ, 'ರತ್ನನ್ ಪ್ರಪಂಚ' ಧನು ಕರಿಯರ್ಗೆ ಮತ್ತೊಂದು ತಿರುವು. ನಟ ರಾಕ್ಷಸ ಎನಿಸಿಕೊಂಡವರು, ಇಲ್ಲಿ 'ನಟ ರತ್ನ' ಎನಿಸಿಕೊಳ್ಳುತ್ತಾರೆ. ಈಚೆಗೆ ಅವರು ಮಾಡಿದ ಡಾಲಿ, ಸಾಮ್ರಾಟ್, ಟೈಗರ್ ಸೀನ, ಆಂಟನಿ ಜೋಸೇಫ್... ಈ ಯಾವ ಪಾತ್ರಗಳ ಶೇಡ್ ಕೂಡ 'ರತ್ನನ್ ಪ್ರಪಂಚ'ದಲ್ಲಿ ಕಾಣಸಿಗೋದಿಲ್ಲ. ರತ್ನಾಕರನಾಗಿ ಸದಾ ಸೀದಾ ಹುಡುಗನಾಗಿ, ಹುಡುಕಾಟದ ಪರಿಧಿಯಲ್ಲಿ ಅಲೆಯುವ, ಹತಾಶೆಯ ಗೂಡಲ್ಲಿ ಒದ್ದಾಡುವ ಪಾತ್ರದಲ್ಲಿ ಮಿಂದೆದ್ದಿದ್ದಾರೆ. ಅಷ್ಟರ ಮಟ್ಟಿಗೆ ಪಾತ್ರವನ್ನು ಜೀವಿಸಿದ್ದಾರೆ. ಹಲವು ವರ್ಷಗಳಿಂದ ನಟನೆಯತ್ತ ಮುಖ ಮಾಡದ ಉಮಾಶ್ರೀ, ರತ್ನನ್ ಪ್ರಪಂಚದ ಸರೋಜಮ್ಮನ ಪಾತ್ರದಲ್ಲಿ ಜಗಮಗಿಸಿದ್ದಾರೆ. ಚಿತ್ರದ ಪ್ರಥಮಾರ್ಧದಲ್ಲಿ ಉಮಾಶ್ರೀ ಆವರಿಸಿಕೊಳ್ಳುತ್ತಾರೆ. ತಮಾಷೆ, ಹಠ, ಒರಟು, ಸಿಟ್ಟು, ವಾಚಾಳಿ, ಭಾವುಕ.. ಹೀಗೆ ನಾನಾ ರೂಪದಲ್ಲಿ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ.
ಬಣ್ಣದ ಲೋಕಕ್ಕೆ ಮರಳಿದ ನಟಿ ಉಮಾಶ್ರೀ; 'ರತ್ನನ್ ಪ್ರಪಂಚ'ದಲ್ಲಿ ಡಾಲಿಗೆ ಅಮ್ಮನಾದ 'ಪುಟ್ಮಲ್ಲಿ'
ಪ್ರಮೋದ್ ಎಂಬ ಅಚ್ಚರಿ'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ಗಮನಸೆಳೆದಿದ್ದ ಪ್ರಮೋದ್ ಇಲ್ಲಿ ಉಡಾಳ್ ಬಾಬು ರಾವ್ ಎಂಬ ಪಾತ್ರದ ಮೂಲಕ ದ್ವಿತಿಯಾರ್ಧವನ್ನು ಆವರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ರಗಡ್ ಯುವಕನಾಗಿ ಅವರ ನಟನೆ ಖುಷಿ ಕೊಡುತ್ತದೆ. ಬಯಲು ಸೀಮೆ ಸೊಗಡಿನ ಖಡಕ್ ಸಂಭಾಷಣೆ ಹೇಳುತ್ತ ಮಿಂಚುವ ಅವರು, ನೋಡುಗರನ್ನು ಅಳಿಸುವ ಕೆಲಸವನ್ನೂ ಮಾಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಪ್ರಮೋದ್ಗೆ ದೊಡ್ಡ ಭವಿಷ್ಯ ಇದೆ ಅನ್ನೋದು ಗೊತ್ತಾಗುತ್ತದೆ. ಹಾಗೆಯೇ ಯಲ್ಲವ್ವಳಾಗಿ ಶ್ರುತಿ ಅವರದ್ದು ಎಮೋಷನಲ್ ನಟನೆ. ಅಚ್ಯುತ್ ಕುಮಾರ್, ಅನು ಪ್ರಭಾಕರ್, ಜಹಾಂಗೀರ್, ದಾನಪ್ಪ, ಬಿರಾದರ್, ಅಕ್ಕಯ್ಯ ಪದ್ಮಾಶಾಲಿ, ಅಶೋಕ್, ದಿವ್ಯಾ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ರೆಬಾ ಮೋನಿಕಾ ಕನ್ನಡಕ್ಕೆ ಸಿಕ್ಕಿದ ಭರವಸೆಯ ನಟಿ.