ಆ್ಯಪ್ನಗರ

ಬ್ರಾಡ್‌ಕಾಸ್ಟ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್‌ ನಲ್ಲಿ ಜಾಬ್ಸ್

ಬ್ರಾಡ್‌ಕಾಸ್ಟ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್‌ ಇಂಡಿಯಾ ಲಿಮಿಟೆಡ್‌ ಸ್ಟೇಷನ್‌ ಕಂಟ್ರೋಲರ್‌, ಜೂನಿಯರ್‌ ಎಂಜಿನಿಯರ್‌ ಸೇರಿದಂತೆ ಖಾಲಿ ಇರುವ 199 ವಿವಿಧ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ.

Vijaya Karnataka 24 Jul 2019, 5:55 pm
  • ಒಟ್ಟು ಹುದ್ದೆಗಳು 199
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್‌ 21, 2019
  • ಅರ್ಜಿ ಸಲ್ಲಿಸುವುದು ಹೇಗೆ?; ಆನ್‌ಲೈನ್‌ ಮೂಲಕ
  • ಹೆಚ್ಚಿನ ವಿವರಗಳಿಗೆ: www.becil.com
ಮಿನಿರತ್ನ ಕಂಪನಿಗಳ ಕೆಟಗರಿಯಲ್ಲಿ ಬರುವ 'ಬ್ರಾಡ್‌ಕಾಸ್ಟ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್‌ ಇಂಡಿಯಾ ಲಿಮಿಟೆಡ್‌' (ಬಿಇಸಿಐಎಲ್‌) ಸ್ಟೇಷನ್‌ ಕಂಟ್ರೋಲರ್‌, ಜೂನಿಯರ್‌ ಎಂಜಿನಿಯರ್‌ ಸೇರಿದಂತೆ ಖಾಲಿ ಇರುವ 199 ವಿವಿಧ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಆಗಸ್ಟ್‌ 21ರ ಗಡುವು ನೀಡಲಾಗಿದೆ.
Vijaya Karnataka Web 1


ಅರ್ಹತೆಗಳೇನು?

ಕಸ್ಟಮರ್‌ ರಿಲೇಷನ್ಸ್‌ ಅಸಿಸ್ಟೆಂಟ್‌: ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.
ಸ್ಟೇಷನ್‌ ಕಂಟ್ರೋಲರ್‌: ವಿಜ್ಞಾನದಲ್ಲಿ ಪದವಿ ಅಥವಾ ಮೂರು ವರ್ಷಗಳ ಎಂಜಿನಿಯರಿಂಗ್‌ ಡಿಪ್ಲೊಮಾ (ಎಲೆಕ್ಟ್ರಿಕಲ್‌ / ಎಲೆಕ್ಟ್ರಾನಿಕ್ಸ್‌/ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಟೆಲಿಕಮ್ಯುನಿಕೇಷನ್‌/ ಸಿವಿಲ್‌/ ಮೆಕ್ಯಾನಿಕಲ್‌/ಐಟಿ/ ಕಂಪ್ಯೂಟರ್‌ ಸೈನ್ಸ್‌) ಮಾಡಿದವರು ಅರ್ಜಿ ಸಲ್ಲಿಸಬಹುದು.
ಜೂನಿಯರ್‌ ಎಂಜಿನಿಯರ್‌: ಎಲೆಕ್ಟ್ರಿಕಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್‌ ಮತ್ತು ಸಿವಿಲ್‌ ವಿಭಾಗದಲ್ಲಿ ಜೂನಿಯರ್‌ ಎಂಜಿನಿಯರ್‌ಗಳ ನೇಮಕ ನಡೆಯಲಿದೆ. ಆಯಾ ವಿಭಾಗಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಮೆಂಟೇನರ್‌: ಫಿಟ್ಟರ್‌, ಎಲೆಕ್ಟ್ರಿಷಿಯನ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಮೆಕ್ಯಾನಿಕ್‌ ಮತ್ತು ಎಸಿ ಮೆಕ್ಯಾನಿಕ್‌ ವಿಭಾಗಗಳಲ್ಲಿ ಮೆಂಟೇನರ್‌ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಯಾ ಟ್ರೇಡ್‌ಗಳಲ್ಲಿ ಐಟಿಐ ಮಾಡಿದವರು ಅರ್ಜಿ ಸಲ್ಲಿಸಬಹುದು.
ಅಕೌಂಟ್ಸ್‌ ಅಸಿಸ್ಟೆಂಟ್‌ ಮತ್ತು ಆಫೀಸ್‌ ಅಸಿಸ್ಟೆಂಟ್‌: ಅಕೌಂಟ್ಸ್‌ ಅಸಿಸ್ಟೆಂಟ್‌ ಹುದ್ದೆಗೆ ಬಿಕಾಂ ಅಥವಾ ಸಿಎ / ಐಸಿಡಬ್ಲ್ಯೂಎ ಮಾಡಿದವರು ಅರ್ಜಿ ಸಲ್ಲಿಸಬಹುದು. ಆಫೀಸ್‌ ಅಸಿಸ್ಟೆಂಟ್‌ ಹುದ್ದೆಯ ಅಭ್ಯರ್ಥಿಗಳು ಬಿಬಿಎ/ ಸಿಸಿಎ ಮಾಡಿರಬೇಕು.
ವಯೋಮಿತಿ: ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೂ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 32 ವರ್ಷ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 675 ರೂ. ಮತ್ತು ಎಸ್‌ಸಿ/ಎಸ್‌ಟಿ/ ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ನಿಗದಿಪಡಿಸಲಾಗಿದೆ. ಇದರೊಂದಿಗೆ ಬ್ಯಾಂಕ್‌ ಸೇವಾ ಶುಲ್ಕ ಕೂಡ ಪಾವತಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ