ಆ್ಯಪ್ನಗರ

ತ್ರಿಶಾ ಬಗ್ಗೆ ಹರಡಿರುವುದು ಹಸಿ ಸುಳ್ಳು ಸುದ್ದಿ: ಉಮಾ ಕೃಷ್ಣನ್ ಕೆಂಡಾಮಂಡಲ!

'ರಂಗಿ' ಚಿತ್ರವನ್ನು ಮುರುಗದಾಸ್ ಸಹಾಯಕ ನಿರ್ದೇಶಕ ಸರವಣನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು ಸಂಪೂರ್ಣವಾಗಿ ಸ್ತ್ರೀ ಪ್ರಧಾನ ಸಿನಿಮಾ ಆಗಿದ್ದು ಈ ಚಿತ್ರದಲ್ಲಿ ಕೆಲವು ಹೆಣ್ಣಿನ ಬಹುಮುಖ್ಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಚಿತ್ರವು ಸದ್ಯಕ್ಕೆ ಭರ್ಜರಿ ಶೂಟಿಂಗ್‌ ನಡೆಸುತ್ತಿದೆ.

Vijaya Karnataka Web 3 May 2019, 10:19 am
ಸೌತ್ ಇಂಡಿಯನ್ ಬ್ಯೂಟಿ ತ್ರಿಶಾಗೆ ಇತ್ತೀಚೆಗೆ '96' ಸಿನಿಮಾದ ಮೂಲಕ ಹೆಚ್ಚು ಯಶಸ್ಸು ಸಿಕ್ಕಿದೆ. ಈಗ ಅವರು ಹೆಚ್ಚಾಗಿ ನಾಯಕಿ ಪ್ರಧಾನ ಚಿತ್ರಗಳಲ್ಲೇ ನಟಿಸಲು ಇಷ್ಟಪಡುತ್ತಿದ್ದಾರೆ ಎನ್ನಲಾಗಿದೆ. ತ್ರಿಶಾ ನಟನೆಯ ಮುಂಬರುವ 'ರಂಗಿ' ಚಿತ್ರದಲ್ಲಿ ಕೂಡ ಅವರು ನಾಯಕಿ ಪ್ರಧಾನ ಪಾತ್ರದಲ್ಲೇ ಕಾಣಿಸಿಕೊಂಡಿದ್ದು, ನಿರ್ದೇಶಕ ಎಆರ್ ಮುರುಗಾದಾಸ್ ಈ ಚಿತ್ರಕ್ಕಾಗಿ ಚಿತ್ರಕಥೆಯನ್ನು ಒದಗಿಸಿದ್ದಾರೆ.
Vijaya Karnataka Web trisha0305


ಅಚ್ಚರಿ ಎಂಬಂತೆ, 'ರಂಗಿ' ಶೂಟಿಂಗ್ ಸೆಟ್ಟಲ್ಲಿ ತ್ರಿಶಾ ತಲೆಸುತ್ತಿ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿ ಸಾಕಷ್ಟು ಕಡೆ ಹಬ್ಬಿದೆ. ರಂಗಿ ಚಿತ್ರತಂಡದ ಕಡೆಯಿಂದ ಈ ಸುದ್ದಿಯನ್ನು ಯಾರೊಬ್ಬರೂ ದೃಢೀಕರಿಸಿಲ್ಲ. ಆದರೆ ಸಾಮಾಜಿಕ ಮಾಧ್ಯಮವು ತ್ರಿಶಾ ಅನಾರೋಗ್ಯ ಸ್ಥಿತಿಯ ಬಗ್ಗೆ ಬಲವಾಗಿ ಮಾತನಾಡುತ್ತಿದೆ.

ತ್ರಿಶಾ ಅವರ ತಾಯಿ ಉಮಾ ಕೃಷ್ಣನ್, ಈ ವದಂತಿಗಳನ್ನು ತಳ್ಳಿ ಹಾಕುವ ಮೂಲಕ ಇದಕ್ಕೊಂದು ಫುಲ್ ಸ್ಟಾಪ್ ನೀಡಲು ಯೋಚಿಸಿದ್ದಾರೆ. "ತ್ರಿಶಾ ಆರೋಗ್ಯವಾಗಿದ್ದಾಳೆ. ಆಗಿರುವ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ತ್ರಿಶಾ ಸಂಪೂರ್ಣವಾಗಿ ಚೆನ್ನಾಗಿದ್ದಾಳೆ. ಚಿತ್ರಕ್ಕಾಗಿ ಅವರು ದಿನ ಮತ್ತು ರಾತ್ರಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಶೂಟಿಂಗ್ ಚೆನ್ನಾಗಿ ಬರುತ್ತಿದೆ ಕೂಡ" ಎಂದು ತ್ರಿಶಾ ತಾಯಿ ಉಮಾಕೃಷ್ಣನ್ ಅವರು ಹೇಳಿದ್ದಾರೆ.

ಅಂದಹಾಗೆ, 'ರಂಗಿ' ಚಿತ್ರವನ್ನು ಮುರುಗದಾಸ್ ಸಹಾಯಕ ನಿರ್ದೇಶಕ ಸರವಣನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು ಸಂಪೂರ್ಣವಾಗಿ ಸ್ತ್ರೀ ಪ್ರಧಾನ ಸಿನಿಮಾ ಆಗಿದ್ದು ಈ ಚಿತ್ರದಲ್ಲಿ ಕೆಲವು ಹೆಣ್ಣಿನ ಬಹುಮುಖ್ಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಚಿತ್ರವು ಸದ್ಯಕ್ಕೆ ಭರ್ಜರಿ ಶೂಟಿಂಗ್‌ ನಡೆಸುತ್ತಿದ್ದು, ಆದಷ್ಟು ಬೇಗ ಶೂಟಿಂಗ್ ಮುಗಿಸಿ ತೆರೆಗೆ ತರಲು ಚಿತ್ರತಂಡ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌