ಆ್ಯಪ್ನಗರ

ಯೂನಿಯನ್‌ ಬ್ಯಾಂಕ್‌ನಲ್ಲಿ ಜಾಬ್ಸ್‌

ಸ್ಪೆಷಲಿಸ್ಟ್‌ ಆಫೀಸರ್‌ ಕೇಡರ್‌ನ 181 ಹುದ್ದೆಗಳಿಗೆ ಅರ್ಜಿ ಆಹ್ವಾನ

Vijaya Karnataka 19 Mar 2019, 5:00 am
Vijaya Karnataka Web union bank

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 29, 2019
  • ರಾಜ್ಯದಲ್ಲಿನ ಪರೀಕ್ಷಾ ಕೇಂದ್ರ: ಬೆಂಗಳೂರು
ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾಗಿರುವ 'ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ' ಸ್ಪೆಷಲಿಸ್ಟ್‌ ಆಫೀಸರ್‌ ಕೇಡರ್‌ನ 181 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್‌ 29 ಕೊನೆಯ ದಿನವಾಗಿದೆ.

ಹುದ್ದೆ ಮತ್ತು ಅರ್ಹತೆ
ಫೈರ್‌ ಆಫೀಸರ್‌ (01 ಹುದ್ದೆ): ಅಭ್ಯರ್ಥಿಗಳು ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿರಬೇಕು ಮತ್ತು ಬ್ಯಾಂಕಿಂಗ್‌ ಇಂಡಸ್ಟ್ರೀ/ ಫೈರ್‌ ಸವೀರ್‍ಸಸ್‌ ವಿಭಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಎಕನಾಮಿಸ್ಟ್‌ (06 ಹುದ್ದೆ): ಎಕನಾಮಿಕ್ಸ್‌ನಲ್ಲಿ ಪದವಿ ಪಡೆದಿರುವ ಮತ್ತು ಮೂರು ವರ್ಷ ಎಕನಾಮಿಸ್ಟ್‌/ಅನಾಲಿಸ್ಟ್‌ ಆಗಿ ಕಾರ್ಯನಿರ್ವಹಿಸಿದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಉತ್ತಮ ಸಂವಹನ ಮತ್ತು ಬರವಣಿಗೆ ಕೌಶಲ ಇರಬೇಕು.
ಸೆಕ್ಯೂರಿಟಿ ಆಫೀಸರ್‌ (19 ಹುದ್ದೆ): ಪದವಿ ವಿದ್ಯಾರ್ಹತೆ ಜೊತೆಗೆ ಐದು ವರ್ಷ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್‌ ಅಥವಾ ಅದಕ್ಕೆ ತತ್ಸಮಾನ ರಾರ‍ಯಂಕ್‌ನಲ್ಲಿ ಕಾರ್ಯನಿರ್ವಹಿಸಿರಬೇಕು. ಏರ್‌ಫೋರ್ಸ್‌ ಆಗಿದ್ದಲ್ಲಿ ಐದು ವರ್ಷ ಕಮೀಷನ್ಡ್‌ ಸವೀರ್‍ಸಸ್‌ನಲ್ಲಿ ಸೇವೆ ಸಲ್ಲಿಸಿರಬೇಕು ಅಥವಾ ಅರೆಸೇನಾ ಪಡೆ/ಕೇಂದ್ರ ಪೊಲೀಸ್‌ ಪಡೆಗಳಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರೂ ಅರ್ಜಿ ಸಲ್ಲಿಸಬಹುದು.
ಇಂಟಿಗ್ರೇಟೆಡ್‌ ಟ್ರಿಸರಿ ಆಫೀಸರ್‌ (15 ಹುದ್ದೆ):
ಪದವಿ ಮತ್ತು ಎಂಬಿಎ/ ಪಿಜಿಡಿಎಂ ಜೊತೆಗೆ ಫೈನಾನ್ಸ್‌/ಅಕೌಂಟಿಂಗ್‌/ಇಂಟರ್‌ನ್ಯಾಷನಲ್‌ ಬಿಸ್ನೆಸ್‌/ಟ್ರೇಡ್‌ ಫೈನಾನ್ಸ್‌ ವಿಷಯಗಳಲ್ಲಿ ತಜ್ಞತೆ ಪಡೆದಿರಬೇಕು. ಸಿಎ/ಐಸಿಡಬ್ಲ್ಯೂಎ/ಸಿಎಫ್‌ಎ/ಎಫ್‌ಆರ್‌ಎಂ ಅಥವಾ ಎಂಎ (ಎಕನಾಮಿಕ್ಸ್‌)/ಎಂಎಸ್‌ (ಎಕನಾಮಿಕ್ಸ್‌)/ಎಂಎಫ್‌ಸಿ ವಿದ್ಯಾರ್ಹತೆ ಇರುವವರೂ ಅರ್ಜಿ ಸಲ್ಲಿಸಲು ಅರ್ಹರು.
ಕ್ರೆಡಿಟ್‌ ಆಫೀಸರ್‌ (122 ಹುದ್ದೆ): ಪದವಿ ಮತ್ತು ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ ಅಥವಾ ಸಿಎ/ಐಸಿಡಬ್ಲ್ಯೂಎ/ಸಿಎಫ್‌ಎ/ಎಫ್‌ಆರ್‌ಎಂ ವ್ಯಾಸಂಗ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಫೊರೆಕ್ಸ್‌ ಆಫೀಸರ್‌ (18 ಹುದ್ದೆ): ಪದವಿ ಮತ್ತು ಎಂಬಿಎ/ಪಿಜಿಡಿಬಿಎ/ ಪಿಜಿಡಿಬಿಎಂ/ ಪಿಜಿಪಿಎಂ/ ಪಿಜಿಡಿಎಂ ಜೊತೆಗೆ ಫೈನಾನ್ಸ್‌/ಇಂಟರ್‌ನ್ಯಾಷನಲ್‌ ಬಿಸ್ನೆಸ್‌/ ಟ್ರೇಡ್‌ ಫೈನಾನ್ಸ್‌ ನಲ್ಲಿ ತಜ್ಞತೆ ಹೊಂದಿರಬೇಕು.
ವಯೋಮಿತಿ: ಫೈರ್‌ ಆಫೀಸರ್‌ ಹುದ್ದೆಗೆ ಕನಿಷ್ಠ ವಯಸ್ಸು 30 ವರ್ಷ ಹಾಗೂ ಗರಿಷ್ಠ ವಯೋಮಿತಿ 40 ವರ್ಷ. ಎಕನಾಮಿಸ್ಟ್‌ ಹುದ್ದೆಗೆ ಕನಿಷ್ಠ 24 ವರ್ಷ ಹಾಗೂ ಗರಿಷ್ಠ ವಯೋಮಿತಿ 35 ವರ್ಷ. ಸೆಕ್ಯೂರಿಟಿ ಆಫೀಸರ್‌ ಹುದ್ದೆಗೆ 26ರಿಂದ 40 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಇನ್ನುಳಿದ ಎಲ್ಲಾ ಹುದ್ದೆಗಳಿಗೆ 23ರಿಂದ 32 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 100 ರೂ. ಹಾಗೂ ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ ಮೂಲಕ ಮಾತ್ರ ಶುಲ್ಕ ಪಾವತಿಸಬಹುದಾಗಿದೆ.
ಆನ್‌ಲೈನ್‌ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ನೇಮಕ ನಡೆಯಲಿದೆ. ಆನ್‌ಲೈನ್‌ ಪರೀಕ್ಷೆಯ ಪರೀಕ್ಷಾ ಕೇಂದ್ರ ಬೆಂಗಳೂರಿನಲ್ಲಿ ಮಾತ್ರ ಇರಲಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ