ಹೊಸದಿಲ್ಲಿ: ಉಕ್ರೇನ್ ಮೇಲೆ ರಷ್ಯಾ ಅಧ್ಯಕ್ಷ ವಾಡ್ಲಿಮರ್ ಪುಟಿನ್ ಯುದ್ಧ ಘೋಷಿಸಿದ್ದು, ಜಗತ್ತು ಆತಂಕದಲ್ಲಿದೆ. ಈ ವೇಳೆ ಉಕ್ರೇನ್ನಲ್ಲಿದ್ದ ಭಾರತೀಯರನ್ನು ಮೊದಲ ಹಂತದಲ್ಲಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದ್ದು, 182 ಭಾರತೀಯರನ್ನು ಹೊತ್ತ ವಿಶೇಷ ವಿಮಾನ ದಿಲ್ಲಿಗೆ ಬಂದು ತಲುಪಿದೆ. ಭಾರತೀಯರಿರುವ ಮೊದಲ ವಿಶೇಷ ವಿಮಾನ ಇದಾಗಿದ್ದು, ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ ಅಂತಾರಾಷ್ಟ್ರೀಯ ಏರ್ಲೈನ್ಸ್ನ ಪ್ರತಿನಿಧಿಗಳು ತಿಳಿಸಿದ್ದಾರೆ. ಇನ್ನು, ಕೀವ್ನಿಂದ ಬಂದ ವಿಮಾನ ಗುರುವಾರ ಬೆಳಗ್ಗೆ 7.45ಕ್ಕೆ ದಿಲ್ಲಿ ವಿಮಾನ ನಿಲ್ದಾಣ ತಲುಪಿದ್ದು, ವಿದ್ಯಾರ್ಥಿಗಳು ಸೇರಿ 182 ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ಬಂದಿದ್ದಾರೆ.