ಮಗು ಚಿವುಟಿ ಕಣ್ಣೊರೆಸುವ ತಂತ್ರ ರೈತರ ಬಂಧನಕ್ಕೆ ಸಂಘಟನೆಗಳಿಂದ ತೀವ್ರ ಆಕ್ರೋಶ
* ಪ್ರಮೋದ ಹರಿಕಾಂತ ಬೆಳಗಾವಿ
ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಬೃಹತ್ ಸಂಖ್ಯೆಯಲ್ಲಿ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರ ಮೂಲಕ ಗ್ರಾಮ ಮಟ್ಟದಲ್ಲಿಯೇ ಬಂಧಿಸಿದ ರಾಜ್ಯ ಸರಕಾರ ಕೊನೆಗೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.
ರಾಜ್ಯದ ನಾನಾ ಭಾಗಗಳಿಂದ ಬೆಳಗಾವಿಗೆ ಆಗಮಿಸಿ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ಉದ್ದೇಶಿಸಿದ್ದರು. ಆದರೆ, ಪೊಲೀಸರು ಭಾನುವಾರ ಮಧ್ಯಾಹ್ನದಿಂದಲೇ ಸವದತ್ತಿ, ಗೋಕಾಕ, ಚಿಕ್ಕೋಡಿ, ಅಥಣಿ, ನಿಪ್ಪಾಣಿ, ರಾಯಬಾಗ, ಖಾನಾಪುರ ಹೀಗೆ ಎಲ್ಲ ತಾಲೂಕುಗಳ ರೈತ ಮುಖಂಡರನ್ನು ಠಾಣೆಗೆ ಕರೆದೊಯ್ದರು. ಕೆಲವರನ್ನು ಮನೆಗೆ ಹೋಗಿ ವಶಕ್ಕೆ ತೆಗೆದುಕೊಂಡರು. ಭಾನುವಾರ ರಾತ್ರಿ ಸುಮಾರು 11ರವರೆಗೆ ಈ ಪ್ರಕ್ರಿಯೆ ನಡೆಯಿತು.
ಸೋಮವಾರ ಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುತ್ತಿದ್ದ ರೈತರನ್ನು ಪೊಲೀಸರು ಟೋಲ್ ಗೇಟ್, ರೈಲು ನಿಲ್ದಾಣ, ಹೆದ್ದಾರಿಗಳಲ್ಲೇ ತಡೆದರು. ಕೆಲವರನ್ನು ಬಂಧಿಸಿ ಠಾಣೆಯಲ್ಲಿಟ್ಟರು. ಬೆಳಗಾವಿಯ ಅಥಣಿ, ಗೋಕಾಕ, ಖಾನಾಪುರ, ಬೈಲಹೊಂಗಲ ತಾಲೂಕಿನಲ್ಲಿ ಸಾವಿರಾರು ರೈತರನ್ನು ತಡೆದು ದಿಗ್ಬಂಧನ ಹಾಕಲಾಯಿತು. ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ರಾಯಚೂರು ಜಿಲ್ಲೆಗಳಿಂದ ಸುಮಾರು 500 ಕ್ಕೂ ಹೆಚ್ಚು ರೈತರು ರೈಲಿನ ಮೂಲಕ ಬೆಳಗಾವಿಗೆ ಬಂದರು. ಈ ರೈತರನ್ನು ಪೊಲೀಸರು ರೈಲು ನಿಲ್ದಾಣದಲ್ಲಿಯೇ ತಡೆದರು. ಆದರೆ, ಕೆಲವು ರೈತರು ಪೊಲೀಸರ ಕಣ್ಣು ತಪ್ಪಿಸಿ ಹೋರಾಟ ಸ್ಥಳ ತಲುಪಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದರು. ಆಗ ಐಜಿಪಿ ರಾಮಚಂದ್ರರಾವ್ ರೈತರೊಂದಿಗೆ ಸಂಧಾನ ಸಭೆ ನಡೆಸಿದರು. ಅದೂ ವಿಫಲವಾಯಿತು. ರೈತರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು. ಆಗ ರೈತರು-ಪೊಲೀಸರ ನಡುವೆ ವಾಗ್ವಾದ ನಡೆಯಿತು. ಸಂಜೆ ಸ್ಥಳಕ್ಕೆ ಬಂದ ಸಚಿವರಾದ ಮಹದೇವಪ್ರಸಾದ್ ಮತ್ತು ಕೃಷ್ಣಬೈರೇಗೌಡ, ರೈತರನ್ನು ಬಂಧಿಸಿದ್ದಕ್ಕೆ ವಿಷಾದಿಸುತ್ತೇವೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತುಕತೆಗೆ ಬರುವಂತೆ ರೈತ ಮುಖಂಡರನ್ನು ಆಹ್ವಾನಿಸಿದರು.
ರೈತ ಮುಖಂಡರ ಜತೆ ಸಿಎಂ ಚರ್ಚೆ
ಮುಖ್ಯಮಂತ್ರಿ ಸುವರ್ಣ ವಿಧಾನಸೌಧದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕುರುಬೂರು ಶಾಂತಕುಮಾರ್ ನೇತೃತ್ವದ ರೈತರ ನಿಯೋಗಗಳೊಂದಿಗೆ ಪ್ರತ್ಯೇಕವಾಗಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಶಾಂತ್ಕುಮಾರ್ ನೇತೃತ್ವದ ನಿಯೋಗವು ಕಬ್ಬುಬೆಳೆಗಾರರ ಸಮಸ್ಯೆ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾಗಿರುವ ಬಾಕಿ ಹಣವೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಟ್ಟಿತು. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂದು ಕೋಡಿಹಳ್ಳಿ ನೇತೃತ್ವದ ನಿಯೋಗ ಮನವಿ ಮಾಡಿತು. ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ಸರಕಾರದ ನೆರವು ಅಗತ್ಯವಿದ್ದು ಸದ್ಯದಲ್ಲೇ ಈ ಸಂಬಂಧ ಪ್ರಧಾನಿ ಅವರನ್ನು ಸರ್ವಪಕ್ಷಗಳ ನಿಯೋಗದಲ್ಲಿ ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
* ಪ್ರಮೋದ ಹರಿಕಾಂತ ಬೆಳಗಾವಿ
ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಬೃಹತ್ ಸಂಖ್ಯೆಯಲ್ಲಿ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರ ಮೂಲಕ ಗ್ರಾಮ ಮಟ್ಟದಲ್ಲಿಯೇ ಬಂಧಿಸಿದ ರಾಜ್ಯ ಸರಕಾರ ಕೊನೆಗೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.
ರಾಜ್ಯದ ನಾನಾ ಭಾಗಗಳಿಂದ ಬೆಳಗಾವಿಗೆ ಆಗಮಿಸಿ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ಉದ್ದೇಶಿಸಿದ್ದರು. ಆದರೆ, ಪೊಲೀಸರು ಭಾನುವಾರ ಮಧ್ಯಾಹ್ನದಿಂದಲೇ ಸವದತ್ತಿ, ಗೋಕಾಕ, ಚಿಕ್ಕೋಡಿ, ಅಥಣಿ, ನಿಪ್ಪಾಣಿ, ರಾಯಬಾಗ, ಖಾನಾಪುರ ಹೀಗೆ ಎಲ್ಲ ತಾಲೂಕುಗಳ ರೈತ ಮುಖಂಡರನ್ನು ಠಾಣೆಗೆ ಕರೆದೊಯ್ದರು. ಕೆಲವರನ್ನು ಮನೆಗೆ ಹೋಗಿ ವಶಕ್ಕೆ ತೆಗೆದುಕೊಂಡರು. ಭಾನುವಾರ ರಾತ್ರಿ ಸುಮಾರು 11ರವರೆಗೆ ಈ ಪ್ರಕ್ರಿಯೆ ನಡೆಯಿತು.
ಸೋಮವಾರ ಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುತ್ತಿದ್ದ ರೈತರನ್ನು ಪೊಲೀಸರು ಟೋಲ್ ಗೇಟ್, ರೈಲು ನಿಲ್ದಾಣ, ಹೆದ್ದಾರಿಗಳಲ್ಲೇ ತಡೆದರು. ಕೆಲವರನ್ನು ಬಂಧಿಸಿ ಠಾಣೆಯಲ್ಲಿಟ್ಟರು. ಬೆಳಗಾವಿಯ ಅಥಣಿ, ಗೋಕಾಕ, ಖಾನಾಪುರ, ಬೈಲಹೊಂಗಲ ತಾಲೂಕಿನಲ್ಲಿ ಸಾವಿರಾರು ರೈತರನ್ನು ತಡೆದು ದಿಗ್ಬಂಧನ ಹಾಕಲಾಯಿತು. ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ರಾಯಚೂರು ಜಿಲ್ಲೆಗಳಿಂದ ಸುಮಾರು 500 ಕ್ಕೂ ಹೆಚ್ಚು ರೈತರು ರೈಲಿನ ಮೂಲಕ ಬೆಳಗಾವಿಗೆ ಬಂದರು. ಈ ರೈತರನ್ನು ಪೊಲೀಸರು ರೈಲು ನಿಲ್ದಾಣದಲ್ಲಿಯೇ ತಡೆದರು. ಆದರೆ, ಕೆಲವು ರೈತರು ಪೊಲೀಸರ ಕಣ್ಣು ತಪ್ಪಿಸಿ ಹೋರಾಟ ಸ್ಥಳ ತಲುಪಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದರು. ಆಗ ಐಜಿಪಿ ರಾಮಚಂದ್ರರಾವ್ ರೈತರೊಂದಿಗೆ ಸಂಧಾನ ಸಭೆ ನಡೆಸಿದರು. ಅದೂ ವಿಫಲವಾಯಿತು. ರೈತರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು. ಆಗ ರೈತರು-ಪೊಲೀಸರ ನಡುವೆ ವಾಗ್ವಾದ ನಡೆಯಿತು. ಸಂಜೆ ಸ್ಥಳಕ್ಕೆ ಬಂದ ಸಚಿವರಾದ ಮಹದೇವಪ್ರಸಾದ್ ಮತ್ತು ಕೃಷ್ಣಬೈರೇಗೌಡ, ರೈತರನ್ನು ಬಂಧಿಸಿದ್ದಕ್ಕೆ ವಿಷಾದಿಸುತ್ತೇವೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತುಕತೆಗೆ ಬರುವಂತೆ ರೈತ ಮುಖಂಡರನ್ನು ಆಹ್ವಾನಿಸಿದರು.
ರೈತ ಮುಖಂಡರ ಜತೆ ಸಿಎಂ ಚರ್ಚೆ
ಮುಖ್ಯಮಂತ್ರಿ ಸುವರ್ಣ ವಿಧಾನಸೌಧದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕುರುಬೂರು ಶಾಂತಕುಮಾರ್ ನೇತೃತ್ವದ ರೈತರ ನಿಯೋಗಗಳೊಂದಿಗೆ ಪ್ರತ್ಯೇಕವಾಗಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಶಾಂತ್ಕುಮಾರ್ ನೇತೃತ್ವದ ನಿಯೋಗವು ಕಬ್ಬುಬೆಳೆಗಾರರ ಸಮಸ್ಯೆ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾಗಿರುವ ಬಾಕಿ ಹಣವೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಟ್ಟಿತು. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂದು ಕೋಡಿಹಳ್ಳಿ ನೇತೃತ್ವದ ನಿಯೋಗ ಮನವಿ ಮಾಡಿತು. ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ಸರಕಾರದ ನೆರವು ಅಗತ್ಯವಿದ್ದು ಸದ್ಯದಲ್ಲೇ ಈ ಸಂಬಂಧ ಪ್ರಧಾನಿ ಅವರನ್ನು ಸರ್ವಪಕ್ಷಗಳ ನಿಯೋಗದಲ್ಲಿ ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.