ಆ್ಯಪ್ನಗರ

ಜೈಲಿಗೆ ಹೋಗೋದು, ಬಿಜೆಪಿ ಸಂಸ್ಕೃತಿ: ಸಿಎಂ

'ಕಾಂಗ್ರೆಸ್‌ನ ಕೆಲ ನಾಯಕರು. ಜೈಲಿಗೆ ಹೋಗುತ್ತಾರೆ ಎಂದು ಬಿಜೆಪಿ ನಾಯಕ ಮುರಳೀಧರ ಹೇಳಿರಬಹುದು. ಆದರೆ, ಅದು ಬಿಜೆಪಿ ಸಂಸ್ಕೃತಿ,' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿಕ ಸುದ್ದಿಲೋಕ 7 May 2017, 3:35 pm
ಹುಬ್ಬಳ್ಳಿ: ಬರ ಪರಿಹಾರಕ್ಕೆ ಕೇಂದ್ರ ಸರಕಾರ ನೀಡಿದ ದುಡ್ಡನ್ನೇ ರಾಜ್ಯ ಸರಕಾರ ಖರ್ಚು ಮಾಡಿಲ್ಲ ಎಂಬ ಬಿಜೆಪಿ ನಾಯಕರ ಆರೋಪ ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web going to jail is bjp culture cm
ಜೈಲಿಗೆ ಹೋಗೋದು, ಬಿಜೆಪಿ ಸಂಸ್ಕೃತಿ: ಸಿಎಂ


'ನಾವು 4700 ಕೋಟಿ ರೂ. ಪರಿಹಾರ ಕೇಳಿದ್ದೆವು, ಆದರೆ, ಕೇಂದ್ರ ನೀಡಿದ್ದು ಕೇವಲ 1700ಕೋಟಿ ರೂ. ಇದರಲ್ಲಿ 1300 ಕೋಟಿ ರೂ. ಪರಿಹಾರಕ್ಕೆ ಖರ್ಚಾಗಿದೆ. ಇನ್ನು ಹಿಂಗಾರು ಬರ ಪರಿಹಾರಕ್ಕೆ 3300 ಕೋಟಿ ರೂ. ಕೇಳಿದ್ದರೂ, ಅದಿನ್ನೂ ಬಂದಿಲ್ಲ,'ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟ ಸಚಿವರು ಇದ್ದಾರೆ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ನಾಯಕ ಮುರಳಿಧರನ್ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, 'ಕಾಂಗ್ರೆಸ್‌ನ ಕೆಲ ನಾಯಕರು. ಜೈಲಿಗೆ ಹೋಗುತ್ತಾರೆ ಎಂದು ಬಿಜೆಪಿ ನಾಯಕ ಹೇಳಿರಬಹುದು. ಆದರೆ, ಅದು ಬಿಜೆಪಿ ಸಂಸ್ಕೃತಿ,' ಎಂದರು.

ರಾಹುಲ್‌ ಗಾಂಧಿ ಅವರನ್ನು ಹೊರಗಿಟ್ಟು ಚುನಾವಣೆ ಮಾಡುತ್ತಾರೆ ಎಂಬ ವರದಿ ಬಗ್ಗೆ ಪ್ರಶ್ನಿಸಿದಾಗ, ಸಿದ್ದರಾಮಯ್ಯ ಸಿಡಿಮಿಡಿಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ